ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ. ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ […]

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!
ಸಾಂದರ್ಭಿಕ ಚಿತ್ರ
Follow us
|

Updated on: Oct 20, 2020 | 8:24 PM

ಕೊಂಡ್ಕೊಂಡ್ ಬರ್ತಾರ ಮುಂದಿಟ್ಕೊಂಡ್ ಅಳ್ತಾರ, ಅಂತ ಈರುಳ್ಳಿ ಕುರಿತು ಒಂದು ಒಗಟು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಅಲ್ಲಿ ಅದನ್ನು ಉಳ್ಳಾಗಡ್ಡಿ ಅಂತ ಜನ ಕರೆಯುತ್ತಾರೆ. ಈರುಳ್ಳಿ ಕಟ್ ಮಾಡುವಾಗ ಅದರಲ್ಲಿರುವ ಸಿನ್-ಪ್ರೊಪ್ಯಾನಿಥಿಯಲ್-ಎಸ್-ಆಕ್ಸೈಡ್ ಎಂಬ ರಸಾಯನಿಕ ಬಿಡುಗಡೆಯಾಗಿ ಅದು ಕಣ್ಣಿನ ಉರಿಗೆ ಕಾರಣವಾಗಿ ನೀರು ತರಿಸುತ್ತದೆ. ಆ ರಾಸಾಯನಿಕ ಮಾತು ಹಾಗಿರಲಿ, ನೀವೀಗ ಮಾರುಕಟ್ಟೆಗೆ ಹೋಗಿ ಅದರ ಬೆಲೆ ಕೇಳಿದಾಕ್ಷಣ ನಿಮ್ಮ ಕಣ್ಣಲ್ಲಿ ನೀರು ಬಂದು ಬಿಡುತ್ತದೆ.

ಹೌದು ಮಾರಾಯ್ರೇ, ಬೆಂಗಳೂರಿನಲ್ಲಿ ಇವತ್ತು ಒಂದು ಕಿಲೊಗ್ರಾಮ್ ಈರುಳ್ಳಿಯ ಬೆಲೆ ರೂ. 65!

ಬೆಚ್ಚಿದಿರಾ? ಮೊನ್ನೆಯವರೆಗೆ ಅದು ರೂ 35/ಕೆಜಿ ಸಿಗುತಿತ್ತು, ಕೇವಲ ಎರಡು ವಾರಗಳ ಅವಧಿಯಲ್ಲಿ ಬೆಲೆ ದುಪ್ಪಟ್ಟಾಗಿದೆ. ಹಾಗೆ ನೋಡಿದರೆ ನಮ್ಮ ಬೆಂಗಳೂರೇ ಕೊಂಚ ವಾಸಿ ಕಣ್ರೀ. ಚೆನೈಯಲ್ಲಿ ಕೆಜಿ ಈರುಳ್ಳಿಯ ಬೆಲೆ ರೂ 73 ಅಂತೆ. ಕೊಲ್ಕತಾದಲ್ಲಿ ರೂ 65. ಆಮ್ಚಿ ಮುಂಬೈಯಲ್ಲಿ ರೂ 67. ಈರುಳ್ಳಿಯ ಬಿಡಿ ಧಾರಣೆ ಸ್ವಲ್ಪ ಬೆಟರ್ ಅಂದರೆ ರೂ 51/ಕೆಜಿ ಸಿಗುತ್ತಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ.

ಹಬ್ಬಗಳ ಸೀಸನ್ ಶುರುವಾಗಿರುವುದರಿಂದ ಮಸಾಲೆ ಪದಾರ್ಥಗಳ ಕಿಂಗ್ ಎನಿಸಿಕೊಳ್ಳುವ ಈರುಳ್ಳಿಯ ಬೆಲೆ ಸದ್ಯಕ್ಕಂತೂ ಕಮ್ಮಿಯಾಗದು. ಡಿಢೀರ್ ಬೆಲೆಯೇರಿಕೆಗೆ, ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಾಂತ್ಯಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯೆಂದು ಹೇಳಲಾಗುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸರಬರಾಜು ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಿದೆಯಂತೆ.

ಈರುಳ್ಳಿ ಕಣಜವೆಂದು ಕರೆಸಿಕೊಳ್ಳುವ ಮಹಾರಾಷ್ಟ್ರದ ನಾಸಿಕ್ ಗೊತ್ತಲ್ಲ? ದೇಶದಲ್ಲೇ ಅತಿಹೆಚ್ಚು ಈರುಳ್ಳಿಯನ್ನು ಈ ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ, ಕೆಜಿ ಈರುಳ್ಳಿ ಬೆಲೆ ರೂ 35ರಿಂದ 66ಕ್ಕೆ ಜಿಗಿದಿದೆ.

ನಮ್ಮಲ್ಲಿ 65 ರೂಪಾಯಿಗಳಿಗೆ ಸಿಗುತ್ತಿರುವುದರಿಂದ ಸಂತೋಷಪಡೋಣ ಬಿಡಿ, ಮಾರಾಯ್ರೇ.

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ