AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳಿನ ಎಲಿಮಿನೇಟರ್ ಪಂದ್ಯ: ಸನ್​ ರೈಸರ್ಸ್​ ಮಣಿಸಲು ಕೊಹ್ಲಿ 5 ರಣತಂತ್ರ ಏನು ಗೊತ್ತಾ?

ಲೀಗ್​ನಲ್ಲಿ ಸತತ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್​ಸಿಬಿ ರನ್​ರೇಟ್​ನಿಂದ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ. ಆದ್ರೆ ಪ್ಲೇ ಆಫ್​ನಲ್ಲಿ ಆರ್​ಸಿಬಿ ಲೀಗ್​ನಲ್ಲಿ ಮಾಡಿದ ತಪ್ಪುಗಳೆನ್ನೆಲ್ಲಾ ತಿದ್ದಿಕೊಂಡು, ಕಣಕ್ಕಿಳಿದ್ರೆ ಮಾತ್ರ, ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಮಣಿಸೋದಕ್ಕೆ ಸಾಧ್ಯ. ಹಾಗಾದ್ರೆ ನಾಳೆ ಅಭು ಧಾಬಿಯಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಸನ್​ ರೈಸರ್ಸ್​​ ಹೈದರಾಬಾದ್ ಮಣಿಸೋಕೆ ಕೊಹ್ಲಿ ಮಾಡ್ಬೇಕಾಗಿರೋ ಐದು ರಣತಂತ್ರಗಳೇನು ಇಲ್ಲಿ ನೋಡಿ.. ಕೊಹ್ಲಿ ಗೆಲುವಿನ ತಂತ್ರ ನಂ.5 ಮಾರಿಸ್​ಗೆ ಮತ್ತೆ ಬ್ಯಾಟಿಂಗ್​ನಲ್ಲಿ ಬಡ್ತಿ ನೀಡಬೇಕು: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ […]

ನಾಳಿನ ಎಲಿಮಿನೇಟರ್ ಪಂದ್ಯ: ಸನ್​ ರೈಸರ್ಸ್​ ಮಣಿಸಲು ಕೊಹ್ಲಿ 5 ರಣತಂತ್ರ ಏನು ಗೊತ್ತಾ?
ಆಯೇಷಾ ಬಾನು
| Edited By: |

Updated on:Nov 30, 2020 | 5:14 PM

Share

ಲೀಗ್​ನಲ್ಲಿ ಸತತ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್​ಸಿಬಿ ರನ್​ರೇಟ್​ನಿಂದ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ. ಆದ್ರೆ ಪ್ಲೇ ಆಫ್​ನಲ್ಲಿ ಆರ್​ಸಿಬಿ ಲೀಗ್​ನಲ್ಲಿ ಮಾಡಿದ ತಪ್ಪುಗಳೆನ್ನೆಲ್ಲಾ ತಿದ್ದಿಕೊಂಡು, ಕಣಕ್ಕಿಳಿದ್ರೆ ಮಾತ್ರ, ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಮಣಿಸೋದಕ್ಕೆ ಸಾಧ್ಯ. ಹಾಗಾದ್ರೆ ನಾಳೆ ಅಭು ಧಾಬಿಯಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಸನ್​ ರೈಸರ್ಸ್​​ ಹೈದರಾಬಾದ್ ಮಣಿಸೋಕೆ ಕೊಹ್ಲಿ ಮಾಡ್ಬೇಕಾಗಿರೋ ಐದು ರಣತಂತ್ರಗಳೇನು ಇಲ್ಲಿ ನೋಡಿ..

ಕೊಹ್ಲಿ ಗೆಲುವಿನ ತಂತ್ರ ನಂ.5 ಮಾರಿಸ್​ಗೆ ಮತ್ತೆ ಬ್ಯಾಟಿಂಗ್​ನಲ್ಲಿ ಬಡ್ತಿ ನೀಡಬೇಕು: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ, ಆಲ್​ರೌಂಡರ್ ಕ್ರಿಸ್ ಮಾರಿಸ್​ಗೆ ಬ್ಯಾಟಿಂಗ್​ನಲ್ಲಿ 5ನೇ ಕ್ರಮಾಂಕದಲ್ಲಿ ಕಳಿಸಿದ್ರು. ಆದ್ರೆ ಮಾರಿಸ್ ಶೂನ್ಯಕ್ಕೆ ಔಟಾಗಿದ್ರು. ಹಾಗಂತ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮಾರಿಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡೋ ಸಾಹಸಕ್ಕೆ ಕೈ ಹಾಕಬಾರದು. ಯಾಕಂದ್ರೆ ಮಾರಿಸ್ ಸಿಡಿದೆದ್ರೆ, ರನ್ ಮಳೆ ಹರಿಯೋದ್ರಲ್ಲಿ ಯಾವ ಅನುಮಾನವೂ ಇಲ್ಲ.

ಕೊಹ್ಲಿ ಗೆಲುವಿನ ತಂತ್ರ ನಂ.4 ಹೈದರಾಬಾದ್ ವಿರುದ್ಧ ಶಹಬಾಜ್​ಗೆ ನೀಡಬೇಕು ಚಾನ್ಸ್ ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿದ ಸ್ಪಿನ್ನರ್ ಶಹಬಾಜ್ ಅಹ್ಮದ್, ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಅಬುಧಾಬಿ ಪಿಚ್ ಸ್ಪಿನ್ನರ್​ಗಳಿಗೂ ನೆರವಾಗೋದ್ರಿಂದ, ಉತ್ತಮ ಲಯದಲ್ಲಿರೋ ಶಹಬಾಜ್ ಹೈದರಾಬಾದ್ ವಿರುದ್ಧವೂ ಕೈ ಚಳಕ ತೊರಿಸೋ ಸಾಧ್ಯತೆ ಹೆಚ್ಚಿದೆ.

ಕೊಹ್ಲಿ ಗೆಲುವಿನ ತಂತ್ರ ನಂ.3 ಫಿಲಿಫ್ ಬದಲು ಮೋಯಿನ್ ಅಲಿ ಆಯ್ಕೆ ಸೂಕ್ತ ಆಲ್​ರೌಂಡರ್ ಕೋಟಾದಲ್ಲಿ ಕ್ಯಾಪ್ಟನ್ ಕೊಹ್ಲಿ ಮೋಯಿನ್ ಅಲಿಗೆ ಅವಕಾಶ ನೀಡ್ಬೇಕು. ಅಲಿಗೆ ಅವಕಾಶ ನೀಡ್ಬೇಕು ಅಂದ್ರೆ, ಆರಂಭಿಕನಾಗಿ ನಿರೀಕ್ಷಿತ ಪ್ರದರ್ಶನ ನೀಡದ ಜೋಸ್ ಫಿಲಿಪ್​ರನ್ನ ಹೊರಗಿಡಬೇಕು. ಆಗ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಆರ್​ಸಿಬಿ ಸ್ಟ್ರೆಂತ್ ಹೆಚ್ಚಾಗುತ್ತೆ.

ಕೊಹ್ಲಿ ಗೆಲುವಿನ ತಂತ್ರ ನಂ.2 ಬ್ಯಾಟಿಂಗ್​ನಲ್ಲಿ ಕೊಹ್ಲಿ, ಎಬಿಡಿ ಅಬ್ಬರಿಸಬೇಕು ಲೀಗ್​ನ ಕಳೆದ ನಾಲ್ಕು ಪಂದ್ಯಗಳಲ್ಲೂ ಕ್ಯಾಪ್ಟನ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಮಾಡಿಲ್ಲ. ಹೈದರಾಬಾದ್ ತಂಡವನ್ನ ಮಣಿಸಬೇಕು ಅಂದ್ರೆ, 2ನೇ ರಣತಂತ್ರವಾದ ಕೊಹ್ಲಿ ಮತ್ತು ಎಬಿಡಿ ರನ್ ಮಳೆಯನ್ನ ಹರಿಸಲೆಬೇಕು.

ಕೊಹ್ಲಿ ಗೆಲುವಿನ ತಂತ್ರ ನಂ.1 ವಾರ್ನರ್ ಸಾಹನನ್ನ ಆರಂಭದಲ್ಲೇ ಕಟ್ಟಿಹಾಕಬೇಕು ಹೈದರಾಬಾದ್ ವಿರುದ್ಧ ಆರ್​ಸಿಬಿ ಗೆಲ್ಲಲು ಮಾಡ್ಬೇಕಾಗಿರೋ ಮೊದಲ ರಣತಂತ್ರ ಇದೆ ಆಗಿದೆ. ಡೆಡ್ಲಿ ಓಪನರ್​ಗಳಾದ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಸಾಹ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸ್ತಾರೆ. ಹೀಗಾಗಿ ಕೊಹ್ಲಿ ಬೌಲರ್​ಗಳು ಪವರ್ ಪ್ಲೇನಲ್ಲೇ ಈ ಜೋಡಿಯ ವಿಕೆಟ್ ಪಡೆದ್ರೆ, ಪಂದ್ಯದ ಮೇಲೆ ಸುಲಭವಾಗಿ ಹಿಡಿತ ಸಾಧಿಸಬಹುದು.

ಕ್ಯಾಪ್ಟನ್ ಕೊಹ್ಲಿ ಈ ಐದು ರಣತಂತ್ರಗಳನ್ನ ಅಬುಧಾಬಿಯಲ್ಲಿ ನಾಳೆ ಹೈದರಾಬಾದ್ ವಿರುದ್ಧ ಅನುಸರಿಸಿದ್ದೇ ಆದ್ರೆ, 2ನೇ ಕ್ವಾಲಿಫೈಯರ್​ಗೆ ಎಂಟ್ರಿ ಕೊಡೋದಕ್ಕೆ ಸಾಧ್ಯ.

Published On - 1:24 pm, Thu, 5 November 20

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ