ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಫುಲ್! ಧನುರ್ಮಾಸದಲ್ಲಿ ಭರ್ಜರಿ ಕಲೆಕ್ಷನ್

ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಮತ್ತೆ ಕೋಟ್ಯಾಧೀಶನಾಗಿರುವ ಸುದ್ದಿಯಿದು! ಧನುರ್ಮಾಸದಲ್ಲಿ ದೇಗುಲದಲ್ಲಿ ಹುಂಡಿ ಕಲೆಕ್ಷನ್ ಭರ್ಜರಿಯಾಗಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ದೇವಾಲಯದಲ್ಲಿ ಪ್ರತಿ ತಿಂಗಳು ಮಾದಪ್ಪನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದುಬರುತ್ತಿದೆ. ನಿನ್ನೆ ತಡರಾತ್ರಿವರೆಗೂ ‌ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಈ ಮಾಸದ ಲೆಕ್ಕದಲ್ಲಿ 1 ಕೋಟಿ 88 ಲಕ್ಷದ 21 ಸಾವಿರದ 108 ರೂಪಾಯಿ ನಗದು ಸಂಗ್ರಹವಾಗಿದೆ. ನಗದು ಜೊತೆಗೆ 48 ಗ್ರಾಂ ಚಿನ್ನ, 2 ಕೆ.ಜಿ 1.800 […]

ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಫುಲ್! ಧನುರ್ಮಾಸದಲ್ಲಿ ಭರ್ಜರಿ ಕಲೆಕ್ಷನ್
ಸಾಧು ಶ್ರೀನಾಥ್​

Updated on: Dec 28, 2019 | 11:28 AM

ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಮತ್ತೆ ಕೋಟ್ಯಾಧೀಶನಾಗಿರುವ ಸುದ್ದಿಯಿದು! ಧನುರ್ಮಾಸದಲ್ಲಿ ದೇಗುಲದಲ್ಲಿ ಹುಂಡಿ ಕಲೆಕ್ಷನ್ ಭರ್ಜರಿಯಾಗಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ದೇವಾಲಯದಲ್ಲಿ ಪ್ರತಿ ತಿಂಗಳು ಮಾದಪ್ಪನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದುಬರುತ್ತಿದೆ. ನಿನ್ನೆ ತಡರಾತ್ರಿವರೆಗೂ ‌ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಈ ಮಾಸದ ಲೆಕ್ಕದಲ್ಲಿ 1 ಕೋಟಿ 88 ಲಕ್ಷದ 21 ಸಾವಿರದ 108 ರೂಪಾಯಿ ನಗದು ಸಂಗ್ರಹವಾಗಿದೆ.

ನಗದು ಜೊತೆಗೆ 48 ಗ್ರಾಂ ಚಿನ್ನ, 2 ಕೆ.ಜಿ 1.800 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಭಕ್ತರು ಹೆಚ್ಚಾಗಿ ಐದು ಮತ್ತು ಹತ್ತು ರುಪಾಯಿ ನಾಣ್ಯ ಮತ್ತು ನೋಟುಗಳನ್ನು ಸಮರ್ಪಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us