
ಮೈಸೂರು: ಅರಮನೆ ಆವರಣದಲ್ಲಿ ಜಂಬೂಸವಾರಿ ನಡೆಸಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.
15 ಕೋಟಿ ಖರ್ಚು ಮಾಡಿ ಆಚರಣೆ ಮಾಡುವುದು ಸರಳ ದಸರಾ ಅಲ್ಲ. ಜಂಬೂಸವಾರಿಯನ್ನು ಸಂಭ್ರಮದಿಂದಲೇ ಮಾಡಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗಬೇಕು. ಜಂಬೂಸವಾರಿ ಮೆರವಣಿಗೆಗೆ ತನ್ನದೇ ಆದ ಇತಿಹಾಸವಿದೆ ಎಂದು ಹೇಳಿದ್ದಾರೆ.
ಜೊತೆಗೆ, ದಸರಾ ವೇಳೆ ಜಂಬೂಸವಾರಿ ಪ್ರತಿವರ್ಷದಂತೆ ಸರಿಯಾಗಿ ಮಾಡದಿದ್ರೇ ನಾನೇ ಜಟಕಾ ಗಾಡಿಯಲ್ಲಿ ಮೆರವಣಿಗೆ ಮಾಡಿಸುತ್ತೇನೆ. ತಾಯಿ ಚಾಮುಂಡೇಶ್ವರಿಯ ವಿಗ್ರಹದ ಮೆರವಣಿಗೆಯನ್ನು ಜಟಕಾ ಗಾಡಿಯಲ್ಲಿ ಮಾಡಿಸುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.