AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಟಿಜಿಎಸ್ ಮೂಲಕ ಇನ್ನು ಮುಂದೆ 24X7 ಹಣ ವರ್ಗಾವಣೆ ಸಾಧ್ಯ

ಆರ್​ಟಿಜಿಎಸ್​ ಸೌಲಭ್ಯ 24X7 ಲಭ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದಿನಿಂದ (ಡಿ.14) ಸೇರ್ಪಡೆಯಾಗಿದೆ. ಈ ವಿಷಯವನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಆರ್​ಟಿಜಿಎಸ್ ಮೂಲಕ ಇನ್ನು ಮುಂದೆ 24X7 ಹಣ ವರ್ಗಾವಣೆ ಸಾಧ್ಯ
ಸಾಂದರ್ಭಿಕ ಚಿತ್ರ
preethi shettigar
| Edited By: |

Updated on: Dec 14, 2020 | 5:02 PM

Share

ದೆಹಲಿ: ಹೆಚ್ಚಿನ ಮೌಲ್ಯದ ಹಣ ವರ್ಗಾವಣೆಗೆ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್​ಮೆಂಟ್ ಸಿಸ್ಟಮ್ (RTGS) ಸೌಲಭ್ಯ ಇನ್ನು ಮುಂದೆ ದಿನವಿಡೀ ಲಭ್ಯ. ಆರ್​ಟಿಜಿಎಸ್​ ಸೌಲಭ್ಯ 24X7 ಲಭ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದಿನಿಂದ (ಡಿ.14) ಸೇರ್ಪಡೆಯಾಗಿದೆ. ಈ ವಿಷಯವನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಎನ್​ಇಎಫ್​ಟಿ ಮೂಲಕ ಹಣ ವರ್ಗಾವಣೆಯನ್ನು 24×7 ಚಾಲ್ತಿಗೆ ತಂದ ಕೇವಲ ಒಂದು ವರ್ಷದೊಳಗೆ ಆರ್​ಟಿಜಿಎಸ್ ವ್ಯವಸ್ಥೆಯನ್ನೂ ಆರ್​ಬಿಐ ಸದಾ ಲಭ್ಯದ ಸ್ಥಿತಿಗೆ ತಂದಿದೆ. ದೇಶದಲ್ಲಿ ಕೇವಲ 4 ಬ್ಯಾಂಕ್​ಗಳ ಸಹಯೋಗದೊಂದಿಗೆ ಆರ್​ಟಿಜಿಎಸ್ ಸೇವೆ ಮಾರ್ಚ್​ 26, 2004 ರಂದು ಆರಂಭವಾಗಿತ್ತು. ಈಗ 237 ಬ್ಯಾಂಕ್​ಗಳಲ್ಲಿ ಆರ್​ಟಿಜಿಎಸ್ ಸೇವೆ ಲಭ್ಯವಿದ್ದು, ವಾರ್ಷಿಕ ₹  6.35 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ.

ನವೆಂಬರ್ 2020ರಲ್ಲಿ ಆರ್​ಟಿಜಿಎಸ್​ನ ಸರಾಸರಿ ವಹಿವಾಟು ಪ್ರಮಾಣ ₹ 57.96ಕ್ಕೇರಿತ್ತು. ಐಎಸ್​ಒ 20022ರ ಮಾನಕಗಳಿಗೆ ಅನುಗುಣವಿರುವ ನಿರ್ವಹಣಾ ವ್ಯವಸ್ಥೆಯ ಮೂಲಕ ಕೆಲಸ ಮಾಡುತ್ತಿದೆ. ಭಾರತೀಯ ಹಣಕಾಸು ಮಾರುಕಟ್ಟೆಗಳ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗಡಿಯಾಚೆಗಿನ ಪಾವತಿಗಳನ್ನು ಹತೋಟಿಗೆ ತರಲು ಇದು ಸಹಾಯಕವಾಗಿದೆ ಎಂದು ಆರ್​ಬಿಐ ಹೇಳಿದೆ.

ಈ ಹಿಂದೆ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಆರ್​ಟಿಜಿಎಸ್ ಮತ್ತು ಎನ್ಇಎಫ್​ಟಿ ಮೂಲಕ ನಡೆಯುವ ವಹಿವಾಟುಗಳ ಮೇಲಿನ ಶುಲ್ಕ ರದ್ದತಿಗೆ ಆರ್​ಬಿಐ ನಿರ್ಧರಿಸಿತ್ತು.

RBI ನಿರ್ಲಕ್ಷ್ಯವೇ ಲಕ್ಷ್ಮಿ ವಿಲಾಸ್ ಬ್ಯಾಂಕ್​ ದುಃಸ್ಥಿತಿಗೆ ಕಾರಣವಾಯ್ತು: ಹಣಕಾಸು ಸಚಿವೆಗೆ AIBEA ದೂರು

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು