ಮೈಸೂರು ದಸರಾ 2020: ಡಾ. ಸಿ.ಎನ್. ಮಂಜುನಾಥ್​ರಿಂದ ಮಹೋತ್ಸವ ಉದ್ಘಾಟನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಮಹೋತ್ಸವವನ್ನು ಖ್ಯಾತ ವೈದ್ಯ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಡಾ.ಮಂಜುನಾಥ್​ರ ಹೆಸರನ್ನು ಸಿಎಂ ಯಡಿಯೂರಪ್ಪ ಅಂತಿಮಗೊಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಈ ಬಾರಿಯ ದಸರಾ ಮಹೋತ್ಸವವನ್ನು ಕೊರೊನಾ‌ ವಾರಿಯರ್ ಒಬ್ಬರು ಉದ್ಘಾಟನೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಹಾಗಾಗಿ, ಮುಖ್ಯಮಂತ್ರಿಗಳು ಡಾ. ಮಂಜುನಾಥ್​ರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ […]

ಮೈಸೂರು ದಸರಾ 2020: ಡಾ. ಸಿ.ಎನ್. ಮಂಜುನಾಥ್​ರಿಂದ ಮಹೋತ್ಸವ ಉದ್ಘಾಟನೆ
Follow us
| Updated By: ಸಾಧು ಶ್ರೀನಾಥ್​

Updated on:Oct 17, 2020 | 1:05 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಮಹೋತ್ಸವವನ್ನು ಖ್ಯಾತ ವೈದ್ಯ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಡಾ.ಮಂಜುನಾಥ್​ರ ಹೆಸರನ್ನು ಸಿಎಂ ಯಡಿಯೂರಪ್ಪ ಅಂತಿಮಗೊಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಈ ಬಾರಿಯ ದಸರಾ ಮಹೋತ್ಸವವನ್ನು ಕೊರೊನಾ‌ ವಾರಿಯರ್ ಒಬ್ಬರು ಉದ್ಘಾಟನೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಹಾಗಾಗಿ, ಮುಖ್ಯಮಂತ್ರಿಗಳು ಡಾ. ಮಂಜುನಾಥ್​ರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಜೊತೆಗೆ, ಮಹೋತ್ಸವದ ಅಂಗವಾಗಿ ಈ ಬಾರಿ 6 ಕೊರೊನಾ ವಾರಿಯರ್ಸ್​ಗೆ ಸನ್ಮಾನ ಸಹ ಮಾಡಲಾಗುವುದು ಎಂಬ ಮಾಹಿತಿ ಸಿಕ್ಕಿದೆ. ಅವರ ವಿವರ ಹೀಗಿದೆ.

1. ಮರಗಮ್ಮ: ಪೌರಕಾರ್ಮಿಕರು. 2. ಡಾ. ನವೀನ್: ಆರೋಗ್ಯ ಇಲಾಖೆ ಮೆಡಿಕಲ್‌ ಆಫೀಸರ್ 3. ರುಕ್ಮಿಣಿ: ಸ್ಟಾಫ್ ನರ್ಸ್ 4. ನೂರ್ ಜಾನ್: ಆಶಾ ಕಾರ್ಯಕರ್ತೆ 5. ಕುಮಾರ್: ಮೈಸೂರು ನಗರ ಪೊಲೀಸ್ ಪೇದೆ 6. ಅಯೂಬ್ ಅಹಮದ್: ಸಾಮಾಜಿಕ ಕಾರ್ಯಕರ್ತ

Published On - 1:00 pm, Sat, 10 October 20