Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ!

150 ಕೆಜಿ ತೂಕದ ಎಮ್ಮೆಯನ್ನು ಸಲೀಸಾಗಿ ಎತ್ತಿಕೊಂಡಿದ್ದಾರೆ. ಒಂದಲ್ಲ ಎರಡಲ್ಲ..ಬರೋಬ್ಬರಿ 63 ಗಿನ್ನಿಸ್ ರೆಕಾರ್ಡ್​ಗಳನ್ನು ಇವರು ಮಾಡಿದ್ದಾರೆ. ಈ ಮೂಲಕ ಸಾಧನೆಯ ಪರ್ವತ ಹತ್ತಿದ್ದಾರೆ.

Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ!
ಅಬ್ಬಬ್ಬಾ..ಈ ವ್ಯಕ್ತಿಯ ಶಕ್ತಿಯೇ!
Follow us
| Updated By: Digi Tech Desk

Updated on:Mar 09, 2021 | 5:39 PM

ನೀವು ಭೀಮನ ಶಕ್ತಿಯ ಕಥೆಯನ್ನು ಕೇಳಿದ್ದೀರಿ..ಶಕ್ತಿಯ ಕುರಿತು ಬಲ ಭೀಮನ ಎಂಬ ವಿಶೇಷಣವನ್ನೇ ಬಳಸುತ್ತೇವೆ. ದೈತ್ಯದೇಹಿಗಳನ್ನು ಭೀಮಕಾಯ ಎಂದು ಕರೆಯುತ್ತೇವೆ. ಹೌದಪ್ಪಾ ಹೌದು, ಭೀಮನ ಕಥೆ ನಮಗೂ ಗೊತ್ತು. ಆದರೆ ಈಗ ಭೀಮನಂತ ಇರುವವರು ಯಾರು ತಾನೇ ಸಿಗ್ತಾರೆ? ಎಂದು ಕೇಳಿದರೆ ಈ ವ್ಯಕ್ತಿಯೇ ಉತ್ತರ. ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ ಎಂಬ ವ್ಯಕ್ತಿಯನ್ನೇ ಕಲಿಯುಗದ ಭೀಮ ಎನ್ನಬಹುದು. ಇವರ ಇನ್ಸ್​ಟಾಗ್ರಾಂ ಖಾತೆಯನ್ನೊಮ್ಮೆ ನೀವು ನೋಡಬೇಕು..ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಖಚಿತ.

ಈ ವಿಡಿಯೋದಲ್ಲಿ ಉಕ್ರೇನಿನ ಈ ವ್ಯಕ್ತಿಯ ಭೀಮಬಲವನ್ನು ವೀಕ್ಷಿಸಬಹುದು. 150 ಕೆಜಿ ತೂಕವನ್ನು ಒಂದೇ ಕೈಯಲ್ಲಿ ಎತ್ತುವ ಸಾಮರ್ಥ್ಯ ಈತನಿಗಿದೆ. ಅಲ್ಲದೇ, ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ತನ್ನ ಹೆಗಲ ಮೇಲೆ ಹೊತ್ತೊಯ್ಯುತ್ತಾನೆ. ಅವರ ಸಾಹಸವನ್ನು ನೋಡಿ ಇತರರು ಬೆಕ್ಕಸಬೆರಗಾಗಿದ್ದಾರಂತೆ.

ಅವರಿಗೆ ಭೀಮ ಎಂದು ಅಭಿದಾನ ಕೊಟ್ರೆ ಯಾರೂ ಚಕಾರ ಎತ್ತುವುದಿಲ್ಲ. ಅಷ್ಟು ಶಕ್ತಿಶಾಲಿ ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ. ಅವರ ಇನ್ಸ್​ಟಾಗ್ರಾಂ ಖಾತೆಯಲ್ಲಿ ಇಂತಹ ವಿಡಿಯೋಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಅವರಿಗೆ ಇನ್ಸ್​ಟಾಗ್ರಾಂನಲ್ಲಿ 12 ಸಾವಿರಕ್ಕಿಂತಲೂ ಹೆಚ್ಚು ಫಾಲೊವರ್ಸ್​ಗಳಿದ್ದಾರೆ.

ಇಷ್ಟೇ ಅಲ್ಲ. ಈ ಭೀಮನಿಗೆ ಸಾಹಿತ್ಯದಲ್ಲೂ ಆಸಕ್ತಿ ಇದೆಯಂತೆ. ಹಿಂದೆ ಸರ್ಕಸ್​ನಲ್ಲಿ ಕೆಲಸ ಮಾಡಿದ್ದ ಅವರು ಅಥ್ಲೀಟ್​ಗಳ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಅಲ್ಲದೇ 2010ರಲ್ಲಿ ಗೋಲ್ಡನ್ ಪೆನ್ ಆಫ್ ರಷ್ಯಾ ಪ್ರಶಸ್ತಿಯೂ ಬಂದಿದೆ.

ಗಿನ್ನಿಸ್ ರೆಕಾರ್ಡನ್ನೂ ಮಾಡಿದ್ದಾರೆ.. ಒಂದಲ್ಲ ಎರಡಲ್ಲ..ಬರೋಬ್ಬರಿ 63 ಗಿನ್ನಿಸ್ ರೆಕಾರ್ಡ್​ಗಳನ್ನು ಇವರು ಮಾಡಿದ್ದಾರೆ. ಈ ಮೂಲಕ ಸಾಧನೆಯ ಪರ್ವತ ಹತ್ತಿದ್ದಾರೆ. 2013ರಲ್ಲಿ ಒಮದು ಚಲನಚಿತ್ರದಲ್ಲಿಯೂ ಇವರು ಅಭಿನಯಿಸಿದ್ದರು.

ಇದನ್ನೂ ಓದಿ: ಗಂಡ ಝೂಮ್ ಮೀಟಿಂಗ್​ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ

Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ

Published On - 5:26 pm, Tue, 9 March 21

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು