AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ‌ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ.

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​
ಯಶ್​
Follow us
Skanda
|

Updated on:Mar 09, 2021 | 5:27 PM

ಹಾಸನ: ಜಮೀನಿನ ದಾರಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ತಂದೆ, ತಾಯಿ ನಡುವೆ ಆಗಿರುವ ಜಗಳಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಗೆ ಭೇಟಿ ನೀಡಿದ ನಂತರ ಪ್ರತಿಕ್ರಿಯಿಸಿರುವ ನಟ ರಾಕಿಂಗ್​ ಸ್ಟಾರ್​ ಯಶ್​, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ. ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಎಲ್ಲಿಂದಲೋ‌ ಬಂದವರು ಅಂತಾರಂತೆ, ನಾನು ಇಲ್ಲೇ ಹುಟ್ಟಿ ಬೆಳೆದವನು ಸಾರ್, ನಾನು ಹಾಸನದಲ್ಲೂ ಮಾಡ್ತೀನಿ, ಬೆಳಗಾವಿಯಲ್ಲೂ ಮಾಡ್ತೀನಿ, ಮಂಗಳೂರಲ್ಲೂ ಮಾಡ್ತೀನಿ, ನಾವು ಸೆಲೆಬ್ರಿಟಿ ಆಗೋದೇ ತಪ್ಪು ಎನ್ನುವ ಹಾಗಾಗಿದೆ ಎಂದು ಗರಂ ಆಗಿದ್ದಾರೆ.

ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ‌ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ. ದುಡ್ದು ಮಾಡೋ ಹಾಗಿದ್ದರೆ ಬೆಂಗಳೂರಲ್ಲೇ ಮಾಡಬಹುದಿತ್ತು. ಅಲ್ಲಿ ಜಮೀನು ಮಾಡಿದ್ರೆ ಚೆನ್ನಾಗಿ ಹಣವೂ ಸಿಗ್ತಿತ್ತು. ನಾನು‌ ಹಾಸನದಲ್ಲಿ ಯಾಕೆ‌ ಜಮೀನು ಮಾಡಬೇಕು ಅರ್ಥ ಮಾಡ್ಕೊಳ್ಳಿ. ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕೆಂದು ಮಾಡಿದ್ದೇನೆ ಎಂದು ಹಾಸನ ಜಿಲ್ಲೆ ದುದ್ದಾ ಪೊಲೀಸ್ ಠಾಣೆ ಎದುರು ನಟ ಯಶ್ ಹೇಳಿದ್ದಾರೆ.

ನಾವೂ ಅಪ್ಪ ಅಮ್ಮನಿಗೆ ಹುಟ್ಟಿದ ಮಕ್ಕಳೇ. ತಂದೆ ತಾಯಿಗೆ ಮಾತನಾಡಿದರೂ ನಮ್ಮ ಇಮೇಜ್ ಎಂದು ಕೂರಲು ಆಗಲ್ಲ. ಎಲ್ಲರೂ ಮೀಡಿಯಾ ಇದೆ, ಮೀಡಿಯಾ ಇದೆ ಅಂತಾರೆ ಇರ್ಲಿ ಬಿಡ್ರೀ. ರಸ್ತೆ ವಿವಾದ ಒಂದೂವರೆ ವರ್ಷದ ಹಿಂದೆಯೇ ಮುಗಿದಿದೆ. ರಸ್ತೆ ವಿವಾದ ದೊಡ್ಡದಲ್ಲ. ಹೀಗೆಲ್ಲ ಬಣ್ಣ ಕಟ್ಟುತ್ತಾರೆ ನೀವು ನಂಬೋಕೆ ಹೋಗ್ಬೇಡಿ ಎಂದು ಕಿಡಿಕಾರಿದ್ದಾರೆ. ಈ ಘಟನೆ ಸಂಬಂಧ ಬೇಸರ ವ್ಯಕ್ತಪಡಿಸಿರುವ ರಾಕಿಗ್ ಸ್ಟಾರ್, ಸ್ಕೂಲ್‌ ಮಾಡ್ತಾರಾ ಯಾರಾದ್ರೂ ಅಥವಾ ಬಡವರಿಗೆ ಅನುಕೂಲ ಆಗುತ್ತಾ ಬೇಕಿದ್ರೆ ಕೇಳಲಿ ನಾವೇ ಹತ್ತು ಎಕರೆ ಜಮೀನು‌ ಕೊಡುತ್ತೇವೆ. ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ, ಅವರೂ ಮಾತನಾಡಿರಬಹುದು. ಆದರೆ, ತಂದೆ ತಾಯಿ ಜೊತೆ ಹಾಗೆ ಕೆಟ್ಟದಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ‌ಕೆಲ ಸ್ಥಳೀಯರ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.

ಇದನ್ನೂ ಓದಿ:

ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಹಾಸನದಲ್ಲಿ ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ

ನಿಧಿ ಸುಬ್ಬಯ್ಯ ಮನೆ ಒಳಗೆ ಮಾಲೆ ಪಟಾಕಿ ಎಸೆದಿದ್ರಂತೆ ಯಶ್​! ಬಿಗ್​ ಬಾಸ್​ ಮನೆಯಲ್ಲಿ ಹೊರ ಬಿತ್ತು ಅಚ್ಚರಿ ವಿಚಾರ

Published On - 5:08 pm, Tue, 9 March 21

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?