AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರ ಮನೆಗೆ ಕಳ್ಳರೂ ಕನ್ನ ಹಾಕಿದ್ರು.. ಇದೆಂಥ ದೌರ್ಭಾಗ್ಯ

ಬೆಂಗಳೂರು ಗ್ರಾಮಾಂತರ: ಕೊರೊನಾ ಸೋಂಕು ತಗಲಿರುವ ನೋವು ಒಂದೆಡೆ ಆದರೆ ಈ ಕುಟುಂಬಕ್ಕೆ ಕಳ್ಳತನದ ಬರೆಯೂ ಸಹ ಬಿದ್ದಿದೆ. ಹೌದು, ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಮನೆಗೆ ಕಳ್ಳರು ಕನ್ನಹಾಕಿರುವ ಘಟನೆ ನಡೆದಿದೆ. ಕಳೆದ ಶನಿವಾರ ಮನೆ ಯಾಜಮಾನನಿಗೆ ಪಾಸಿಟಿವ್ ಬಂದಿತ್ತು. ಈ‌ ಹಿನ್ನೆಲೆಯಲ್ಲಿ ಮನೆಯವರನ್ನೆಲ್ಲಾ ಕ್ವಾರಂಟೈನ್ ಕೇಂದ್ರಕ್ಕೆ ಅಧಿಕಾರಿಗಳು ರವಾನಿಸಿದ್ದರು. ಇದೇ ಸಂದರ್ಭವನ್ನ ಬಳಸಿಕೊಂಡ ಖದೀಮರು ಕಿಟಿಕಿ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಕ್ವಾರಂಟೈನ್ […]

ಕೊರೊನಾ ಸೋಂಕಿತರ ಮನೆಗೆ ಕಳ್ಳರೂ ಕನ್ನ ಹಾಕಿದ್ರು.. ಇದೆಂಥ ದೌರ್ಭಾಗ್ಯ
KUSHAL V
| Edited By: |

Updated on:Jun 27, 2020 | 3:26 PM

Share

ಬೆಂಗಳೂರು ಗ್ರಾಮಾಂತರ: ಕೊರೊನಾ ಸೋಂಕು ತಗಲಿರುವ ನೋವು ಒಂದೆಡೆ ಆದರೆ ಈ ಕುಟುಂಬಕ್ಕೆ ಕಳ್ಳತನದ ಬರೆಯೂ ಸಹ ಬಿದ್ದಿದೆ. ಹೌದು, ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಮನೆಗೆ ಕಳ್ಳರು ಕನ್ನಹಾಕಿರುವ ಘಟನೆ ನಡೆದಿದೆ.

ಕಳೆದ ಶನಿವಾರ ಮನೆ ಯಾಜಮಾನನಿಗೆ ಪಾಸಿಟಿವ್ ಬಂದಿತ್ತು. ಈ‌ ಹಿನ್ನೆಲೆಯಲ್ಲಿ ಮನೆಯವರನ್ನೆಲ್ಲಾ ಕ್ವಾರಂಟೈನ್ ಕೇಂದ್ರಕ್ಕೆ ಅಧಿಕಾರಿಗಳು ರವಾನಿಸಿದ್ದರು. ಇದೇ ಸಂದರ್ಭವನ್ನ ಬಳಸಿಕೊಂಡ ಖದೀಮರು ಕಿಟಿಕಿ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನ ದೋಚಿ ಎಸ್ಕೇಪ್ ಆಗಿದ್ದಾರೆ.

ಕ್ವಾರಂಟೈನ್ ಮುಗಿಸಿ ಹೆಂಡತಿ ಮತ್ತು ಮಗ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಂದಾಜು 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದಾಗಿ ವರದಿಯಾಗಿದೆ.

Published On - 3:23 pm, Sat, 27 June 20