AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪಲ್​ ತಂದ ಆಪತ್ತು.. ಮೊಬೈಲ್ ಚಾರ್ಜ್​ ಹಾಕಿ ಜಳಕ ಮಾಡಿದ ಮಹಿಳೆ ಸಾವು!

ಒಲೆಸ್ಯಾ ಸೆಮೆನೋವಾ ಎಂಬಾಕೆ ಮೃತ ಮಹಿಳೆ. ಬಾತ್​ ಟಬ್​ನಲ್ಲಿ ನೀರು ತುಂಬಿಸಿ, ಅದರಲ್ಲಿ ಕೂತು ಮೊಬೈಲ್​ ನೋಡೋದು ಆಕೆಯ ದಿನಚರಿಗಳಲ್ಲೊಂದಾಗಿತ್ತು. ಇದೇ ಅವಳ ಪ್ರಾಣಕ್ಕೆ ಕುತ್ತಾಗಿದೆ.

ಆ್ಯಪಲ್​ ತಂದ ಆಪತ್ತು.. ಮೊಬೈಲ್ ಚಾರ್ಜ್​ ಹಾಕಿ ಜಳಕ ಮಾಡಿದ ಮಹಿಳೆ ಸಾವು!
ಮೊಬೈಲ್ ಚಾರ್ಜ್​ ಹಾಕಿ ಜಳಕ ಮಾಡಿದ ಮಹಿಳೆ ಸಾವು!
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​|

Updated on: Dec 14, 2020 | 5:19 PM

Share

ಚಾರ್ಜ್​ಗೆ ಹಾಕಿ ಮೊಬೈಲ್​ ಬಳಕೆ ಮಾಡಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ಇದನ್ನು ಅನೇಕರು ನಿರ್ಲಕ್ಷಿಸುತ್ತಾರೆ. ಅದೇ ರೀತಿ ಈಗ ಮೊಬೈಲ್​ ಚಾರ್ಜ್​ ಹಾಕಿ ಬಳಕೆ ಮಾಡಿದ ಮಹಿಳೆ ಸಾವಿನ ಮನೆ ಸೇರಿದ್ದಾಳೆ.

ಈ ಘಟನೆ ನಡೆದಿದ್ದು ರಷ್ಯಾದಲ್ಲಿ. ಒಲೆಸ್ಯಾ ಸೆಮೆನೋವಾ ಎಂಬಾಕೆ ಮೃತ ಮಹಿಳೆ. ಬಾತ್​ ಟಬ್​ನಲ್ಲಿ ನೀರು ತುಂಬಿಸಿ, ಅದರಲ್ಲಿ ಕೂತು ಮೊಬೈಲ್​ ನೋಡೋದು ಆಕೆಯ ದಿನಚರಿಗಳಲ್ಲೊಂದಾಗಿತ್ತು. ಮೊಬೈಲ್​ಗೆ ಚಾರ್ಜ್​ ಹಾಕೋಕೆ ಬಾತ್​ ಟಬ್​ ಪಕ್ಕ ಚಾರ್ಜಿಂಗ್​ ಪಾಯಿಂಟ್​ ಕೂಡ ಮಾಡಿಸಿಕೊಂಡಿದ್ದಳು ಒಲೆಸ್ಯಾ!

ಅಂದು ಕೂಡ ಹಾಗೇ ಆಗಿದೆ. ಒಲೆಸ್ಯಾ ಆ್ಯಪಲ್​-8​ನಲ್ಲಿ ಚಾರ್ಜ್​ ಇರಲಿಲ್ಲ. ಹೀಗಾಗಿ, ಆಕೆ ಚಾರ್ಜ್​ ಹಾಕಿಕೊಂಡೇ ಬಾತ್​ ಟಬ್​ನಲ್ಲಿ ಕೂತಿದ್ದಾಳೆ. ಚಾರ್ಜ್​ ಹಾಕಿರುವಾಗಲೇ ಅವರ ಮೊಬೈಲ್​ ಕೈತಪ್ಪಿ ನೀರಿಗೆ ಬಿದ್ದಿದೆ. ಈ ವೇಳೆ ಆಕೆ ಊಹಿಸುವುದರಳೊಗಾಗಿಯೇ ಕರೆಂಟ್​ ಷಾಕ್ ಹೊಡೆದು,  ಪ್ರಾಣ ಹೋಗಿ ಬಿಟ್ಟಿದೆ.

ಹೌದು, ಮೊಬೈಲ್​ ಚಾರ್ಜ್​ ಹಾಕಿದ್ದರಿಂದ ನೀರಿನಲ್ಲಿ ವಿದ್ಯುತ್​ ಪ್ರವಹಿಸಿದೆ. ಭಾರೀ ಪ್ರಮಾಣದಲ್ಲಿ ವಿದ್ಯುತ್​ ಹರಿದಿದ್ದರಿಂದ ಒಲೆಸ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಲೆಸ್ಯಾ ಗೆಳತಿ ಕೂಡ ಅದೇ ಮನೆಯಲ್ಲಿದ್ದಳು. ಒಲೆಸ್ಯಾ  ಸ್ನಾನದ ಕೊಠಡಿಯಿಂದ ಹೊರ ಬರದ್ದನ್ನು ನೋಡಿ ಬಾಗಿಲು ತಟ್ಟಿದ್ದಾಳೆ. ಆದರೆ, ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಬಾಗಿಲು ಒಡೆದು ನೋಡಿದಾಗ ಒಲೆಸ್ಯಾ ನೀರಿನಲ್ಲೇ ಬಿದ್ದಿದ್ದಳು. ವೈದ್ಯರು ಬಂದು ಪರೀಕ್ಷೆ ನಡೆಸಿದಾಗ ಆಕೆ ಮೃತಪಟ್ಟಿರುವ ವಿಚಾರ ಅಧಿಕೃತವಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಶಾಕ್​ನಿಂದಲೇ ಮೃತಪಟ್ಟಿರುವ ವಿಚಾರ ಬಹಿರಂಗವಾಗಿದೆ.  ಈ ವಿಚಾರ ರಷ್ಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಅಷ್ಟೇ ಅಲ್ಲ, ಚಾರ್ಜ್​ ಹಾಕಿ ಮೊಬೈಲ್​ ಬಳಕೆ ಮಾಡಬೇಡಿ ಎನ್ನುವ ಬಗ್ಗೆ ಆಂದೋಲನ ಕೂಡ ಆರಂಭವಾಗಿದೆ.

ಹೊಸ ಸಂಶೋಧನೆ: ನಿಮ್ಮ ಮೊಬೈಲ್​ ಮೂಲಕ ಐದೇ ನಿಮಿಷದಲ್ಲಿ ಕೊರೊನಾ ಸೋಂಕು ಪತ್ತೆ ಸಾಧ್ಯ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು