AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪಲ್​ ತಂದ ಆಪತ್ತು.. ಮೊಬೈಲ್ ಚಾರ್ಜ್​ ಹಾಕಿ ಜಳಕ ಮಾಡಿದ ಮಹಿಳೆ ಸಾವು!

ಒಲೆಸ್ಯಾ ಸೆಮೆನೋವಾ ಎಂಬಾಕೆ ಮೃತ ಮಹಿಳೆ. ಬಾತ್​ ಟಬ್​ನಲ್ಲಿ ನೀರು ತುಂಬಿಸಿ, ಅದರಲ್ಲಿ ಕೂತು ಮೊಬೈಲ್​ ನೋಡೋದು ಆಕೆಯ ದಿನಚರಿಗಳಲ್ಲೊಂದಾಗಿತ್ತು. ಇದೇ ಅವಳ ಪ್ರಾಣಕ್ಕೆ ಕುತ್ತಾಗಿದೆ.

ಆ್ಯಪಲ್​ ತಂದ ಆಪತ್ತು.. ಮೊಬೈಲ್ ಚಾರ್ಜ್​ ಹಾಕಿ ಜಳಕ ಮಾಡಿದ ಮಹಿಳೆ ಸಾವು!
ಮೊಬೈಲ್ ಚಾರ್ಜ್​ ಹಾಕಿ ಜಳಕ ಮಾಡಿದ ಮಹಿಳೆ ಸಾವು!
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Dec 14, 2020 | 5:19 PM

Share

ಚಾರ್ಜ್​ಗೆ ಹಾಕಿ ಮೊಬೈಲ್​ ಬಳಕೆ ಮಾಡಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ಇದನ್ನು ಅನೇಕರು ನಿರ್ಲಕ್ಷಿಸುತ್ತಾರೆ. ಅದೇ ರೀತಿ ಈಗ ಮೊಬೈಲ್​ ಚಾರ್ಜ್​ ಹಾಕಿ ಬಳಕೆ ಮಾಡಿದ ಮಹಿಳೆ ಸಾವಿನ ಮನೆ ಸೇರಿದ್ದಾಳೆ.

ಈ ಘಟನೆ ನಡೆದಿದ್ದು ರಷ್ಯಾದಲ್ಲಿ. ಒಲೆಸ್ಯಾ ಸೆಮೆನೋವಾ ಎಂಬಾಕೆ ಮೃತ ಮಹಿಳೆ. ಬಾತ್​ ಟಬ್​ನಲ್ಲಿ ನೀರು ತುಂಬಿಸಿ, ಅದರಲ್ಲಿ ಕೂತು ಮೊಬೈಲ್​ ನೋಡೋದು ಆಕೆಯ ದಿನಚರಿಗಳಲ್ಲೊಂದಾಗಿತ್ತು. ಮೊಬೈಲ್​ಗೆ ಚಾರ್ಜ್​ ಹಾಕೋಕೆ ಬಾತ್​ ಟಬ್​ ಪಕ್ಕ ಚಾರ್ಜಿಂಗ್​ ಪಾಯಿಂಟ್​ ಕೂಡ ಮಾಡಿಸಿಕೊಂಡಿದ್ದಳು ಒಲೆಸ್ಯಾ!

ಅಂದು ಕೂಡ ಹಾಗೇ ಆಗಿದೆ. ಒಲೆಸ್ಯಾ ಆ್ಯಪಲ್​-8​ನಲ್ಲಿ ಚಾರ್ಜ್​ ಇರಲಿಲ್ಲ. ಹೀಗಾಗಿ, ಆಕೆ ಚಾರ್ಜ್​ ಹಾಕಿಕೊಂಡೇ ಬಾತ್​ ಟಬ್​ನಲ್ಲಿ ಕೂತಿದ್ದಾಳೆ. ಚಾರ್ಜ್​ ಹಾಕಿರುವಾಗಲೇ ಅವರ ಮೊಬೈಲ್​ ಕೈತಪ್ಪಿ ನೀರಿಗೆ ಬಿದ್ದಿದೆ. ಈ ವೇಳೆ ಆಕೆ ಊಹಿಸುವುದರಳೊಗಾಗಿಯೇ ಕರೆಂಟ್​ ಷಾಕ್ ಹೊಡೆದು,  ಪ್ರಾಣ ಹೋಗಿ ಬಿಟ್ಟಿದೆ.

ಹೌದು, ಮೊಬೈಲ್​ ಚಾರ್ಜ್​ ಹಾಕಿದ್ದರಿಂದ ನೀರಿನಲ್ಲಿ ವಿದ್ಯುತ್​ ಪ್ರವಹಿಸಿದೆ. ಭಾರೀ ಪ್ರಮಾಣದಲ್ಲಿ ವಿದ್ಯುತ್​ ಹರಿದಿದ್ದರಿಂದ ಒಲೆಸ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಲೆಸ್ಯಾ ಗೆಳತಿ ಕೂಡ ಅದೇ ಮನೆಯಲ್ಲಿದ್ದಳು. ಒಲೆಸ್ಯಾ  ಸ್ನಾನದ ಕೊಠಡಿಯಿಂದ ಹೊರ ಬರದ್ದನ್ನು ನೋಡಿ ಬಾಗಿಲು ತಟ್ಟಿದ್ದಾಳೆ. ಆದರೆ, ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಒಲೆಸ್ಯಾ ನೀರಿನಲ್ಲೇ ಬಿದ್ದಿದ್ದಳು. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಅಧಿಕೃತವಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಶಾಕ್​ನಿಂದಲೇ ಮೃತಪಟ್ಟಿರುವ ವಿಚಾರ ಬಹಿರಂಗವಾಗಿದೆ.  ಈ ವಿಚಾರ ರಷ್ಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಅಷ್ಟೇ ಅಲ್ಲ, ಚಾರ್ಜ್​ ಹಾಕಿ ಮೊಬೈಲ್​ ಬಳಕೆ ಮಾಡಬೇಡಿ ಎನ್ನುವ ಬಗ್ಗೆ ಆಂದೋಲನ ಕೂಡ ಆರಂಭವಾಗಿದೆ.

ಹೊಸ ಸಂಶೋಧನೆ: ನಿಮ್ಮ ಮೊಬೈಲ್​ ಮೂಲಕ ಐದೇ ನಿಮಿಷದಲ್ಲಿ ಕೊರೊನಾ ಸೋಂಕು ಪತ್ತೆ ಸಾಧ್ಯ

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು