AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..

ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ! ಅಂದಹಾಗೆ ಈತನ ಹೆಸ್ರು ರಾವುಲ ಮಹೇಶ ಅಲಿಯಾಸ್ ಮಲ್ಲಯ್ಯ ಅಂತಾ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮದ್ದಿರಾಲ ನಿವಾಸಿ. ಸೂರ್ಯಪೇಟೆಯಲ್ಲಿ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿರುವ […]

ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..
ಆಯೇಷಾ ಬಾನು
|

Updated on: Nov 08, 2020 | 7:11 AM

Share

ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ.

ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ! ಅಂದಹಾಗೆ ಈತನ ಹೆಸ್ರು ರಾವುಲ ಮಹೇಶ ಅಲಿಯಾಸ್ ಮಲ್ಲಯ್ಯ ಅಂತಾ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮದ್ದಿರಾಲ ನಿವಾಸಿ. ಸೂರ್ಯಪೇಟೆಯಲ್ಲಿ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿರುವ ಮಲ್ಲಯ್ಯನಿಗೆ ಮದುವೆ ಆಗೋದೇ ಕಾಯಕವಾಗಿತ್ತಂತೆ. ಒಂದಲ್ಲ ಎರಡಲ್ಲ 4 ಮದುವೆಯಾಗಿದ್ದಾನೆಂಬ ಆರೋಪ ಈತನ ವಿರುದ್ಧ ಕೇಳಿಬಂದಿದೆ. 3ನೇ ಮದುವೆ ವಿಚ್ಚೇದನ ಪ್ರಕರಣ ಇನ್ನೂ ಕೋರ್ಟ್​ನಲ್ಲಿರುವಾಗಲೇ 4ನೇ ಮದುವೆಯಾಗಿದ್ದಾನೆ. ಈತನ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಮದುವೆಯಾದ ಪತ್ನಿಯರು ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ.

ಮಹೇಶ ಮೊದಲಿಗೆ 2014ರಲ್ಲಿ ಮೋತ ಮಂಡಲದ ನಿವಾಸಿಯಾಗಿದ್ದ ಮಹಿಳೆಯನ್ನ ಮದುವೆಯಾಗಿದ್ದನಂತೆ. 1 ವರ್ಷ ಕಳೆಯುವುದರ ಒಳಗಾಗಿ ಆಕೆಯೊಂದಿಗೆ ಕಿತ್ತಾಡಿಕೊಂಡು ವಿವಾಹ ವಿಚ್ಚೇದನ ಪಡೆದುಕೊಂಡಿದ್ದಾನೆ. ಮತ್ತೆ 2016ರಲ್ಲಿ 2ನೇ ವಿವಾಹವಾಗಿದ್ದ, 2018ರಲ್ಲಿ 3ನೇ ಮದುವೆಯಾಗಿದ್ದ ಮಲ್ಲಯ್ಯ ಅಕ್ಟೋಬರ್ 29ರಂದು 4ನೇ ಮದುವೆಯಾಗಿ ಲಾಕ್ ಆಗಿದ್ದಾನೆ. ಈತನ ವಿರುದ್ಧ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತನ ಜೊತೆ ಸಪ್ತಪದಿ ತುಳಿದಿದ್ದ ಮಹಿಳೆಯರು ದಾರಿ ಕಾಣದೆ ಪರದಾಡ್ತಿದ್ದಾರೆ.

ಒಟ್ನಲ್ಲಿ ಈಗ ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣದ ಬಗ್ಗೆಯೇ ಮಾತು. ಇಷ್ಟೆಲ್ಲಾ ಆರೋಪಗಳು ಕೇಳಿಬಂದಿದ್ದರೂ ಕಾನ್ಸ್​​ಟೇಬಲ್ ವಿರುದ್ಧ ದೂರು ಕೂಡ ದಾಖಲಾಗಿಲ್ಲ ಹಾಗೂ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕಿದೆ. ಈ ಮೂಲವಾದ್ರು ನೊಂದವರಿಗೆ ನ್ಯಾಯ ಕೊಡಿಸಬೇಕಿದೆ. ಇಲ್ಲವಾದ್ರೆ ಈತನಿಗೆ ಮದುವೆ ಆಗೋದೆ ಕೆಲಸವಾಗಿಬಿಟ್ರೂ ಅಚ್ಚರಿಯಿಲ್ಲ.

Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು