AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್​ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ

ಒಲಂಪಿಕ್ಸ್​ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್​ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್​ಗಳನ್ನು ತಯಾರು ಮಾಡಲು ಕೋಚ್​ಗಳು ಹಗಲು ರಾತ್ರಿ ಶ್ರಮಪಡುತ್ತಾರೆ.

Tokyo Olympics 2020: ಪದಕ ಗೆಲ್ಲುವ ಭಾರತೀಯ ಕ್ರೀಡಾಪಟುಗಳ ಕೋಚ್​ಗಳಿಗೂ ನಗದು ಬಹಮಾನ ನೀಡುವ ಘೋಷಣೆ ಮಾಡಿದ ಐಒಎ
ಕೋಚ್​ಗಳೊಂದಿಗೆ ಮೀರಾಬಾಯಿ ಚಾನು
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 24, 2021 | 10:16 PM

Share

ಭಾರತದ ಕ್ರೀಡಾಪಟುಗಳು ಒಲಂಪಿಕ್ಸ್​ನಲ್ಲಿ ಪದಕ ಗೆದ್ದರೆ ಕೇವಲ ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಉಬ್ಬುವುದಿಲ್ಲ, ಅವರನ್ನು ಆ ಹಂತಕ್ಕೆ ತಯಾರು ಮಾಡಿದ ತರಬೇತುದಾರರು ಮತ್ತು ಕೋಚ್​ಗಳು ಸಹ ನಗದು ಇನಾಮು ಪಡೆಯಲಿದ್ದಾರೆ. ಶನಿವಾರದಂದು ಮಹಿಳೆಯರು ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ನಿರ್ಮಿಸಿ ದ ಮೀರಾಬಾಯಿ ಚಾನು ಅವರ ಕೋಚ್ ವಿಜಯ ಶರ್ಮ ಅವರಿಗೆ 10 ಲಕ್ಷ ರೂ. ಗಳ ಬಹುಮಾನ ನೀಡುವ ಘೋಡಣೆಯನ್ನು ಭಾರತೀಯ ಒಲಂಪಿಕ್ ಸಂಸ್ಥೆ (ಐಒಎ) ಮಾಡಿದೆ. ಸಂಸ್ಥೆ ಮಾಡಿರುವ ಘೋಷಣೆ ಪ್ರಕಾರ ಚಿನ್ನದ ಪದಕೆ ಗೆಲ್ಲುವ ಕ್ರೀಡಾಪಟುವಿನ ಕೋಚ್​ ರೂ. 12.5 ಲಕ್ಷಗಳನ್ನು ಬಹುಮಾನ ಪಡೆಯಲಿದ್ದಾರೆ ಮತ್ತು ಕಂಚಿನ ಪದಕ ಗೆಲ್ಲುವ ಅಥ್ಲೀಟ್​ನ ಕೋಚ್​ ರೂ.7.5 ಲಕ್ಷ ನಗದನ್ನು ರಿವಾರ್ಡ್​ ಆಗಿ ಪಡೆಯಲಿದ್ದಾರೆ.

ಒಲಂಪಿಕ್ಸ್​ನಲ್ಲಿ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಕ್ರೀಡಾಪಟುವನ್ನು ಕೋಚ್​ಗಳು ಹುರಿಗೊಳಿಸುವುದರಿಂದ ಅವರೂ ಸಹ ಬಹಮಾನ ಮತ್ತು ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಅಥ್ಲೀಟ್​ಗಳನ್ನು ತಯಾರು ಮಾಡಲು ಕೋಚ್​ಗಳು ಹಗಲು ರಾತ್ರಿ ಶ್ರಮಪಡುತ್ತಾರೆ. ಅಥ್ಲೀಟ್​ಗಳಂತೆ ಅವರು ಸಹ ತ್ಯಾಗಗಳನ್ನು ಮಾಡಬೇಕಾಗುತ್ತದೆ,’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಟೊಕಿಯೋ ಒಲಂಪಿಕ್ಸ್​​ನಲ್ಲಿ ಸ್ವರ್ಣ ಪದಕೆ ಗೆಲ್ಲುವ ಅಥ್ಲೀಟ್​ಗೆ ರೂ. 75 ಲಕ್ಷ ನೀಡುವುದಾಗಿ ಐಒಎ ಗುರುವಾರದಂದು ಹೇಳಿತ್ತು. ಅದಲ್ಲದೆ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟು ಪ್ರತಿನಿಧಿಸುವ ಕ್ರೀಡಾ ಸಂಸ್ಥೆಗಳಿಗೆ (ರಾಷ್ಟ್ರೀಯ ಕ್ರೀಡಾ ಒಕ್ಕೂಟ, ಎನ್​ಎಸ್​ಎಫ್) ಬೋನಸ್ ರೂಪದಲ್ಲಿ ರೂ. 25 ಲಕ್ಷ ನೀಡುವ ಘೋಷಣೆ ಯನ್ನೂ ಅದು ಮಾಡಿತ್ತು.

ಟೊಕಿಯೋ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವವರಿಗೆ ರೂ. 40 ಲಕ್ಷ ಮತ್ತು ಕಂಚಿನ ಪದಕ ಗೆಲ್ಲುವವರಿಗೆ ರೂ. 25 ಲಕ್ಷ ನೀಡುವ ಘೋಷಣೆಯನ್ನೂ ಐಒಎ ಮಾಡಿದೆ. ಹಾಗೆಯೇ, ಈ ಒಲಂಪಿಕ್ಸ್​ನಲ್ಲಿ ಬಾಗವಹಿಸಿರುವ ಪ್ರತಿಯೊಬ್ಬ ಅಥ್ಲೀಟ್​ಗೆ ರೂ. 1ಲಕ್ಷ ಮತ್ತು ಪದಕ ಗೆಲ್ಲುವ ಎನ್​ಎಸ್​ಎಫ್​ಗಳಿಗೆ ರೂ. 30 ಲಕ್ಷ ನೀಡುವುದಾಗಿ ಐಒಎ ಹೇಳಿದೆ.

ಇದನ್ನೂ ಓದಿ: ನನಗೆ ಅದೆಷ್ಟು ಸಂತೋಷವಾಗ್ತಿದೆ ಅಂದ್ರೆ, ಹೇಳೋಕೆ ಪದಗಳೇ ಸಾಕಾಗ್ತಿಲ್ಲ: ಟೊಕಿಯೊದಲ್ಲಿ ಪದಕ ಗೆದ್ದ ಮೀರಾಬಾಯಿ ಚಾನು

ಇದನ್ನೂ ಓದಿ: ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದಿರುವ ಭಾರತೀಯರು ಮತ್ತು ಅವರು ಪ್ರತಿನಿಧಿಸಲಿರುವ ಕ್ರೀಡೆಯ ವಿವರ ಇಲ್ಲಿದೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ