AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..

ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ! ಅಂದಹಾಗೆ ಈತನ ಹೆಸ್ರು ರಾವುಲ ಮಹೇಶ ಅಲಿಯಾಸ್ ಮಲ್ಲಯ್ಯ ಅಂತಾ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮದ್ದಿರಾಲ ನಿವಾಸಿ. ಸೂರ್ಯಪೇಟೆಯಲ್ಲಿ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿರುವ […]

ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣ: ಈತ ಮದುವೆಯಾಗಿದ್ದು ಒಂದಲ್ಲ, ಎರಡಲ್ಲ 4 ಬಾರಿ..
ಆಯೇಷಾ ಬಾನು
|

Updated on: Nov 08, 2020 | 7:11 AM

Share

ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ.

ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ! ಅಂದಹಾಗೆ ಈತನ ಹೆಸ್ರು ರಾವುಲ ಮಹೇಶ ಅಲಿಯಾಸ್ ಮಲ್ಲಯ್ಯ ಅಂತಾ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಮದ್ದಿರಾಲ ನಿವಾಸಿ. ಸೂರ್ಯಪೇಟೆಯಲ್ಲಿ ಟ್ರಾಫಿಕ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿರುವ ಮಲ್ಲಯ್ಯನಿಗೆ ಮದುವೆ ಆಗೋದೇ ಕಾಯಕವಾಗಿತ್ತಂತೆ. ಒಂದಲ್ಲ ಎರಡಲ್ಲ 4 ಮದುವೆಯಾಗಿದ್ದಾನೆಂಬ ಆರೋಪ ಈತನ ವಿರುದ್ಧ ಕೇಳಿಬಂದಿದೆ. 3ನೇ ಮದುವೆ ವಿಚ್ಚೇದನ ಪ್ರಕರಣ ಇನ್ನೂ ಕೋರ್ಟ್​ನಲ್ಲಿರುವಾಗಲೇ 4ನೇ ಮದುವೆಯಾಗಿದ್ದಾನೆ. ಈತನ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಮದುವೆಯಾದ ಪತ್ನಿಯರು ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ.

ಮಹೇಶ ಮೊದಲಿಗೆ 2014ರಲ್ಲಿ ಮೋತ ಮಂಡಲದ ನಿವಾಸಿಯಾಗಿದ್ದ ಮಹಿಳೆಯನ್ನ ಮದುವೆಯಾಗಿದ್ದನಂತೆ. 1 ವರ್ಷ ಕಳೆಯುವುದರ ಒಳಗಾಗಿ ಆಕೆಯೊಂದಿಗೆ ಕಿತ್ತಾಡಿಕೊಂಡು ವಿವಾಹ ವಿಚ್ಚೇದನ ಪಡೆದುಕೊಂಡಿದ್ದಾನೆ. ಮತ್ತೆ 2016ರಲ್ಲಿ 2ನೇ ವಿವಾಹವಾಗಿದ್ದ, 2018ರಲ್ಲಿ 3ನೇ ಮದುವೆಯಾಗಿದ್ದ ಮಲ್ಲಯ್ಯ ಅಕ್ಟೋಬರ್ 29ರಂದು 4ನೇ ಮದುವೆಯಾಗಿ ಲಾಕ್ ಆಗಿದ್ದಾನೆ. ಈತನ ವಿರುದ್ಧ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತನ ಜೊತೆ ಸಪ್ತಪದಿ ತುಳಿದಿದ್ದ ಮಹಿಳೆಯರು ದಾರಿ ಕಾಣದೆ ಪರದಾಡ್ತಿದ್ದಾರೆ.

ಒಟ್ನಲ್ಲಿ ಈಗ ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣದ ಬಗ್ಗೆಯೇ ಮಾತು. ಇಷ್ಟೆಲ್ಲಾ ಆರೋಪಗಳು ಕೇಳಿಬಂದಿದ್ದರೂ ಕಾನ್ಸ್​​ಟೇಬಲ್ ವಿರುದ್ಧ ದೂರು ಕೂಡ ದಾಖಲಾಗಿಲ್ಲ ಹಾಗೂ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕಿದೆ. ಈ ಮೂಲವಾದ್ರು ನೊಂದವರಿಗೆ ನ್ಯಾಯ ಕೊಡಿಸಬೇಕಿದೆ. ಇಲ್ಲವಾದ್ರೆ ಈತನಿಗೆ ಮದುವೆ ಆಗೋದೆ ಕೆಲಸವಾಗಿಬಿಟ್ರೂ ಅಚ್ಚರಿಯಿಲ್ಲ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ