AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿ ಬಾಂಬೆ ಸಲೀಂನ ಪತ್ನಿ ಜೊತೆ ಚಾಟಿಂಗ್! ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಯುವಕನ ಕೊಲೆ

ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್​ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ. ಬಾಂಬೆ ಸಲೀಂ ಮಾಡಿದ್ದ ಕೊಲೆ ಸ್ಕೆಚ್ ಹೇಗಿತ್ತು? ಪೀಣ್ಯ […]

ರೌಡಿ ಬಾಂಬೆ ಸಲೀಂನ ಪತ್ನಿ ಜೊತೆ ಚಾಟಿಂಗ್! ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಯುವಕನ ಕೊಲೆ
KUSHAL V
| Edited By: |

Updated on: Oct 05, 2020 | 4:42 PM

Share

ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್​ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ. ಬಾಂಬೆ ಸಲೀಂ ಮಾಡಿದ್ದ ಕೊಲೆ ಸ್ಕೆಚ್ ಹೇಗಿತ್ತು? ಪೀಣ್ಯ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ಪ್ರಥ್ವಿರಾಜ್, ಶಾಹೀನಾಳ ಜೊತೆ ಪ್ರತಿದಿನ ಚಾಟಿಂಗ್​ ಮಾಡುತ್ತಿದ್ದ. ತನ್ನ ಪತ್ನಿಯ ವ್ಯವಹಾರದ ಬಗ್ಗೆ ತಿಳಿದ ಸಲೀಂ, ಪೃಥ್ವಿರಾಜ್​ನ ಕೊಲೆ ಮಾಡಲು ನಿರ್ಧರಿಸಿದ. ಅಂತೆಯೇ, ಶಾಹೀನಾ ಮುಖಾಂತರ ಪೃಥ್ವಿರಾಜ್‌ಗೆ ಕರೆ ಮಾಡಿ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದ. ತಾನು ತನ್ನ ಕಾರಿನಲ್ಲಿ ಚಾಲಕನ ಜತೆ ಬರುವುದಾಗಿ ಶಾಹೀನಾ ಹೇಳಿದ್ದಳು ಎಂದು ಹೇಳಲಾಗಿದೆ.

ಆದ್ರೆ ಕಾರನ್ನು ಬಾಂಬೆ ಸಲೀಂ ಚಲಾಯಿಸಿಕೊಂಡು ಬಂದಿದ್ದನಂತೆ. ಚಿಕ್ಕಬಳ್ಳಾಪುರದ ಬಳಿ ಶಾಹೀನಾನ ಕಂಡು ಪೃಥ್ವಿರಾಜ್‌ ಆಕೆಯ ಕಾರು ಹತ್ತಿದ್ದ. ಹೈವೇಯಲ್ಲಿ ಕಾರು ಹತ್ತಿದ್ದ ಪ್ರಥ್ವಿರಾಜ್, ಶಾಹೀನಾ ಮೇಲೆ ಕೈ ಹಾಕಿ ಕೂತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಬಾಂಬೆ ಸಲೀಂ ದಾರಿ ಮಧ್ಯೆಯೇ ಶಾಹೀನಾಳನ್ನ ಮನೆಗೆ ಕಳುಹಿಸಿ ಪೃಥ್ವಿರಾಜ್​ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದ.

ಬಳಿಕ ಡ್ಯಾಗರ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಸಲೀಂ ಮತ್ತು ಆತನ ಸಹಚರರು ಪೃಥ್ವಿರಾಜ್​ನ ಕೊಲೆಗೈದಿದ್ದರು. ಇದಾದ ನಂತರ ಮಾರ್ಚ್ 16ರಂದು ಜಿಲ್ಲೆಯ ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಪೃಥ್ವಿರಾಜ್ ಮೃತದೇಹ ಪತ್ತೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಬಾಗೇಪಲ್ಲಿ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.

ಸದ್ಯ ಬೇರೆ ಬೇರೆ ಕೊಲೆ ಕೇಸ್‌ನಲ್ಲಿ ಬಾಂಬೆ ಸಲೀಂ ಆಗಲೇ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಇದೀಗ, ಪೃಥ್ವಿರಾಜ್ ಕೊಲೆಯಲ್ಲಿ ಭಾಗಿಯಾಗಿದ್ದ ಆತನ ನಾಲ್ವರು ಸಹಚರರು ಸಹ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳನ್ನ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ ಹಾಗೂ ವಿನೋದ್ ಎಂದು ಗುರುತಿಸಲಾಗಿದೆ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್