
ಬಾಗಲಕೋಟೆ: ನಿನ್ನೆ ಹಳ್ಳದಲ್ಲಿ ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಲಕನ ಮೃತದೇಹ ಪತ್ತೆಯಾಗಿದೆ. ಬಾಲಕನ ಶವವನ್ನ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ ಗ್ರಾಮದ ಬಾಲಕ ಅಮಿತ್ ಭೀಮಶಿ ಬನಗೊಂಡ (11) ನಿನ್ನೆ ಅದೇ ಗ್ರಾಮದ ನಿವಾಸಿ ಗುರುಬಸಯ್ಯ ತುಮ್ಮರಮಟ್ಟಿ ಎಂಬುವರ ಹಳ್ಳದಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ. ಇದೇ ವೇಳೆ ಆತನನ್ನ ಮೊಸಳೆ ಎಳೆದೊಯ್ದಿತ್ತು.