ಸೀಲ್‌ಡೌನ್ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು.. ಸ್ಥಳೀಯರಿಗೆ ಸ್ನೇಕ್ ಶ್ಯಾಮ್ ಫುಲ್ ಕ್ಲಾಸ್!

ಮೈಸೂರು: ಕೊರೊನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಆಗಿರುವ ಮೈಸೂರಿನ ತಿಲಕ್ ನಗರದ ಸಿ.ವಿ.ರಸ್ತೆಯ 8 ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದ ಉರಗ ತಜ್ಞ ಸ್ನೇಕ್ ಶ್ಯಾಮ್ ಸ್ಥಳಕ್ಕಾಗಮಿಸಿ ಮನೆಯಲ್ಲಿ ಅಡಗಿದ್ದ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ನಾಗರಹಾವು ಪತ್ತೆಯಾದ ಮನೆಗೆ ಹೊಂದಿಕೊಂಡಿರುವ ಮೂರನೇ ಮನೆಯಲ್ಲಿ ಕೊರೊನಾ ಸೋಂಕು‌ ಕಂಡು ಬಂದಿದೆ. ಈ ವೇಳೆ ಬಹುತೇಕರು ಮಾಸ್ಕ್ ಹಾಕಿಕೊಳ್ಳದೇ ಇರುವುದನ್ನು ಕಂಡ ಸ್ನೇಕ್ ಶ್ಯಾಮ್ ಸ್ಥಳೀಯರಿಗೆ ಫುಲ್ ಕ್ಲಾಸ್ […]

ಸೀಲ್‌ಡೌನ್ ಮನೆಗೆ ಎಂಟ್ರಿ ಕೊಟ್ಟ ನಾಗರಹಾವು.. ಸ್ಥಳೀಯರಿಗೆ ಸ್ನೇಕ್ ಶ್ಯಾಮ್ ಫುಲ್ ಕ್ಲಾಸ್!
ಸಾಧು ಶ್ರೀನಾಥ್​

Updated on: Jul 18, 2020 | 5:00 PM

ಮೈಸೂರು: ಕೊರೊನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಆಗಿರುವ ಮೈಸೂರಿನ ತಿಲಕ್ ನಗರದ ಸಿ.ವಿ.ರಸ್ತೆಯ 8 ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದ ಉರಗ ತಜ್ಞ ಸ್ನೇಕ್ ಶ್ಯಾಮ್ ಸ್ಥಳಕ್ಕಾಗಮಿಸಿ ಮನೆಯಲ್ಲಿ ಅಡಗಿದ್ದ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.

ಈ ವೇಳೆ ನಾಗರಹಾವು ಪತ್ತೆಯಾದ ಮನೆಗೆ ಹೊಂದಿಕೊಂಡಿರುವ ಮೂರನೇ ಮನೆಯಲ್ಲಿ ಕೊರೊನಾ ಸೋಂಕು‌ ಕಂಡು ಬಂದಿದೆ. ಈ ವೇಳೆ ಬಹುತೇಕರು ಮಾಸ್ಕ್ ಹಾಕಿಕೊಳ್ಳದೇ ಇರುವುದನ್ನು ಕಂಡ ಸ್ನೇಕ್ ಶ್ಯಾಮ್ ಸ್ಥಳೀಯರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ದೂರದ ಚೀನಾದಿಂದಲೇ‌ ಕೊರೊನಾ ವೈರಸ್ ಬಂದಿದೆ.. ಇನ್ನು ಮೂರನೇ ಮನೆಯಿಂದ ಕೊರೊನಾ ಬರುವುದಿಲ್ಲವೇ!? ದಯಾಮಾಡಿ ಎಲ್ಲರೂ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿ ಸ್ನೇಕ್ ಸಮೇತ.. ಸ್ನೇಕ್ ಶ್ಯಾಮ್ ತೆರಳಿದರು.

 

Published On - 4:57 pm, Sat, 18 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us