AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಟಿಜಿಎಸ್ ಮೂಲಕ ಇನ್ನು ಮುಂದೆ 24X7 ಹಣ ವರ್ಗಾವಣೆ ಸಾಧ್ಯ

ಆರ್​ಟಿಜಿಎಸ್​ ಸೌಲಭ್ಯ 24X7 ಲಭ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದಿನಿಂದ (ಡಿ.14) ಸೇರ್ಪಡೆಯಾಗಿದೆ. ಈ ವಿಷಯವನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಆರ್​ಟಿಜಿಎಸ್ ಮೂಲಕ ಇನ್ನು ಮುಂದೆ 24X7 ಹಣ ವರ್ಗಾವಣೆ ಸಾಧ್ಯ
ಸಾಂದರ್ಭಿಕ ಚಿತ್ರ
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 14, 2020 | 5:02 PM

Share

ದೆಹಲಿ: ಹೆಚ್ಚಿನ ಮೌಲ್ಯದ ಹಣ ವರ್ಗಾವಣೆಗೆ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್​ಮೆಂಟ್ ಸಿಸ್ಟಮ್ (RTGS) ಸೌಲಭ್ಯ ಇನ್ನು ಮುಂದೆ ದಿನವಿಡೀ ಲಭ್ಯ. ಆರ್​ಟಿಜಿಎಸ್​ ಸೌಲಭ್ಯ 24X7 ಲಭ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದಿನಿಂದ (ಡಿ.14) ಸೇರ್ಪಡೆಯಾಗಿದೆ. ಈ ವಿಷಯವನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಎನ್​ಇಎಫ್​ಟಿ ಮೂಲಕ ಹಣ ವರ್ಗಾವಣೆಯನ್ನು 24×7 ಚಾಲ್ತಿಗೆ ತಂದ ಕೇವಲ ಒಂದು ವರ್ಷದೊಳಗೆ ಆರ್​ಟಿಜಿಎಸ್ ವ್ಯವಸ್ಥೆಯನ್ನೂ ಆರ್​ಬಿಐ ಸದಾ ಲಭ್ಯದ ಸ್ಥಿತಿಗೆ ತಂದಿದೆ. ದೇಶದಲ್ಲಿ ಕೇವಲ 4 ಬ್ಯಾಂಕ್​ಗಳ ಸಹಯೋಗದೊಂದಿಗೆ ಆರ್​ಟಿಜಿಎಸ್ ಸೇವೆ ಮಾರ್ಚ್​ 26, 2004 ರಂದು ಆರಂಭವಾಗಿತ್ತು. ಈಗ 237 ಬ್ಯಾಂಕ್​ಗಳಲ್ಲಿ ಆರ್​ಟಿಜಿಎಸ್ ಸೇವೆ ಲಭ್ಯವಿದ್ದು, ವಾರ್ಷಿಕ ₹  6.35 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ.

ನವೆಂಬರ್ 2020ರಲ್ಲಿ ಆರ್​ಟಿಜಿಎಸ್​ನ ಸರಾಸರಿ ವಹಿವಾಟು ಪ್ರಮಾಣ ₹ 57.96ಕ್ಕೇರಿತ್ತು. ಐಎಸ್​ಒ 20022ರ ಮಾನಕಗಳಿಗೆ ಅನುಗುಣವಿರುವ ನಿರ್ವಹಣಾ ವ್ಯವಸ್ಥೆಯ ಮೂಲಕ ಕೆಲಸ ಮಾಡುತ್ತಿದೆ. ಭಾರತೀಯ ಹಣಕಾಸು ಮಾರುಕಟ್ಟೆಗಳ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗಡಿಯಾಚೆಗಿನ ಪಾವತಿಗಳನ್ನು ಹತೋಟಿಗೆ ತರಲು ಇದು ಸಹಾಯಕವಾಗಿದೆ ಎಂದು ಆರ್​ಬಿಐ ಹೇಳಿದೆ.

ಈ ಹಿಂದೆ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಆರ್​ಟಿಜಿಎಸ್ ಮತ್ತು ಎನ್ಇಎಫ್​ಟಿ ಮೂಲಕ ನಡೆಯುವ ವಹಿವಾಟುಗಳ ಮೇಲಿನ ಶುಲ್ಕ ರದ್ದತಿಗೆ ಆರ್​ಬಿಐ ನಿರ್ಧರಿಸಿತ್ತು.

RBI ನಿರ್ಲಕ್ಷ್ಯವೇ ಲಕ್ಷ್ಮಿ ವಿಲಾಸ್ ಬ್ಯಾಂಕ್​ ದುಃಸ್ಥಿತಿಗೆ ಕಾರಣವಾಯ್ತು: ಹಣಕಾಸು ಸಚಿವೆಗೆ AIBEA ದೂರು

ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ಮೋದಿ ಮನೆ ಮುಂದೆ ರಸ್ತೇಲಿ ಎಷ್ಟು ಗುಂಡಿಗಳಿವೆ ನೋಡಿ: ಡಿಕೆ ಶಿವಕುಮಾರ್
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್