ಬೀದರ್: 25 ಜನ ಪ್ರಯಾಣಿಕರಿದ್ದ ಬಸ್ ಮೇಲೆ ಕಲ್ಲೆಸೆತ
ಬೀದರ್ನ ಬರಿದ್ ಶಾಯಿ ಗಾರ್ಡನ್ ಬಳಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಕಿಡಗೇಡಿ ಯುವಕರ ಗ್ಯಾಂಗ್ ಪಾರಾರಿಯಾಗಿದ್ದಾರೆ.

ಬೀದರ್: ಮೂರು ದಿನಗಳಿಂದ ನಿಂತಲ್ಲೇ ನಿಂತಿದ್ದ ಬಸ್ಗಳು ಇಂದು ನಿಧಾನವಾಗಿ ರಸ್ತೆಗೆ ಇಳಿಯುತ್ತಿವೆ. ಪೊಲೀಸ್ ಭದ್ರತೆಯಲ್ಲಿ ಬಸ್ ಸೇವೆ ಆರಂಭವಾಗುತ್ತಿದೆ. ಇದರ ನಡುವೆಯೇ ಬೀದರ್ನಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.
ಬೀದರ್ನ ಬರಿದ್ ಶಾಯಿ ಗಾರ್ಡನ್ ಬಳಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಪಾರಾರಿಯಾಗಿದ್ದಾರೆ. ಕಲಬುರ್ಗಿಯಿಂದ ಬೀದರ್ಗೆ ಬರುತ್ತಿದ್ದ ಬಸ್ನಲ್ಲಿ 25 ಜನ ಪ್ರಯಾಣಿಕರಿದ್ದರು. ಕಿಡಗೇಡಿ ಯುವಕರ ಗ್ಯಾಂಗ್ ಈ ಬಸ್ ಮೇಲೆ ಕಲ್ಲುತೂರಿ ಪರಾರಿಯಾಗಿದ್ದಾರೆ.
ಕಲಬುರಗಿಯಿಂದ ಪೊಲೀಸ್ ಭದ್ರತೆಯಲ್ಲಿ ಈ ಬಸ್ ಸಂಚರಿಸುತ್ತಿತ್ತು. ಬೀದರ್ ನಗರಕ್ಕೆ ಎಂಟ್ರಿಕೊಡುತ್ತಿದ್ದಂತೆ ಪೊಲೀಸ್ ಎಸ್ಕಾರ್ಟ್ ಇರಲ್ಲಿಲ್ಲ. ಇದನ್ನ ಗಮನಿಸುತ್ತಿದ್ದ ಕಿಡಗೇಡಿ ಗ್ಯಾಂಗ್ ಕಲ್ಲೆಸೆದು ಬಸ್ ಗಾಜು ಹೊಡೆದು ಹಾಕಿದ್ದಾರೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಗಿಯಿತಾ? ಎಲ್ಲೆಲ್ಲಿ ಬಸ್ ಸಂಚಾರ ಪ್ರಾರಂಭವಾಗಿದೆ? ಇಲ್ಲಿದೆ ಮಾಹಿತಿ
Published On - 1:31 pm, Mon, 14 December 20