ಕೊರೊನಾ ಬಂತು.. ಮೂಢನಂಬಿಕೆ ಹೆಚ್ಚಾಯ್ತು: ಜನರಿಂದ ರಾಕ್ಷಸಿ ಪೂಜೆ, ಎಲ್ಲಿ?

ಮೈಸೂರು: ಮಹಾಮಾರಿ ಕೊರೊನಾಗೆ ಹೆದರಿ ಜನ ಬಡಲಿ ಬೆಂಡಾಗಿದ್ದಾರೆ. ಇದರ ಜೊತೆ ಮೂಢನಂಬಿಕೆಯ ಆಚರಣೆಗಳು ಮತ್ತೆ ತಲೆ ಎತ್ತಿವೆ. ಮೈಸೂರಿನಲ್ಲಿ ಕೊರೊನಾ ಭೀತಿ‌ ಹಿನ್ನೆಲೆಯಲ್ಲಿ ಮೂಢನಂಬಿಕೆಯ ಆಚರಣೆ ಮಾಡಲಾಗಿದೆ. ಮೈಸೂರಿನ ಗಾಯತ್ರಿಪುಂ 2ನೇ ಹಂತದಲ್ಲಿ ಕೊರೊನಾ ಬರದಿರಲಿ ಎಂದು ರಾತ್ರಿ ವಿಚಿತ್ರ ಪೂಜೆ ಮಾಡಲಾಗಿದೆ. ಸ್ಥಳೀಯರೆಲ್ಲ ಸೇರಿ ಬೃಹದಾಕಾರದ ರಾಕ್ಷಸಿ ಚಿತ್ರ ಬರೆದು, ಆ ರಾಕ್ಷಸಿಗೆ ಕೋಳಿ ಬಲಿ ಕೊಟ್ಟು, ಅರಿಸಿನದ ಅನ್ನ, ಬೂದಿ ಅನ್ನ, ಕೋಳಿ ರಕ್ತದ ಅನ್ನ ಸೇರಿದಂತೆ ಮೂರು ಬಗೆ ಅನ್ನ ನೈವೇದ್ಯ […]

ಕೊರೊನಾ ಬಂತು.. ಮೂಢನಂಬಿಕೆ ಹೆಚ್ಚಾಯ್ತು: ಜನರಿಂದ ರಾಕ್ಷಸಿ ಪೂಜೆ, ಎಲ್ಲಿ?
Edited By:

Updated on: Jul 20, 2020 | 9:37 AM

ಮೈಸೂರು: ಮಹಾಮಾರಿ ಕೊರೊನಾಗೆ ಹೆದರಿ ಜನ ಬಡಲಿ ಬೆಂಡಾಗಿದ್ದಾರೆ. ಇದರ ಜೊತೆ ಮೂಢನಂಬಿಕೆಯ ಆಚರಣೆಗಳು ಮತ್ತೆ ತಲೆ ಎತ್ತಿವೆ. ಮೈಸೂರಿನಲ್ಲಿ ಕೊರೊನಾ ಭೀತಿ‌ ಹಿನ್ನೆಲೆಯಲ್ಲಿ ಮೂಢನಂಬಿಕೆಯ ಆಚರಣೆ ಮಾಡಲಾಗಿದೆ.

ಮೈಸೂರಿನ ಗಾಯತ್ರಿಪುಂ 2ನೇ ಹಂತದಲ್ಲಿ ಕೊರೊನಾ ಬರದಿರಲಿ ಎಂದು ರಾತ್ರಿ ವಿಚಿತ್ರ ಪೂಜೆ ಮಾಡಲಾಗಿದೆ. ಸ್ಥಳೀಯರೆಲ್ಲ ಸೇರಿ ಬೃಹದಾಕಾರದ ರಾಕ್ಷಸಿ ಚಿತ್ರ ಬರೆದು, ಆ ರಾಕ್ಷಸಿಗೆ ಕೋಳಿ ಬಲಿ ಕೊಟ್ಟು, ಅರಿಸಿನದ ಅನ್ನ, ಬೂದಿ ಅನ್ನ, ಕೋಳಿ ರಕ್ತದ ಅನ್ನ ಸೇರಿದಂತೆ ಮೂರು ಬಗೆ ಅನ್ನ ನೈವೇದ್ಯ ಮಾಡಿದ್ದಾರೆ. ಈ ಪೂಜೆಯಿಂದ ಕೊರೊನಾ ತಮ್ಮ ಬಡಾವಣೆಗೆ ಬರೋದಿಲ್ಲ ಎಂಬುದು ಸ್ಥಳೀಯರ ನಂಬಿಕೆ.

Published On - 8:49 am, Mon, 20 July 20