AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತೃ ಹೃದಯ! 6 ತಿಂಗಳಲ್ಲಿ 42 ಲೀಟರ್​ ಎದೆಹಾಲು ದಾನ ಮಾಡಿದ ಸಿನಿ ನಿರ್ಮಾಪಕಿ

ಮುಂಬೈ: ಬ್ರಹ್ಮ, ವಿಷ್ಣು, ಶಿವ ಎದೆಹಾಲು ಕುಡಿದರು.. ಅಮ್ಮಾ ನೀನೆ ದೈವ ಅಂತಾ ಕಾಲು ಮುಗಿದರೋ ಎಂಬ ಸಿನಿಮಾ ಹಾಡಿನ ಸಾಲುಗಳಂತೆ ಶಿಶುವಿಗೆ ತಾಯಿಯ ಎದೆಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲವೆಂದು ಹೇಳುತ್ತಾರೆ. ಅದರಲ್ಲಿರುವ ಮಮತೆ, ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ ಕೂಸಿನ ಸಮಗ್ರ ಬೆಳವಣಿಗೆಯಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸ್ವಂತ ಮಗುವಿನ ಜೊತೆಗೆ ಇತರೆ 60 ಮಕ್ಕಳ ಪಾಲಿಗೆ ಅಮೃತ ನೀಡಿದ ತಾಯಿ ನೇತ್ರದಾನ, ರಕ್ತದಾನದಂತೆ ಇದೀಗ ಸಿನಿಮಾ ನಿರ್ಮಾಪಕಿಯೊಬ್ಬರು ಎದೆಹಾಲು […]

ಮಾತೃ ಹೃದಯ! 6 ತಿಂಗಳಲ್ಲಿ 42 ಲೀಟರ್​ ಎದೆಹಾಲು ದಾನ ಮಾಡಿದ ಸಿನಿ ನಿರ್ಮಾಪಕಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Nov 21, 2020 | 4:19 PM

ಮುಂಬೈ: ಬ್ರಹ್ಮ, ವಿಷ್ಣು, ಶಿವ ಎದೆಹಾಲು ಕುಡಿದರು.. ಅಮ್ಮಾ ನೀನೆ ದೈವ ಅಂತಾ ಕಾಲು ಮುಗಿದರೋ ಎಂಬ ಸಿನಿಮಾ ಹಾಡಿನ ಸಾಲುಗಳಂತೆ ಶಿಶುವಿಗೆ ತಾಯಿಯ ಎದೆಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲವೆಂದು ಹೇಳುತ್ತಾರೆ. ಅದರಲ್ಲಿರುವ ಮಮತೆ, ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ ಕೂಸಿನ ಸಮಗ್ರ ಬೆಳವಣಿಗೆಯಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸ್ವಂತ ಮಗುವಿನ ಜೊತೆಗೆ ಇತರೆ 60 ಮಕ್ಕಳ ಪಾಲಿಗೆ ಅಮೃತ ನೀಡಿದ ತಾಯಿ ನೇತ್ರದಾನ, ರಕ್ತದಾನದಂತೆ ಇದೀಗ ಸಿನಿಮಾ ನಿರ್ಮಾಪಕಿಯೊಬ್ಬರು ಎದೆಹಾಲು ಉಣಿಸಲು ಕಷ್ಟವಾಗುತ್ತಿರುವ ಬಾಣಂತಿಯರ ಮಕ್ಕಳಿಗೆ ಆಪದ್ಬಾಂಧವರಾಗಿ ಪರಿಣಮಿಸಿದ್ದಾರೆ. ಹೌದು, ಸಾಂಡ್​ ಕೀ ಆಂಖ್ (ಎತ್ತಿನ ಕಣ್ಣು ಅಥವಾ ಬುಲ್ಸ್​ ಐ) ಎಂಬ ಹಿಂದಿ ಚಿತ್ರದ ನಿರ್ಮಾಪಕಿ ನಿಧಿ ಪಾರ್ಮಾರ್​ ಹೀರಾನಂದಾನಿ ಕಳೆದ ಮೇ ತಿಂಗಳಿಂದ ಸರಿಸುಮಾರು 42 ಲೀಟರ್​ ಎದೆಹಾಲನ್ನು ದಾನ ಮಾಡಿದ್ದಾರೆ. ಇದೇ ವರ್ಷ ಮುದ್ದಾದ ಮಗುವಿಗೆ ಜನ್ಮ ನೀಡಿದ್ದ ನಿಧಿ ತಮ್ಮ ಶಿಶುವಿಗೆ ಮೊಲೆಯುಣಿಸುವುದಲ್ಲದೆ ಇತರೆ ನವಜಾತ ಶಿಶುವಿನ ಸಹಾಯಕ್ಕೆ ಮುಂದಾಗಿದ್ದಾರೆ.

ಮಾತೃತ್ವದ ಧನ್ಯತೆ.. ಅವರಿಗೆ ಫ್ಯಾಷನ್; ಇವರಿಗೆ ಪ್ಯಾಷನ್! ಇತ್ತೀಚಿನ ಫ್ಯಾಷನ್ ಯುಗದಲ್ಲಿ ತನ್ನದೇ ಮಕ್ಕಳಿಗೆ ಹಾಲುಣಿಸುವುದಕ್ಕೆ ವಿಶೇಷವಾಗಿ ಸಿನಿಮಾ ಮಂದಿ ಹಿಂದೇಟು ಹಾಕುತ್ತಾರೆ. ದೈಹಿಕ ಸೌಂದರ್ಯ ಕಾಪಾಡಿಕೊಳ್ಳುವ ಭರದಲ್ಲಿ.. ತನ್ನ ಶಿಶುವಿಗೆ ಮೊಲೆಯುಣಿಸದೇ ಇರುವುದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ. ಆದ್ರೆ ಈ ಮಹಾತಾಯಿ ತನ್ನದೇ ಮಗುವಿನ ಜೊತೆಗೆ ಇತರೆ ಶಿಶುಗಳಿಗೂ ಹಾಲುಣಿಸುವುದನ್ನು ಪ್ಯಾಷನ್ ಮಾಡಿಕೊಂಡಿದ್ದಾರೆ! ಇದು ಅಪ್ಪಟ ಮಾತೃ ಹೃದಯವೇ ಸರಿ!

ಮುಂದಿನ ಒಂದು ವರ್ಷದವರೆಗೂ ಇದೇ ರೀತಿಯಲ್ಲಿ ಎದೆಹಾಲು ದಾನ ಆಸ್ಪತ್ರೆಯಲ್ಲಿ ಎದೆಹಾಲು ಉಣಿಸಲು ಕಷ್ಟಪಡುತ್ತಿದ್ದ ಬಾಣಂತಿಯರ ಕೂಸುಗಳಿಗೆ ಹಾಲು ಒದಗಿಸಿದ್ದಾರೆ. ಈ ಮೂಲಕ ಬರೋಬ್ಬರಿ 60 ಮಕ್ಕಳ ಪಾಲಿಗೆ ನಿಧಿ ಪಾರ್ಮಾರ್​ ಸಾಕ್ಷಾತ್​ ಅನ್ನಪೂರ್ಣೇಶ್ವರಿಯಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಎದೆಹಾಲು ಪಡೆದ ಮಕ್ಕಳ ದುರ್ಬಲ ಆರೋಗ್ಯ ಸ್ಥಿತಿ ಕಂಡು ಮುಂದಿನ ಒಂದು ವರ್ಷದವರೆಗೂ ಇದೇ ರೀತಿಯಲ್ಲಿ ಎದೆಹಾಲು ದಾನ ಮಾಡಲು ಮುಂದಾಗಿದ್ದಾರೆ.

Published On - 6:09 pm, Wed, 18 November 20

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್