AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣವೇ ಜೀವನದ ಬೆಳಕು ಎಂದಿದ್ದ ರಾಮಸ್ವಾಮಿ ಅಯ್ಯಂಗಾರ್​ನ ನೆನೆದ ಪ್ರಧಾನಿ ಮೋದಿ

ಮೈಸೂರು: ಶಿಕ್ಷಣ ಕ್ಷೇತ್ರಕ್ಕೆ ಮೈಸೂರು ವಿವಿಯ ಕೊಡುಗೆ ಅಪಾರ. 21ನೇ ಶತಮಾನದ ಅಗತ್ಯಗಳನ್ನು ಪೂರೈಸಬೇಕಾಗಿದೆ. ಪದವಿ ಜೊತೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ನಡಸಿದ ಪ್ರಧಾನಿ ಕನ್ನಡದಲ್ಲೇ ವಿವಿ ಸಿಬ್ಬಂದಿಗೆ ಶುಭಾಶಯ ಹೇಳಿದರು. ಶಿಕ್ಷಣವೇ ಜೀವನದ ಬೆಳಕು ಎಂದಿದ್ದ ಕನ್ನಡದ ಮಹಾಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ್​ರನ್ನು ನೆನೆದ ಪ್ರಧಾನಿ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣದ […]

ಶಿಕ್ಷಣವೇ ಜೀವನದ ಬೆಳಕು ಎಂದಿದ್ದ ರಾಮಸ್ವಾಮಿ ಅಯ್ಯಂಗಾರ್​ನ ನೆನೆದ ಪ್ರಧಾನಿ ಮೋದಿ
KUSHAL V
|

Updated on:Oct 19, 2020 | 12:42 PM

Share

ಮೈಸೂರು: ಶಿಕ್ಷಣ ಕ್ಷೇತ್ರಕ್ಕೆ ಮೈಸೂರು ವಿವಿಯ ಕೊಡುಗೆ ಅಪಾರ. 21ನೇ ಶತಮಾನದ ಅಗತ್ಯಗಳನ್ನು ಪೂರೈಸಬೇಕಾಗಿದೆ. ಪದವಿ ಜೊತೆ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ನಡಸಿದ ಪ್ರಧಾನಿ ಕನ್ನಡದಲ್ಲೇ ವಿವಿ ಸಿಬ್ಬಂದಿಗೆ ಶುಭಾಶಯ ಹೇಳಿದರು. ಶಿಕ್ಷಣವೇ ಜೀವನದ ಬೆಳಕು ಎಂದಿದ್ದ ಕನ್ನಡದ ಮಹಾಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ್​ರನ್ನು ನೆನೆದ ಪ್ರಧಾನಿ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣದ ಗ್ಲೋಬಲ್ ಹಬ್​ ಮಾಡಲು ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಮಳೆ ಹಾನಿಪೀಡಿತ ಕುಟುಂಬಗಳಿಗೆ ಸಹಾನುಭೂತಿ ಕೆಲ ನಿರ್ಬಂಧಗಳ ನಡುವೆಯೂ ವಿವಿಯ ಘಟಿಕೋತ್ಸವವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಮಳೆಯಿಂದ ಹಾನಿಪೀಡಿತ ಕುಟುಂಬಗಳಿಗೆ ನನ್ನ ಸಹಾನುಭೂತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ ಎಂದು ಸಹ ಹೇಳಿದರು.

ಸುಧಾಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ ಇಂದು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದ್ದು ಕ್ರಾಫರ್ಡ್ ಹಾಲ್‌ನ ಸಭಾಂಗಣದಲ್ಲಿ ಇಂದು ಕಾರ್ಯಕ್ರಮ ಜರುಗಿತು. ಘಟಿಕೋತ್ಸವದಲ್ಲಿ ಇಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ ಭಾಗಿಯಾಗಿದ್ದರು.

Published On - 12:15 pm, Mon, 19 October 20