AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on:Dec 14, 2020 | 3:27 PM

Share

ಇಸ್ಲಾಮಾಬಾದ್: ಸೌದಿ ಅರೇಬಿಯಾಕ್ಕೆ ತುರ್ತಾಗಿ ಪಾವತಿಸಬೇಕಿರುವ 2 ಶತಕೋಟಿ ಡಾಲರ್ ಹಳೇ ಸಾಲ ತೀರಿಸಲು ಪಾಕಿಸ್ತಾನವು ಅಷ್ಟೇ ಮೊತ್ತದ ಹೊಸ ಸಾಲವನ್ನು ಚೀನಾದಿಂದ ಪಡೆದುಕೊಳ್ಳುತ್ತಿದೆ. ಇಂದು (ಡಿ.14) ಸಾಲದ ಮೊದಲ ಕಂತಾಗಿ 1 ಶತಕೋಟಿ ಡಾಲರ್ ಮೊತ್ತವನ್ನು ಚೀನಾಗೆ ಪಾಕಿಸ್ತಾನ ಪಾವತಿಸಲಿದೆ. ಬಾಕಿ ಮೊತ್ತವನ್ನು ಜನವರಿ ತಿಂಗಳಲ್ಲಿ ಪಾವತಿಸುವುದಾಗಿ ಹೇಳಿದೆ.

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ. ಅದರ ಬದಲು 2011ರ ದ್ವಿಪಕ್ಷೀಯ ಕರೆನ್ಸಿ ಸ್ವಾಪ್​ ಒಪ್ಪಂದದ (CSA) ಒಪ್ಪಂದದ ವ್ಯಾಪ್ತಿಯನ್ನು ಸ್ವಲ್ಪ ಹೆಚ್ಚಿಸಿ, ಈ ಸಾಲ ನೀಡುತ್ತಿದೆ.

ಏನಿದು CSA? ಕರೆನ್ಸಿ ಸ್ವಾಪ್​ ಅಗ್ರಿಮೆಂಟ್ ಎಂದರೆ ಕರೆನ್ಸಿ ವಿನಿಮಯ ಒಪ್ಪಂದ. 2011ರಲ್ಲಿ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್​ ಮತ್ತು ಚೀನಾದ ಪೀಪಲ್ಸ್​ ಬ್ಯಾಂಕ್​ ನಡುವೆ ಈ ಒಪ್ಪಂದ ಆಗಿದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹಣಕಾಸು ನೇರ ಹೂಡಿಕೆ ಉತ್ತೇಜಿಸಲು ಹಾಗೂ ಅಲ್ಪಾವಧಿ ಲಿಕ್ವಿಡಿಟಿ (ದ್ರವ್ಯತೆ) ಬೆಂಬಲ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂಲ ಒಪ್ಪಂದವನ್ನು 2014ರಲ್ಲಿ ನವೀಕರಿಸಲಾಗಿದ್ದು, ಅದರ ಅನ್ವಯ ಮೌಲ್ಯ 10 ಶತಕೋಟಿ ಚೀನಾ ಯುವಾನ್​ ಅಥವಾ 1.5 ಶತಕೋಟಿ ಅಮೆರಿಕ ಡಾಲರ್​ನಷ್ಟು ಮೊತ್ತವನ್ನು ಎರಡೂ ದೇಶಗಳು ಪರಸ್ಪರ ನಗದು ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

2018ರಲ್ಲಿ ಈ ಒಪ್ಪಂದದ ವ್ಯಾಪ್ತಿಯನ್ನು ಮೂರು ವರ್ಷಗಳ ಅವಧಿಗೆ ಹೆಚ್ಚಿಸಲಾಗಿದ್ದು. ಇದರ ಅನ್ವಯ 20ಶತಕೋಟಿ ಯುವಾನ್ ಅಥವಾ 3 ಶತಕೋಟಿ ಡಾಲರ್​ಗೆ ಮೌಲ್ಯವನ್ನು ಏರಿಸಲಾಗಿದೆ. ಈ ಒಪ್ಪಂದದ ಪ್ರಕಾರ ಈಗ ಚೀನಾ ಕೊಟ್ಟಿರುವ 2 ಶತಕೋಟಿ ಡಾಲರ್ ಸಾಲವು ಪಾಕಿಸ್ತಾನವು ಹೊರದೇಶದಿಂದ ಪಡೆದುಕೊಂಡ ಸಾರ್ವಜನಿಕ ಸಾಲ ಎನಿಸಿಕೊಳ್ಳುವುದಿಲ್ಲ.

ಸಾಲದ ಷರತ್ತುಗಳ ಬಗ್ಗೆ ಎರಡೂ ದೇಶಗಳೂ ಮೌನವಾಗಿದ್ದು, ದ್ವಿಪಕ್ಷೀಯ ಗೌಪ್ಯ ವಿಚಾರ ಎಂದು ಹೇಳಿವೆ.

ಸದ್ಯಕ್ಕೆ ಪಾಕಿಸ್ತಾನಕ್ಕೆ ವೀಸಾ ವಿತರಣೆ ಸ್ಥಗಿತಗೊಳಿಸಿದ UAE

Published On - 3:26 pm, Mon, 14 December 20

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!