AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ. ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ […]

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!
ಸಾಂದರ್ಭಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2020 | 8:24 PM

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ.

ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ ರೂ. 65!

ಬೆಚ್ಚಿದಿರಾ? ಮೊನ್ನೆಯವರೆಗೆ ಅದು ರೂ 35/ಕೆಜಿ ಸಿಗುತಿತ್ತು, ಕೇವಲ ಎರಡು ವಾರಗಳ ಅವಧಿಯಲ್ಲಿ ಬೆಲೆ ದುಪ್ಪಟ್ಟಾಗಿದೆ. ಹಾಗೆ ನೋಡಿದರೆ ನಮ್ಮ ಬೆಂಗಳೂರೇ ಕೊಂಚ ವಾಸಿ ಕಣ್ರೀ. ಚೆನೈಯಲ್ಲಿ ಕೆಜಿ ಈರುಳ್ಳಿಯ ಬೆಲೆ ರೂ 73 ಅಂತೆ. ಕೊಲ್ಕತಾದಲ್ಲಿ ರೂ 65. ಆಮ್ಚಿ ಮುಂಬೈಯಲ್ಲಿ ರೂ 67. ಈರುಳ್ಳಿಯ ಬಿಡಿ ಧಾರಣೆ ಸ್ವಲ್ಪ ಬೆಟರ್ ಅಂದರೆ ರೂ 51/ಕೆಜಿ ಸಿಗುತ್ತಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ.

ಹಬ್ಬಗಳ ಸೀಸನ್ ಶುರುವಾಗಿರುವುದರಿಂದ ಮಸಾಲೆ ಪದಾರ್ಥಗಳ ಕಿಂಗ್ ಎನಿಸಿಕೊಳ್ಳುವ ಈರುಳ್ಳಿಯ ಬೆಲೆ ಸದ್ಯಕ್ಕಂತೂ ಕಮ್ಮಿಯಾಗದು. ಡಿಢೀರ್ ಬೆಲೆಯೇರಿಕೆಗೆ, ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಾಂತ್ಯಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯೆಂದು ಹೇಳಲಾಗುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸರಬರಾಜು ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಿದೆಯಂತೆ.

ಈರುಳ್ಳಿ ಕಣಜವೆಂದು ಕರೆಸಿಕೊಳ್ಳುವ ಮಹಾರಾಷ್ಟ್ರದ ನಾಸಿಕ್ ಗೊತ್ತಲ್ಲ? ದೇಶದಲ್ಲೇ ಅತಿಹೆಚ್ಚು ಈರುಳ್ಳಿಯನ್ನು ಈ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ, ಕೆಜಿ ಈರುಳ್ಳಿ ಬೆಲೆ ರೂ 35ರಿಂದ 66ಕ್ಕೆ ಜಿಗಿದಿದೆ.

ನಮ್ಮಲ್ಲಿ 65 ರೂಪಾಯಿಗಳಿಗೆ ಸಿಗುತ್ತಿರುವುದರಿಂದ ಸಂತೋಷಪಡೋಣ ಬಿಡಿ, ಮಾರಾಯ್ರೇ.

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ