AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿತರಿಗೆ ಬೆಡ್‌ ಸಿಗದಿರುವ ಅಸಲಿ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಿ

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಥಂಡಾ ಹೊಡಿದಿದೆಯಾ? ಹೀಗೊಂದು ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಬೆಡ್‌ ಸಿಗದೆ ಕೊರೊನಾ ಸೋಂಕಿತರು ಪರದಾಡ್ತಿರೋದು. ಹಾಗಾದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆಗ್ತಿರೋದು ಯಾಕೆ..? ಸಿಲಿಕಾನ್ ಸಿಟಿಯ ಆಸ್ಪತ್ರೆಗಳು ಫುಲ್ ಆಗೋದ್ವಾ..? ಕೇವಲ 7 ಸಾವಿರ ಸೋಂಕಿತರಿಗೇ ಇಷ್ಟೊಂದು ಸಮಸ್ಯೆನಾ..? ಇನ್ನು 30ರಿಂದ 40 ಸಾವಿರ ಸೋಂಕಿತರಾಗ್ತಾರೆಂಬ ತಜ್ಞರ ಅಂದಾಜು ನಿಜವಾದ್ರೆ ಬೆಂಗಳೂರಿನ ಗತಿ ಏನು..? ಎನ್ನುವ ಆತಂಕ ಬೆಂಗಳೂರಿನ ಜನರ ನಿದ್ದೆಗೆಡಿಸುತ್ತಿದೆ. ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ […]

ಸೋಂಕಿತರಿಗೆ ಬೆಡ್‌ ಸಿಗದಿರುವ ಅಸಲಿ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಿ
Guru
Guru| Edited By: ಸಾಧು ಶ್ರೀನಾಥ್​|

Updated on: Jul 04, 2020 | 1:10 PM

Share

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಥಂಡಾ ಹೊಡಿದಿದೆಯಾ? ಹೀಗೊಂದು ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಬೆಡ್‌ ಸಿಗದೆ ಕೊರೊನಾ ಸೋಂಕಿತರು ಪರದಾಡ್ತಿರೋದು.

ಹಾಗಾದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಆಗ್ತಿರೋದು ಯಾಕೆ..? ಸಿಲಿಕಾನ್ ಸಿಟಿಯ ಆಸ್ಪತ್ರೆಗಳು ಫುಲ್ ಆಗೋದ್ವಾ..? ಕೇವಲ 7 ಸಾವಿರ ಸೋಂಕಿತರಿಗೇ ಇಷ್ಟೊಂದು ಸಮಸ್ಯೆನಾ..? ಇನ್ನು 30ರಿಂದ 40 ಸಾವಿರ ಸೋಂಕಿತರಾಗ್ತಾರೆಂಬ ತಜ್ಞರ ಅಂದಾಜು ನಿಜವಾದ್ರೆ ಬೆಂಗಳೂರಿನ ಗತಿ ಏನು..? ಎನ್ನುವ ಆತಂಕ ಬೆಂಗಳೂರಿನ ಜನರ ನಿದ್ದೆಗೆಡಿಸುತ್ತಿದೆ.

ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ ಬೆಂಗಳೂರಿನಲ್ಲಿ ಬೆಡ್ ಸಿಗದಿರಲು ಇಲ್ಲಿದೆ ನೋಡಿ ಅಸಲಿ ಕಾರಣ. ಸಿಲಿಕಾನ್ ಸಿಟಿಯಲ್ಲಿ ಡಿಸ್ಚಾರ್ಜ್‌ಗಿಂತ ಕೊರೊನಾ ಸೋಂಕಿತರೇ ಹೆಚ್ಚಾಗ್ತಿದ್ದಾರೆ. ಕಳೆದ ವಾರದಿಂದಂತಲೂ ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಆದ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿರೋರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದೆ. ಕಳೆದ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 5,238. ಆದ್ರೆ ಇದೇ ಸಮಯದಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ ಮಾತ್ರ ಕೇವಲ 244. ಈ ಏಳು ದಿನಗಳಲ್ಲಿ ಮೂರು ದಿನಗಳು ಒಬ್ಬರೇ ಒಬ್ಬರೂ ಕೂಡಾ ಡಿಸ್ಚಾರ್ಜ್ ಆಗಿಲ್ಲ. ಹೀಗಾಗಿಯೇ ಬೆಡ್‌ಗಾಗಿ ಪರದಾಡ್ತಿದ್ದಾರೆ ಬೆಂಗಳೂರಿನ ಕೊರೊನಾ ಸೋಂಕಿತರು.

ಸೋಂಕಿತರು ಮತ್ತು ಗುಣಮುಖರಾದವರ ಡಾಟಾ ಇಲ್ಲಿದೆ ನೋಡಿ ಇನ್ನೂ ಬಿಡಿಸಿ ಹೇಳಬೇಕೆಂದ್ರೆ ಇಲ್ಲಿದೆ ನೋಡಿ ಕಳೆದ ವಾರದ ಪ್ರತಿ ದಿನದ ಲೆಕ್ಕಾಚಾರ. ಜೂನ್ 27ರಂದು 596 ಸೋಂಕಿತರು ಪತ್ತೆಯಾದ್ರೆ, ಗುಣಮುಖರಾಗಿ ಡಿಸ್ಚಾರ್ಜ್ ಆಗಿರೋರು ಏಳು ಜನರು. ಜೂನ್ 28ರಂದು 738ಹೊಸ ಕೇಸ್ ಪತ್ತೆಯಾದ್ರೆ, ಡಿಸ್ಚಾರ್ಜ್ ಆಗಿದ್ದು ಶೂನ್ಯ. ಜೂನ್ 29ರಂದು 738ಕೇಸ್ ವರದಿಯಾದ್ರೆ, ಡಿಸ್ಚಾರ್ಜ್ ಆಗಿದ್ದು ಮಾತ್ರ ಶೂನ್ಯ. ಜೂನ್ 30ರಂದು 503ಹೊಸ ಕೇಸ್ ಬಂದ್ರೆ, ಡಿಸ್ಚಾರ್ಜ್ ಆಗಿದ್ದು 10ಜನರು. ಜುಲೈ ಒಂದರಂದು 735ಕೇಸ್ ರಜಿಸ್ಟರ್‌ ಆದ್ರೆ, ಡಿಸ್ಚಾರ್ಜ್ ಆಗಿರೋದು ಮಾತ್ರ ಶೂನ್ಯ. ಜುಲೈ ಎರಡರಂದು 889ನೂತರ ಕೇಸ್‌ಗಳು ಪತ್ತೆಯಾದ್ರೆ, ಡಿಸ್ಚಾರ್ಜ್ ಆದೋರ ಸಂಖ್ಯೆ 30. ಇನ್ನು ಜುಲೈ 3ರಂದು ದಾಖಲೆಯ 994 ಹೋಸ ಕೇಸ್‌ಗಳು ವರದಿಯಾದ್ರೆ, ಸ್ವಲ್ಪ ಮಟ್ಟಿನ ರಿಲೀಫ್‌ ಎಂಬಂತೆ ಡಿಸ್ಚಾರ್ಜ್ ಆಗಿದ್ದು 197 ಜನರು.

ಈ ಅಂಕಿ ಅಂಶಗಳನ್ನ ನೋಡಿದ್ರೆನೇ ಗೊತ್ತಾಗುತ್ತೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೆದಿನೇ ಹೆಚ್ಚಾಗ್ತಿದೆ. ಆದ್ರೆ ಇದೇ ಸಮಯದಲ್ಲಿ ಗುಣಮುಖರಾಗಿ ಡಿಸ್‌ಚಾರ್ಜ್‌ ಆಗ್ತಿರೋರ ಸಂಖ್ಯೆ ಮಾತ್ರ ಅಲ್ಪ ಪ್ರಮಾಣದಲ್ಲಿದೆ. ಹೀಗಾಗಿಯೇ ಇದ್ದ ಬೆಡ್‌ಗಳೆಲ್ಲಾ ಭರ್ತಿಯಾಗಿ ಹೊಸ ಸೋಂಕಿತರು ಪರದಾಡಬೇಕಾಗ್ತಿರೋದು. ಹೀಗಾಗಿಯೇ ಬೆಂಗಳೂರಿನ ಜನರು ಆತಂಕಕ್ಕೊಳಗಾಗಿರೋದು. ನಿಮ್ಮೆ ಎಚ್ಚರಿಕೆಯಲ್ಲಿ ನೀವಿರಿ.. ಅದೊಂದೇ ಈಗ ಮಾಡಬೇಕಿರುವುದು.

Follow Us
Guru
Guru
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್