AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on:Dec 14, 2020 | 3:27 PM

Share

ಇಸ್ಲಾಮಾಬಾದ್: ಸೌದಿ ಅರೇಬಿಯಾಕ್ಕೆ ತುರ್ತಾಗಿ ಪಾವತಿಸಬೇಕಿರುವ 2 ಶತಕೋಟಿ ಡಾಲರ್ ಹಳೇ ಸಾಲ ತೀರಿಸಲು ಪಾಕಿಸ್ತಾನವು ಅಷ್ಟೇ ಮೊತ್ತದ ಹೊಸ ಸಾಲವನ್ನು ಚೀನಾದಿಂದ ಪಡೆದುಕೊಳ್ಳುತ್ತಿದೆ. ಇಂದು (ಡಿ.14) ಸಾಲದ ಮೊದಲ ಕಂತಾಗಿ 1 ಶತಕೋಟಿ ಡಾಲರ್ ಮೊತ್ತವನ್ನು ಚೀನಾಗೆ ಪಾಕಿಸ್ತಾನ ಪಾವತಿಸಲಿದೆ. ಬಾಕಿ ಮೊತ್ತವನ್ನು ಜನವರಿ ತಿಂಗಳಲ್ಲಿ ಪಾವತಿಸುವುದಾಗಿ ಹೇಳಿದೆ.

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ. ಅದರ ಬದಲು 2011ರ ದ್ವಿಪಕ್ಷೀಯ ಕರೆನ್ಸಿ ಸ್ವಾಪ್​ ಒಪ್ಪಂದದ (CSA) ಒಪ್ಪಂದದ ವ್ಯಾಪ್ತಿಯನ್ನು ಸ್ವಲ್ಪ ಹೆಚ್ಚಿಸಿ, ಈ ಸಾಲ ನೀಡುತ್ತಿದೆ.

ಏನಿದು CSA? ಕರೆನ್ಸಿ ಸ್ವಾಪ್​ ಅಗ್ರಿಮೆಂಟ್ ಎಂದರೆ ಕರೆನ್ಸಿ ವಿನಿಮಯ ಒಪ್ಪಂದ. 2011ರಲ್ಲಿ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್​ ಮತ್ತು ಚೀನಾದ ಪೀಪಲ್ಸ್​ ಬ್ಯಾಂಕ್​ ನಡುವೆ ಈ ಒಪ್ಪಂದ ಆಗಿದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹಣಕಾಸು ನೇರ ಹೂಡಿಕೆ ಉತ್ತೇಜಿಸಲು ಹಾಗೂ ಅಲ್ಪಾವಧಿ ಲಿಕ್ವಿಡಿಟಿ (ದ್ರವ್ಯತೆ) ಬೆಂಬಲ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂಲ ಒಪ್ಪಂದವನ್ನು 2014ರಲ್ಲಿ ನವೀಕರಿಸಲಾಗಿದ್ದು, ಅದರ ಅನ್ವಯ ಮೌಲ್ಯ 10 ಶತಕೋಟಿ ಚೀನಾ ಯುವಾನ್​ ಅಥವಾ 1.5 ಶತಕೋಟಿ ಅಮೆರಿಕ ಡಾಲರ್​ನಷ್ಟು ಮೊತ್ತವನ್ನು ಎರಡೂ ದೇಶಗಳು ಪರಸ್ಪರ ನಗದು ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

2018ರಲ್ಲಿ ಈ ಒಪ್ಪಂದದ ವ್ಯಾಪ್ತಿಯನ್ನು ಮೂರು ವರ್ಷಗಳ ಅವಧಿಗೆ ಹೆಚ್ಚಿಸಲಾಗಿದ್ದು. ಇದರ ಅನ್ವಯ 20ಶತಕೋಟಿ ಯುವಾನ್ ಅಥವಾ 3 ಶತಕೋಟಿ ಡಾಲರ್​ಗೆ ಮೌಲ್ಯವನ್ನು ಏರಿಸಲಾಗಿದೆ. ಈ ಒಪ್ಪಂದದ ಪ್ರಕಾರ ಈಗ ಚೀನಾ ಕೊಟ್ಟಿರುವ 2 ಶತಕೋಟಿ ಡಾಲರ್ ಸಾಲವು ಪಾಕಿಸ್ತಾನವು ಹೊರದೇಶದಿಂದ ಪಡೆದುಕೊಂಡ ಸಾರ್ವಜನಿಕ ಸಾಲ ಎನಿಸಿಕೊಳ್ಳುವುದಿಲ್ಲ.

ಸಾಲದ ಷರತ್ತುಗಳ ಬಗ್ಗೆ ಎರಡೂ ದೇಶಗಳೂ ಮೌನವಾಗಿದ್ದು, ದ್ವಿಪಕ್ಷೀಯ ಗೌಪ್ಯ ವಿಚಾರ ಎಂದು ಹೇಳಿವೆ.

ಸದ್ಯಕ್ಕೆ ಪಾಕಿಸ್ತಾನಕ್ಕೆ ವೀಸಾ ವಿತರಣೆ ಸ್ಥಗಿತಗೊಳಿಸಿದ UAE

Published On - 3:26 pm, Mon, 14 December 20

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ