AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿತರಿಗೆ ಬೆಡ್‌ ಸಿಗದಿರುವ ಅಸಲಿ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಿ

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಥಂಡಾ ಹೊಡಿದಿದೆಯಾ? ಹೀಗೊಂದು ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಬೆಡ್‌ ಸಿಗದೆ ಕೊರೊನಾ ಸೋಂಕಿತರು ಪರದಾಡ್ತಿರೋದು. ಹಾಗಾದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆಗ್ತಿರೋದು ಯಾಕೆ..? ಸಿಲಿಕಾನ್ ಸಿಟಿಯ ಆಸ್ಪತ್ರೆಗಳು ಫುಲ್ ಆಗೋದ್ವಾ..? ಕೇವಲ 7 ಸಾವಿರ ಸೋಂಕಿತರಿಗೇ ಇಷ್ಟೊಂದು ಸಮಸ್ಯೆನಾ..? ಇನ್ನು 30ರಿಂದ 40 ಸಾವಿರ ಸೋಂಕಿತರಾಗ್ತಾರೆಂಬ ತಜ್ಞರ ಅಂದಾಜು ನಿಜವಾದ್ರೆ ಬೆಂಗಳೂರಿನ ಗತಿ ಏನು..? ಎನ್ನುವ ಆತಂಕ ಬೆಂಗಳೂರಿನ ಜನರ ನಿದ್ದೆಗೆಡಿಸುತ್ತಿದೆ. ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ […]

ಸೋಂಕಿತರಿಗೆ ಬೆಡ್‌ ಸಿಗದಿರುವ ಅಸಲಿ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಿ
Guru
Guru| Edited By: ಸಾಧು ಶ್ರೀನಾಥ್​|

Updated on: Jul 04, 2020 | 1:10 PM

Share

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಥಂಡಾ ಹೊಡಿದಿದೆಯಾ? ಹೀಗೊಂದು ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಬೆಡ್‌ ಸಿಗದೆ ಕೊರೊನಾ ಸೋಂಕಿತರು ಪರದಾಡ್ತಿರೋದು.

ಹಾಗಾದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆಗ್ತಿರೋದು ಯಾಕೆ..? ಸಿಲಿಕಾನ್ ಸಿಟಿಯ ಆಸ್ಪತ್ರೆಗಳು ಫುಲ್ ಆಗೋದ್ವಾ..? ಕೇವಲ 7 ಸಾವಿರ ಸೋಂಕಿತರಿಗೇ ಇಷ್ಟೊಂದು ಸಮಸ್ಯೆನಾ..? ಇನ್ನು 30ರಿಂದ 40 ಸಾವಿರ ಸೋಂಕಿತರಾಗ್ತಾರೆಂಬ ತಜ್ಞರ ಅಂದಾಜು ನಿಜವಾದ್ರೆ ಬೆಂಗಳೂರಿನ ಗತಿ ಏನು..? ಎನ್ನುವ ಆತಂಕ ಬೆಂಗಳೂರಿನ ಜನರ ನಿದ್ದೆಗೆಡಿಸುತ್ತಿದೆ.

ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ ಬೆಂಗಳೂರಿನಲ್ಲಿ ಬೆಡ್ ಸಿಗದಿರಲು ಇಲ್ಲಿದೆ ನೋಡಿ ಅಸಲಿ ಕಾರಣ. ಸಿಲಿಕಾನ್ ಸಿಟಿಯಲ್ಲಿ ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ. ಕಳೆದ ವಾರದಿಂದಂತಲೂ ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಆದ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿರೋರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ. ಕಳೆದ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 5,238. ಆದ್ರೆ ಇದೇ ಸಮಯದಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ ಮಾತ್ರ ಕೇವಲ 244. ಈ ಏಳು ದಿನಗಳಲ್ಲಿ ಮೂರು ದಿನಗಳು ಒಬ್ಬರೇ ಒಬ್ಬರೂ ಕೂಡಾ ಡಿಸ್ಚಾರ್ಜ್ ಆಗಿಲ್ಲ. ಹೀಗಾಗಿಯೇ ಬೆಡ್‌ಗಾಗಿ ಪರದಾಡ್ತಿದ್ದಾರೆ ಬೆಂಗಳೂರಿನ ಕೊರೊನಾ ಸೋಂಕಿತರು.

ಸೋಂಕಿತರು ಮತ್ತು ಗುಣಮುಖರಾದವರ ಡಾಟಾ ಇಲ್ಲಿದೆ ನೋಡಿ ಇನ್ನೂ ಬಿಡಿಸಿ ಹೇಳಬೇಕೆಂದ್ರೆ ಇಲ್ಲಿದೆ ನೋಡಿ ಕಳೆದ ವಾರದ ಪ್ರತಿ ದಿನದ ಲೆಕ್ಕಾಚಾರ. ಜೂನ್ 27ರಂದು 596 ಸೋಂಕಿತರು ಪತ್ತೆಯಾದ್ರೆ, ಗುಣಮುಖರಾಗಿ ಡಿಸ್ಚಾರ್ಜ್ ಆಗಿರೋರು ಏಳು ಜನರು. ಜೂನ್ 28ರಂದು 738ಹೊಸ ಕೇಸ್ ಪತ್ತೆಯಾದ್ರೆ, ಡಿಸ್ಚಾರ್ಜ್ ಆಗಿದ್ದು ಶೂನ್ಯ. ಜೂನ್ 29ರಂದು 738ಕೇಸ್ ವರದಿಯಾದ್ರೆ, ಡಿಸ್ಚಾರ್ಜ್ ಆಗಿದ್ದು ಮಾತ್ರ ಶೂನ್ಯ. ಜೂನ್ 30ರಂದು 503ಹೊಸ ಕೇಸ್ ಬಂದ್ರೆ, ಡಿಸ್ಚಾರ್ಜ್ ಆಗಿದ್ದು 10ಜನರು. ಜುಲೈ ಒಂದರಂದು 735ಕೇಸ್ ರಜಿಸ್ಟರ್‌ ಆದ್ರೆ, ಡಿಸ್ಚಾರ್ಜ್ ಆಗಿರೋದು ಮಾತ್ರ ಶೂನ್ಯ. ಜುಲೈ ಎರಡರಂದು 889ನೂತರ ಕೇಸ್‌ಗಳು ಪತ್ತೆಯಾದ್ರೆ, ಡಿಸ್ಚಾರ್ಜ್ ಆದೋರ ಸಂಖ್ಯೆ 30. ಇನ್ನು ಜುಲೈ 3ರಂದು ದಾಖಲೆಯ 994 ಹೋಸ ಕೇಸ್‌ಗಳು ವರದಿಯಾದ್ರೆ, ಸ್ವಲ್ಪ ಮಟ್ಟಿನ ರಿಲೀಫ್‌ ಎಂಬಂತೆ ಡಿಸ್ಚಾರ್ಜ್ ಆಗಿದ್ದು 197 ಜನರು.

ಈ ಅಂಕಿ ಅಂಶಗಳನ್ನ ನೋಡಿದ್ರೆನೇ ಗೊತ್ತಾಗುತ್ತೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೆದಿನೇ ಹೆಚ್ಚಾಗ್ತಿದೆ. ಆದ್ರೆ ಇದೇ ಸಮಯದಲ್ಲಿ ಗುಣಮುಖರಾಗಿ ಡಿಸ್‌ಚಾರ್ಜ್‌ ಆಗ್ತಿರೋರ ಸಂಖ್ಯೆ ಮಾತ್ರ ಅಲ್ಪ ಪ್ರಮಾಣದಲ್ಲಿದೆ. ಹೀಗಾಗಿಯೇ ಇದ್ದ ಬೆಡ್‌ಗಳೆಲ್ಲಾ ಭರ್ತಿಯಾಗಿ ಹೊಸ ಸೋಂಕಿತರು ಪರದಾಡಬೇಕಾಗ್ತಿರೋದು. ಹೀಗಾಗಿಯೇ ಬೆಂಗಳೂರಿನ ಜನರು ಆತಂಕಕ್ಕೊಳಗಾಗಿರೋದು. ನಿಮ್ಮೆ ಎಚ್ಚರಿಕೆಯಲ್ಲಿ ನೀವಿರಿ.. ಅದೊಂದೇ ಈಗ ಮಾಡಬೇಕಿರುವುದು.

Follow Us
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!