Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದವರು.. ಇಂದು ಬೀದಿಯಲ್ಲಿ ಚಿಂದಿ ಆಯುತ್ತಿದ್ದಾರೆ

ಚಿಕ್ಕಬಳ್ಳಾಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಆತ, ನೆಮ್ಮದಿಯಾಗಿ ಇರೋಣ ಅಂತ ಸ್ವಯಂ ನಿವೃತ್ತಿ ಪಡೆದಿದ್ರು, ಆದ್ರೆ ನಿವೃತ್ತಿ ಪಡೆದ ಕೆಲವೇ ವರ್ಷಗಳಲ್ಲಿ ಅವರ ಜೀವನ ಬೀದಿಗೆ ಬಂದಿದೆ. ಅವ್ರು ಈಗಿರುವ ಪರಿಸ್ಥಿತಿಯನ್ನ ನೀವು ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ. ಉದ್ದ ಗಡ್ಡ.. ಮೀಸೆ.. ಗಲೀಜಾಗಿರುವ ಬಟ್ಟೆ.. ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ, ಇವರೇ ನಾವು ಹೇಳಿದ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ರಾವ್.ಯಾರೂ ಊಹಿಸಲು ಆಗದಂತಹ […]

ಅಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದವರು.. ಇಂದು ಬೀದಿಯಲ್ಲಿ ಚಿಂದಿ ಆಯುತ್ತಿದ್ದಾರೆ
Follow us
ಆಯೇಷಾ ಬಾನು
|

Updated on: Nov 08, 2020 | 8:08 AM

ಚಿಕ್ಕಬಳ್ಳಾಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಆತ, ನೆಮ್ಮದಿಯಾಗಿ ಇರೋಣ ಅಂತ ಸ್ವಯಂ ನಿವೃತ್ತಿ ಪಡೆದಿದ್ರು, ಆದ್ರೆ ನಿವೃತ್ತಿ ಪಡೆದ ಕೆಲವೇ ವರ್ಷಗಳಲ್ಲಿ ಅವರ ಜೀವನ ಬೀದಿಗೆ ಬಂದಿದೆ. ಅವ್ರು ಈಗಿರುವ ಪರಿಸ್ಥಿತಿಯನ್ನ ನೀವು ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ.

ಉದ್ದ ಗಡ್ಡ.. ಮೀಸೆ.. ಗಲೀಜಾಗಿರುವ ಬಟ್ಟೆ.. ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ, ಇವರೇ ನಾವು ಹೇಳಿದ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ರಾವ್.ಯಾರೂ ಊಹಿಸಲು ಆಗದಂತಹ ಸ್ಥಿತಿಗೆ ತಲುಪಿದ್ದಾರೆ. ಅಷ್ಟಕ್ಕೂ ನಿವೃತ್ತ ಪೊಲೀಸ್ ಅಧಿಕಾರಿಗೆ ಇಂಥ ಗತಿಯಾದ್ರೂ ಯ್ಯಾಕೆ ಬಂತು ಅಂತ ಅವರೆ ಹೇಳಿಕೊಂಡಿದ್ದಾರೆ.

ಅಸಲಿಗೆ ಮಧುಸೂದನ್ ರಾವ್ ಕೆಲಸದ ಒತ್ತಡದಿಂದ ವಿಮುಕ್ತರಾಗಲು, ಮನೆಯಲ್ಲಿ ನೆಮ್ಮದಿ ಜೀವನ ನಿರ್ವಹಿಸೋಣ ಅಂತ 2011ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ರು. ಇತ್ತೀಚಿಗೆ ಅವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು, ಪತ್ನಿಯ ಸಾವಿನಿಂದ ನೊಂದ ಮಧುಸೂದನ್ ಮದ್ಯಪಾನಕ್ಕೆ ದಾಸರಾಗಿ ಮನೆಯಲ್ಲಿ ಕಿರಿ ಕಿರಿ ಮಾಡ್ತಿದ್ದರಂತೆ, ಇದ್ರಿಂದ ಮಗ ಹಾಗೂ ಇಬ್ಬರು ವಿವಾಹಿತ ಹೆಣ್ಣು ಮಕ್ಕಳುಗಳಿಗೆ ಇರಿಸು ಮುರಿಸು ಆಯ್ತಂತೆ, ಕೊನೆಗೆ ಮನೆಯಲ್ಲಿ ಇರೋದೆ ಬೇಡ ಅಂತ, ಮನೆಯಿಂದ ಬೀದಿಗೆ ಬಂದು ಚಿಂದಿ ಆಯ್ದು ಬೀದಿಯಲ್ಲಿ ಜೀವನ ಮಾಡ್ತಿದ್ದಾರೆ. ಆದ್ರೆ ಮಧುಸೂದನ್ ವಿಷಯ ತಿಳಿದ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಚಿಂತಾಮಣಿ ನಗರ ಪೊಲೀಸರ ಮೂಲಕ ಹೊಸ ಬದುಕು ಕಟ್ಟಿಕೊಡಲು ಯತ್ನಿಸಿದ್ದಾರೆ.

ಮಧುಸೂದನ್ ಗೆ ಪ್ರತಿ ತಿಂಗಳು 9 ಸಾವಿರ ರೂಪಾಯಿ ಪೆನಷನ್ ಬರ್ತಿದೆ, ಅಕೌಂಟ್ ನಲ್ಲಿ ಲಕ್ಷ ಲಕ್ಷ ಹಣ ಇದೆ ಆದ್ರೂ ಅದ್ಯಾವುದನ್ನು ಪಡೆಯದ ಮಧುಸೂದನ್. ಮಕ್ಕಳ ಸಹವಾಸದಿಂದ ದೂರವಿದ್ದು ಇರೋ ಹಣವನ್ನು ಬಳಸಿಕೊಳ್ಳದೆ ಬೀದಿಯಲ್ಲಿ ಚಿಂದಿ ಕಾಯಕ ಮಾಡಿ ಅದರಿಂದ ಬರುವ ಹಣದಿಂದಲೆ ಕುಡಿಯೋದು, ತಿನ್ನೋದು, ಬೀದಿಯಲ್ಲಿ ಜೀವನ ಮಾಡೋದು ಮಾಡ್ತಿದ್ದಾರೆ. ಬೀದಿ ಜೀವನವೇ ತಮಗೆ ನೆಮ್ಮದಿ ನೀಡ್ತಿದೆ ಅಂತ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ