AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ. ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ […]

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!
ಸಾಂದರ್ಭಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2020 | 8:24 PM

Share

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ.

ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ ರೂ. 65!

ಬೆಚ್ಚಿದಿರಾ? ಮೊನ್ನೆಯವರೆಗೆ ಅದು ರೂ 35/ಕೆಜಿ ಸಿಗುತಿತ್ತು, ಕೇವಲ ಎರಡು ವಾರಗಳ ಅವಧಿಯಲ್ಲಿ ಬೆಲೆ ದುಪ್ಪಟ್ಟಾಗಿದೆ. ಹಾಗೆ ನೋಡಿದರೆ ನಮ್ಮ ಬೆಂಗಳೂರೇ ಕೊಂಚ ವಾಸಿ ಕಣ್ರೀ. ಚೆನೈಯಲ್ಲಿ ಕೆಜಿ ಈರುಳ್ಳಿಯ ಬೆಲೆ ರೂ 73 ಅಂತೆ. ಕೊಲ್ಕತಾದಲ್ಲಿ ರೂ 65. ಆಮ್ಚಿ ಮುಂಬೈಯಲ್ಲಿ ರೂ 67. ಈರುಳ್ಳಿಯ ಬಿಡಿ ಧಾರಣೆ ಸ್ವಲ್ಪ ಬೆಟರ್ ಅಂದರೆ ರೂ 51/ಕೆಜಿ ಸಿಗುತ್ತಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ.

ಹಬ್ಬಗಳ ಸೀಸನ್ ಶುರುವಾಗಿರುವುದರಿಂದ ಮಸಾಲೆ ಪದಾರ್ಥಗಳ ಕಿಂಗ್ ಎನಿಸಿಕೊಳ್ಳುವ ಈರುಳ್ಳಿಯ ಬೆಲೆ ಸದ್ಯಕ್ಕಂತೂ ಕಮ್ಮಿಯಾಗದು. ಡಿಢೀರ್ ಬೆಲೆಯೇರಿಕೆಗೆ, ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಾಂತ್ಯಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯೆಂದು ಹೇಳಲಾಗುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸರಬರಾಜು ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಿದೆಯಂತೆ.

ಈರುಳ್ಳಿ ಕಣಜವೆಂದು ಕರೆಸಿಕೊಳ್ಳುವ ಮಹಾರಾಷ್ಟ್ರದ ನಾಸಿಕ್ ಗೊತ್ತಲ್ಲ? ದೇಶದಲ್ಲೇ ಅತಿಹೆಚ್ಚು ಈರುಳ್ಳಿಯನ್ನು ಈ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ, ಕೆಜಿ ಈರುಳ್ಳಿ ಬೆಲೆ ರೂ 35ರಿಂದ 66ಕ್ಕೆ ಜಿಗಿದಿದೆ.

ನಮ್ಮಲ್ಲಿ 65 ರೂಪಾಯಿಗಳಿಗೆ ಸಿಗುತ್ತಿರುವುದರಿಂದ ಸಂತೋಷಪಡೋಣ ಬಿಡಿ, ಮಾರಾಯ್ರೇ.

Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ
Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ
ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲೇ ಚಿನ್ನ, ನಗದು ಇದ್ದ ಬ್ಯಾಗ್ ಕಳವು!
ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲೇ ಚಿನ್ನ, ನಗದು ಇದ್ದ ಬ್ಯಾಗ್ ಕಳವು!
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಆಮೇಲೇನಾಯ್ತು ನೋಡಿ
ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಆಮೇಲೇನಾಯ್ತು ನೋಡಿ
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?
ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ವೈರಲ್
ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ವೈರಲ್
ಗ್ರಾಮದೇವತೆ ಜಾತ್ರೆ ವೇಳೆ ಹೆಣ್ಮಕ್ಳ ವಿಡಿಯೋ ಮಾಡಿದ್ರೆ 30 ಸಾವಿರ ರೂ. ದಂಡ!
ಗ್ರಾಮದೇವತೆ ಜಾತ್ರೆ ವೇಳೆ ಹೆಣ್ಮಕ್ಳ ವಿಡಿಯೋ ಮಾಡಿದ್ರೆ 30 ಸಾವಿರ ರೂ. ದಂಡ!
ಜಾರ್ಜಿಯಾದ ಜನನಿಬಿಡ ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ
ಜಾರ್ಜಿಯಾದ ಜನನಿಬಿಡ ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ
ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಅನ್ವಯಿಸುತ್ತಾ?
ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಅನ್ವಯಿಸುತ್ತಾ?