2A ಮೀಸಲಾತಿ ಕೊಡಿಸಿದ್ರೆ ಕುಂದಾ ತಿನ್ನಿಸ್ತೇನೆ -ಸರ್ಕಾರಕ್ಕೆ ಹೆಬ್ಬಾಳ್ಕರ್ ಓಪನ್​ ಚಾಲೆಂಜ್​

| Updated By: ಸಾಧು ಶ್ರೀನಾಥ್​

Updated on: Oct 28, 2020 | 4:41 PM

ಬೆಳಗಾವಿ: ಪಂಚಮಸಾಲಿ ಸಮಾಜದವರಿಗೆ 2A ಮೀಸಲಾತಿ ಕೊಡಬೇಕು. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದು ಪಕ್ಕಾ ಆಗುತ್ತೆ ಎಂದು ವೇದಿಕೆಯ ಮೇಲೆಯೇ ಇದ್ದ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇಲ್ಲವಾದರೆ ನೀವು ನನಗೆ 4 ಬಂಗಾರದ ಬಳೆ ತಂದುಕೊಡಬೇಕು.. ಇದು ಸಹೋದರಿಯಿಂದ ಸಹೋದರನಿಗೆ ಸವಾಲು ಎಂದ ಲಕ್ಷ್ಮೀ, BSY ಸರ್ಕಾರದಲ್ಲಿ ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಕೊಡಬೇಕು. ನಿಮ್ಮ ಅವಧಿಯಲ್ಲಿ ಕೊಡಿಸಿದರೆ ಕುಂದಾ ತಂದು ತಿನ್ನಿಸುತ್ತೇನೆ. ಇಲ್ಲವಾದರೆ ನೀವು […]

2A ಮೀಸಲಾತಿ ಕೊಡಿಸಿದ್ರೆ ಕುಂದಾ ತಿನ್ನಿಸ್ತೇನೆ -ಸರ್ಕಾರಕ್ಕೆ ಹೆಬ್ಬಾಳ್ಕರ್ ಓಪನ್​ ಚಾಲೆಂಜ್​
Follow us on

ಬೆಳಗಾವಿ: ಪಂಚಮಸಾಲಿ ಸಮಾಜದವರಿಗೆ 2A ಮೀಸಲಾತಿ ಕೊಡಬೇಕು. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದು ಪಕ್ಕಾ ಆಗುತ್ತೆ ಎಂದು ವೇದಿಕೆಯ ಮೇಲೆಯೇ ಇದ್ದ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಇಲ್ಲವಾದರೆ ನೀವು ನನಗೆ 4 ಬಂಗಾರದ ಬಳೆ ತಂದುಕೊಡಬೇಕು..
ಇದು ಸಹೋದರಿಯಿಂದ ಸಹೋದರನಿಗೆ ಸವಾಲು ಎಂದ ಲಕ್ಷ್ಮೀ, BSY ಸರ್ಕಾರದಲ್ಲಿ ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಕೊಡಬೇಕು. ನಿಮ್ಮ ಅವಧಿಯಲ್ಲಿ ಕೊಡಿಸಿದರೆ ಕುಂದಾ ತಂದು ತಿನ್ನಿಸುತ್ತೇನೆ. ಇಲ್ಲವಾದರೆ ನೀವು ನನಗೆ 4 ಬಂಗಾರದ ಬಳೆ ತಂದುಕೊಡಬೇಕು ಎಂದು ವೇದಿಕೆ ಮೇಲೆ ಮುರುಗೇಶ್ ನಿರಾಣಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಓಪನ್​ ಚಾಲೆಂಜ್​ ಹಾಕಿದರು.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ಸುವರ್ಣಸೌಧದ ಎದುರು ಉಪವಾಸ ಸತ್ಯಾಗ್ರಹ ನೆಡೆಯುತ್ತಿದೆ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯುತ್ತಿದ್ದು ಸತ್ಯಾಗ್ರಹದ ವೇಳೆ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿರಾಣಿಗೆ ಈ ಸವಾಲ್​ ಎಸೆದರು.

Published On - 4:39 pm, Wed, 28 October 20