AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿ ಬಾಂಬೆ ಸಲೀಂನ ಪತ್ನಿ ಜೊತೆ ಚಾಟಿಂಗ್! ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಯುವಕನ ಕೊಲೆ

ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್​ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ. ಬಾಂಬೆ ಸಲೀಂ ಮಾಡಿದ್ದ ಕೊಲೆ ಸ್ಕೆಚ್ ಹೇಗಿತ್ತು? ಪೀಣ್ಯ […]

ರೌಡಿ ಬಾಂಬೆ ಸಲೀಂನ ಪತ್ನಿ ಜೊತೆ ಚಾಟಿಂಗ್! ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಯುವಕನ ಕೊಲೆ
KUSHAL V
| Updated By: ಸಾಧು ಶ್ರೀನಾಥ್​|

Updated on: Oct 05, 2020 | 4:42 PM

Share

ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್​ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ. ಬಾಂಬೆ ಸಲೀಂ ಮಾಡಿದ್ದ ಕೊಲೆ ಸ್ಕೆಚ್ ಹೇಗಿತ್ತು? ಪೀಣ್ಯ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ಪ್ರಥ್ವಿರಾಜ್, ಶಾಹೀನಾಳ ಜೊತೆ ಪ್ರತಿದಿನ ಚಾಟಿಂಗ್​ ಮಾಡುತ್ತಿದ್ದ. ತನ್ನ ಪತ್ನಿಯ ವ್ಯವಹಾರದ ಬಗ್ಗೆ ತಿಳಿದ ಸಲೀಂ, ಪೃಥ್ವಿರಾಜ್​ನ ಕೊಲೆ ಮಾಡಲು ನಿರ್ಧರಿಸಿದ. ಅಂತೆಯೇ, ಶಾಹೀನಾ ಮುಖಾಂತರ ಪೃಥ್ವಿರಾಜ್‌ಗೆ ಕರೆ ಮಾಡಿ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದ. ತಾನು ತನ್ನ ಕಾರಿನಲ್ಲಿ ಚಾಲಕನ ಜತೆ ಬರುವುದಾಗಿ ಶಾಹೀನಾ ಹೇಳಿದ್ದಳು ಎಂದು ಹೇಳಲಾಗಿದೆ.

ಆದ್ರೆ ಕಾರನ್ನು ಬಾಂಬೆ ಸಲೀಂ ಚಲಾಯಿಸಿಕೊಂಡು ಬಂದಿದ್ದನಂತೆ. ಚಿಕ್ಕಬಳ್ಳಾಪುರದ ಬಳಿ ಶಾಹೀನಾನ ಕಂಡು ಪೃಥ್ವಿರಾಜ್‌ ಆಕೆಯ ಕಾರು ಹತ್ತಿದ್ದ. ಹೈವೇಯಲ್ಲಿ ಕಾರು ಹತ್ತಿದ್ದ ಪ್ರಥ್ವಿರಾಜ್, ಶಾಹೀನಾ ಮೇಲೆ ಕೈ ಹಾಕಿ ಕೂತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಬಾಂಬೆ ಸಲೀಂ ದಾರಿ ಮಧ್ಯೆಯೇ ಶಾಹೀನಾಳನ್ನ ಮನೆಗೆ ಕಳುಹಿಸಿ ಪೃಥ್ವಿರಾಜ್​ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದ.

ಬಳಿಕ ಡ್ಯಾಗರ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಸಲೀಂ ಮತ್ತು ಆತನ ಸಹಚರರು ಪೃಥ್ವಿರಾಜ್​ನ ಕೊಲೆಗೈದಿದ್ದರು. ಇದಾದ ನಂತರ ಮಾರ್ಚ್ 16ರಂದು ಜಿಲ್ಲೆಯ ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಪೃಥ್ವಿರಾಜ್ ಮೃತದೇಹ ಪತ್ತೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಬಾಗೇಪಲ್ಲಿ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.

ಸದ್ಯ ಬೇರೆ ಬೇರೆ ಕೊಲೆ ಕೇಸ್‌ನಲ್ಲಿ ಬಾಂಬೆ ಸಲೀಂ ಆಗಲೇ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಇದೀಗ, ಪೃಥ್ವಿರಾಜ್ ಕೊಲೆಯಲ್ಲಿ ಭಾಗಿಯಾಗಿದ್ದ ಆತನ ನಾಲ್ವರು ಸಹಚರರು ಸಹ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳನ್ನ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ ಹಾಗೂ ವಿನೋದ್ ಎಂದು ಗುರುತಿಸಲಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!