AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂದ್ಯ ಗೆದ್ದುಕೊಡಬಲ್ಲ ಮಿಡ್ಲ್ ಅರ್ಡರ್ ಬ್ಯಾಟ್ಸ್​ಮನ್​ಗಳು ಆರ್​ಸಿಬಿಗೆ ಬೇಕು | RCB needs match-winning middle order batters

ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರದಂದು ಎಲಿಮಿನೇಟರ್ ಪಂದ್ಯದ ನಂತರ ಟೀಮಿನ ಡಗ್​ ಔಟ್​ನಲ್ಲಿ ಉಳಿದ ಆಟಗಾರರಿಗಿಂತ ದೂರದಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ಮುಖದ ಮೇಲಿನ ಪ್ರೇತಕಳೆ ಮಿಕ್ಕಿದೆಲ್ಲವನ್ನು ವ್ಯಾಖ್ಯಾನಿಸುವಂತಿತ್ತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮತ್ತೊಂದು ನಿರಾಶಾದಾಯಕ ಅಭಿಯಾನ ಮುಗಿಸಿದೆ. ಅತ್ಯಂತ ಪ್ರಯಾಸದಿಂದ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಿ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಟೀಮಿನ ವಿರುದ್ಧ ಸೋಲುವುದರೊಂದಿಗೆ ಕೊಹ್ಲಿಯ ತಂಡ ಈ ಸಲವೂ ತನ್ನ ಕೋಟ್ಯಾಂತರ ಅಭಿಮಾನಿಗಳ […]

ಪಂದ್ಯ ಗೆದ್ದುಕೊಡಬಲ್ಲ ಮಿಡ್ಲ್ ಅರ್ಡರ್ ಬ್ಯಾಟ್ಸ್​ಮನ್​ಗಳು ಆರ್​ಸಿಬಿಗೆ ಬೇಕು | RCB needs match-winning middle order batters
ವಿರಾಟ್ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2020 | 5:33 PM

Share

ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರದಂದು ಎಲಿಮಿನೇಟರ್ ಪಂದ್ಯದ ನಂತರ ಟೀಮಿನ ಡಗ್​ ಔಟ್​ನಲ್ಲಿ ಉಳಿದ ಆಟಗಾರರಿಗಿಂತ ದೂರದಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ಮುಖದ ಮೇಲಿನ ಪ್ರೇತಕಳೆ ಮಿಕ್ಕಿದೆಲ್ಲವನ್ನು ವ್ಯಾಖ್ಯಾನಿಸುವಂತಿತ್ತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮತ್ತೊಂದು ನಿರಾಶಾದಾಯಕ ಅಭಿಯಾನ ಮುಗಿಸಿದೆ. ಅತ್ಯಂತ ಪ್ರಯಾಸದಿಂದ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಿ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಟೀಮಿನ ವಿರುದ್ಧ ಸೋಲುವುದರೊಂದಿಗೆ ಕೊಹ್ಲಿಯ ತಂಡ ಈ ಸಲವೂ ತನ್ನ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. 13ನೇ ಅವೃತ್ತಿ ಶುರುವಾಗುವ ಮೊದಲೇ ‘ಈ ಸಲ ಕಪ್ ನಮ್ದೇ’ ಅಂತಿದ್ದ ಆರ್​ಸಿಬಿಯ ಕಟ್ಟಾ ಅಭಿಮಾನಿಗಳು ಯಾಕಾದರೂ ನಾವು ಈ ಟೀಮನ್ನು ಇಷ್ಟೊಂದು ಪ್ರೀತಿಸುತ್ತೇವೆ, ಇಷ್ಟಪಡುತ್ತೇವೆ ಅಂತ ವ್ಯಥೆಪಡುತ್ತಿದ್ದಾರೆ.

ಅಭಿಮಾನಿಗಳಿಗೆ ಪ್ರತಿಸಲ ನಿರಾಶೆ ಕಟ್ಟಿಟ್ಟ ಬುತ್ತಿಯಂತಾಗಿಬಿಟ್ಟಿದೆ. ಆದರೂ ಅವರು ಹಿಂದಿನ ಸೀಸನ್​ಗಳ ಕಹಿಗಳನ್ನೆಲ್ಲ ಮರೆತು ಮತ್ತೊಂದು ಸೀಸನ್​ಗಾಗಿ ಕಾಯಲಾರಂಭಿಸುತ್ತಾರೆ. ಕಳೆದ 13 ವರ್ಷಗಳಿಂದ ಇದೇ ನಡೆದುಕೊಂಡು ಬಂದಿದೆ.

ಈ ಕ್ರೀಡೆಯೇ ಹಾಗೆ, ಮೋಘ ಅನಿಶ್ಚಿತತೆಗಳ ಆಟ. ಆದರೆ ಟೀಮಿನ ಅಥವಾ ನಾಯಕ ಕೊಹ್ಲಿಯ ಸ್ವಯಂಕೃತಾಪರಾಧಗಳನ್ನು ಕಡೆಗಣಿಸುವಂತಿಲ್ಲ. ಟೀಮಿನ ಕಾಂಪೊಸಿಷನ್ ಬಗ್ಗೆ ಹಲವಾರು ಮಾತುಗಳು ಕೇಳಿಬರುತ್ತಿವೆ. ಕ್ರಿಸ್ ಗೇಲ್ ಸ್ಥಾನಕ್ಕೆ ಆರ್​ಸಿಬಿಯ ಧಣಿಗಳು ಖರೀದಿಸಿದ್ದು ಆಸ್ಟ್ರೇಲಿಯಾದ ಆರನ್ ಫಿಂಚ್​ರನ್ನು. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ತನ್ನ ದೇಶದ ನಾಯಕನಾಗಿರುವ ಫಿಂಚ್ ನಿಸ್ಸಂದೇಹವಾಗಿ ವಿಸ್ಫೋಟಕ ಬ್ಯಾಟ್ಸ್​ಮನ್. ಟಿ20 ಅಂತರರಾಷ್ಸ್ರೀಯ ಪಂದ್ಯಗಳಲ್ಲಿ ಅವರ ಸ್ಟ್ರೈಕ್​ರೇಟ್ 155 ರಷ್ಟಿದೆ ಮತ್ತು ಸರಾಸರಿ 38.44 ಇದೆ. ಆದರೆ ಐಪಿಎಲ್ 2020ನಲ್ಲಿ 12 ಪಂದ್ಯಗಳಾಡಿದ ಫಿಂಚ್, ಕೇವಲ 22.33 ಸರಾಸರಿಯಲ್ಲಿ 268 ರನ್ ಗಳಿಸಿದರು, ಇಲ್ಲಿ ಅವರ ಸ್ಟ್ರೈಕ್​ರೇಟ್ ಕೇವಲ 111 ರಷ್ಟಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಅವರನ್ನು ಆಡಿಸಿದ್ದು ಸರಿಯರಬಹುದು ಯಾಕೆಂದರೆ, ಜೊಷುವಾ ಫಿಲಿಪ್ ಪದೇಪದೆ ವಿಫಲರಾಗುತ್ತಿದ್ದರಿಂದ ಕೊಹ್ಲಿ ಮತ್ತು ಇತರ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ, ಫಿಂಚ್ ಓಪನಿಂಗ್ ಬ್ಯಾಟ್ಸ್​ಮನ್ ಆಗಿರುವುದರಿಂದ ಅವರ ಸ್ಥಾನದಲ್ಲಿ ತಾನು ಇನ್ನಿಂಗ್ಸ್ ಆರಂಭಿಸಿ ಕೊಹ್ಲಿ ಟ್ಯಾಕ್ಟಿಕಲ್ ಪ್ರಮಾದವೆಸಗಿದರು. ಪಂದ್ಯ ಮುಗಿದ ನಂತರ ಮಿಡ್ಲ್ ಆರ್ಡರ್ ಮೇಲಿನ ಒತ್ತಡ ಕಡಿಮೆ ಮಾಡಲು ಹಾಗೆ ಮಾಡಿದೆ ಅಂತ ಕೊಹ್ಲಿ ಹೇಳಿದರು. ಅವರ ವಾದ ಆರ್​ಸಿಬಿಯ ಅಭಿಮಾನಿಗಳಿಗೆ ಅರ್ಥವಾಗಲೇ ಇಲ್ಲ. ವಾಸ್ತವದಲ್ಲಿ, ಫಿಂಚ್ ಆರಂಭಿಕನಾಗಿ ಮತ್ತು ತಾನು ಎಂದಿನ 3ನೇ ಸ್ಥಾನದಲ್ಲಿ ಆಡಿದ್ದರೆ ಮಧ್ಯಮ ಕ್ರಮಾಂಕಕ್ಕೆ ಧೃಡತೆ ಸಿಗುತಿತ್ತು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಫಿಂಚ್​ರನ್ನು ಕೆಲ ಪಂದ್ಯಗಳ ನಂತರ ವಾಪಸ್ಸು ತರಲಾಗಿತ್ತು. ನೆಟ್ಸ್​ನಲ್ಲಿ ಕಾಣುವ ಸ್ಪರ್ಶ ಮ್ಯಾಚ್ ಸಿಚುಯೇಷನ್​ನಲ್ಲಿ ಕಾಣದಂತಾಗುವ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಫಿಂಚ್ ವಿಷಯದಲ್ಲೂ ಅದೇ ಆಗಿದ್ದು.

ಮೊಯಿನ್ ಅಲಿ ಅವರನ್ನು ಈ ಪಂದ್ಯದಲ್ಲಿ ಯಾಕೆ ಅಡಿಸಲಾಯಿತೆಂದು ಕೊಹ್ಲಿಯೇ ಹೇಳಬೇಕು. ಹಿಂದಿನ ಪಂದ್ಯಗಳಲ್ಲಿ ಅವರಿಂದ ಕಳಪೆ ಪ್ರದರ್ಶನಗಳು ಬಂದಾಗ್ಯೂ ಅವರನ್ನು ಆಡಿಸಿದ್ದು ದೊಡ್ಡ ಬ್ಲಂಡರ್​. ಅಲಿಯಲ್ಲಿ ಬೇಸಿಕ್ ಕಾಮನ್ ಸೆನ್ಸ್ ಸಹ ಇಲ್ಲದೇ ಹೋಗಿದ್ದು ಅತ್ಯಂತ ವಿಷಾದನೀಯ. ಫ್ರೀ ಹಿಟ್ ಎದುರಿಸುವಾಗ ಒಬ್ಬ ಬ್ಯಾಟ್ಸ್​ಮನ್ ರನೌಟ್ ಆಗುವುದು ಕ್ರಿಕೆಟ್ ಮೈದಾನಗಳಲ್ಲಿ ಅಪರೂಪಕ್ಕೊಮ್ಮೆ ಕಂಡುಬರುತ್ತದೆ. ಅವರ ಸ್ಥಾನದಲ್ಲಿ ಗುರ್ಕೀರತ್ ಮಾನ್ ಇಲ್ಲವೇ ಇಡೀ ಸೀಸನ್ ಬೆಂಚ್ ಕಾಯಿಸಿದ ಪಾರ್ಥೀವ್ ಪಟೇಲ್​ರನ್ನು ಆಡಿಸಿದರೆ ಸೂಕ್ತವೆನಿಸುತ್ತಿತ್ತು. ಮಿಡ್ಲ್​ ಆರ್ಡರ್ ದುರ್ಬಲವಾಗಿದೆ ಎಂದು ಹೇಳುತ್ತಿದ್ದ ಕೊಹ್ಲಿ ಅದನ್ನು ಬಲಪಡಿಸುವ ಪ್ರಯತ್ನ ಮಾಡಬೇಕಿತ್ತು.

ಪ್ರತಿಸಲದಂತೆ ಈ ಬಾರಿಯೂ, ಟೀಮಿನ ಬ್ಯಾಟಿಂಗ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದು ಮುಳುವಾಯಿತು. ಅವರಿಬ್ಬರು ಮತ್ತು ಟಾಪ್ ಆರ್ಡರ್​ನಲ್ಲಿ ದೇವದತ್ ಪಡಿಕ್ಕಲ್ ಫೇಲಾದರೆ ಟೀಮಿನ ಕತೆ ಮುಗಿದಂತೆಯೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಮೊದಲ ಮೂರು ಇನ್ನಿಂಗ್ಸ್​ಗಳಲ್ಲಿ 14, 1, 3 ರನ್ ಗಳಿಸಿ ನಂತರದ 4 ಪಂದ್ಯಗಳಲ್ಲಿ 9, 7, 29 ಮತ್ತು 6 ರನ್ ಗಳಿಸಿದ ಕೊಹ್ಲಿ ಲೀಗ್​ನ ಮಧ್ಯಮ ಹಂತದ ಪಂದ್ಯಗಲ್ಲಿ ಮಾತ್ರ ಚೆನ್ನಾಗಿ ಆಡಿದರು. ಎಬಿಡಿ ಸಹ ಕೆಲವು ಪಂದ್ಯಗಳಲ್ಲಿ ಮಾತ್ರ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು.

ಗುರ್ಕೀರತ್, ಮತ್ತು ಆಲ್​ರೌಂಡರ್​ಗಳಾದ, ಶಿವಮ್ ದುಬೆ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬ್ಯಾಟ್​ಗಳಿಂದ ರನ್​ಗಳೇ ಬರಲಿಲ್ಲ. ಈ ಟೀಮಿಗೆ ಮಧ್ಯಮ ಕ್ರಮಾಂಕದಲ್ಲಿ ಪಂದ್ಯ ಗೆದ್ದುಕೊಡಬಲ್ಲ ಬ್ಯಾಟ್ಸ್​ಮನ್​ಗಳು ಬೇಕಾಗಿದ್ದಾರೆ. ಌಡಂ ಜಂಪಾ ಅವರನ್ನು ಇನ್ನಷ್ಟು ಪಂದ್ಯಗಳಲ್ಲಿ ಆಡಿಸಿದರೆ ಚೆನ್ನಾಗಿರುತ್ತಿತ್ತು. ಶುಕ್ರವಾರ ಅವರು ಹೈದರಾಬಾದ್ ವಿರುದ್ಧ ಚಾಂಪಿಯನ್​ನಂತೆ ಬೌಲಿಂಗ್ ಪ್ರದರ್ಶನ ನೀಡಿದರು.

ಯುಜ್ವೇಂದ್ರ ಚಹಲ್, ಸುಂದರ್, ನವದೀಪ್ ಸೈನಿ ತಮ್ಮ ಕರ್ತವ್ಯಗಳನ್ನು ಸೂಕ್ತವಾಗಿ ನಿಭಾಯಿಸಿದರೆ, ಡೇಲ್ ಸ್ಟೀನ್ ಮತ್ತು ಉಮೇಶ್ ಯಾದವ್ ಟೀಮಿಗೆ ಹೊರೆಯೆನಿಸಿದರು. ಶಹಾಬಾಜ್ ಅಹ್ಮದ್​ಗೆ ಜಾಸ್ತಿ ಅವಕಾಶಗಳು ಸಿಗಲಿಲ್ಲ. ಇಸುರು ಉದಾನಾ ತಕ್ಕಮಟ್ಟಿನ ಪ್ರದರ್ಶನಗಳನ್ನು ನೀಡಿದರು.

ಮೊದಲ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದರೂ ನಂತರದ 4 ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಸೋತ ಆರ್​ಸಿಬಿ ಪಡಿಕ್ಕಲ್ ಮತ್ತು ಸ್ಪಿನ್ನರ್​ಗಳ ಯಶಸ್ಸಿನ ಹೊರತಾಗಿ ಮತ್ತೇನನ್ನು ಸಾಧಿಸದೆ ಈ ಸಲದ ಕ್ಯಾಂಪೇನ್ ಮುಗಿಸಿದೆ. ಅದರ ಅಭಿಮಾನಿ ಕೆಲ ದಿನಗಳ ನಂತರ ಮತ್ತೊಂದು ಸೀಸನ್​ಗಾಗಿ ಎದುರು ನೋಡಲಾರಂಭಿಸುತ್ತಾನೆ. ಅವನಿಗೆ ಬೇರೆ ವಿಧಿಯೇ ಇಲ್ಲ.

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!