AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಆಟ, ಆಸ್ಪತ್ರೆಗಳ ಚೆಲ್ಲಾಟ! ತಾಯಿ ಜೀವಕ್ಕಾಗಿ ಯುವತಿ ಪರದಾಟ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇನ್ನೂ ಏನೆಲ್ಲ ಕಾಟ ಕೊಡುತ್ತದೋ.. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬಳು, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕರುಣಾಜನಕ ಕತೆಯಿದು. ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾಗಿದೆ. ದುಡ್ಡಿಲ್ಲದಿದ್ರೆ ತಾಯಿಗೆ ಡಯಾಲಿಸಿಸ್‌ ಮಾಡಿಸೋಕ್ಕೆ ಆಗೋಲ್ಲ ಎಂದು ಯುವತಿ ಪರಿತಪಿಸುತ್ತಿದ್ದಾಳೆ. 23 ವರ್ಷದ ದೀಪಿಕಾ ಹೆಸರಿನ ಈ ಯುವತಿ ಎನ್.ಸಿ.ಸಿ ಯಲ್ಲಿ ಪ್ರತಿಭಾನ್ವಿತೆ. ಆದ್ರೆ ವ್ಯಾಸಂಗ ಮುಂದುವರಿಸಿ, ಡಿಗ್ರಿ ಮುಗಿಸಲು ಸಹ ಸಾಧ್ಯವಾಗದೇ […]

ಕೊರೊನಾ ಆಟ, ಆಸ್ಪತ್ರೆಗಳ ಚೆಲ್ಲಾಟ! ತಾಯಿ ಜೀವಕ್ಕಾಗಿ ಯುವತಿ ಪರದಾಟ
ಸಾಧು ಶ್ರೀನಾಥ್​
|

Updated on:May 26, 2020 | 5:55 PM

Share

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇನ್ನೂ ಏನೆಲ್ಲ ಕಾಟ ಕೊಡುತ್ತದೋ.. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಯುವತಿಯೊಬ್ಬಳು, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕರುಣಾಜನಕ ಕತೆಯಿದು.

ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾಗಿದೆ. ದುಡ್ಡಿಲ್ಲದಿದ್ರೆ ತಾಯಿಗೆ ಡಯಾಲಿಸಿಸ್‌ ಮಾಡಿಸೋಕ್ಕೆ ಆಗೋಲ್ಲ ಎಂದು ಯುವತಿ ಪರಿತಪಿಸುತ್ತಿದ್ದಾಳೆ.

23 ವರ್ಷದ ದೀಪಿಕಾ ಹೆಸರಿನ ಈ ಯುವತಿ ಎನ್.ಸಿ.ಸಿ ಯಲ್ಲಿ ಪ್ರತಿಭಾನ್ವಿತೆ. ಆದ್ರೆ ವ್ಯಾಸಂಗ ಮುಂದುವರಿಸಿ, ಡಿಗ್ರಿ ಮುಗಿಸಲು ಸಹ ಸಾಧ್ಯವಾಗದೇ ತೊಳಲಾಡುತ್ತಿದ್ದಾಳೆ.

ಸರ್ಕಾರಿ ಸಿಬ್ಬಂದಿಗೆ ತಾಂತ್ರಿಕ ದೋಷ:  ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ದೀಪಿಕಾ, ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ತಾಯಿಯನ್ನ ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ. ತಾಯಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್‌ ಮಾಡಿಸಬೇಕು. ಆದ್ರೆ ಕೆಲಸ ಕಳೆದುಕೊಂಡಿದ್ರಿಂದ ಹಣ ಇಲ್ಲದಾಗಿದೆ. ದುಡ್ಡಿಲ್ಲದಿದ್ರೆ ಡಯಾಲಿಸಿಸ್‌ ಇಲ್ಲ ಎನ್ನುತ್ತಿದ್ದಾರೆ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯವರು. 5 ವರ್ಷಗಳಿಂದ ಇಲ್ಲೇ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಆದ್ರೀಗ, ಹಣ ಇಲ್ಲ ಎಂದು ಡಯಾಲಿಸಿಸ್‌ಗೆ ನಿರಾಕರಣೆ ಮಾಡಿದ್ದಾರೆ.

ಇನ್ನು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೆ ತಾಂತ್ರಿಕ ದೋಷದ ನೆಪ ಹೇಳಿ ಸರ್ಕಾರಿ ಸಿಬ್ಬಂದಿ ಸಾಗಹಾಕಿದ್ದಾರೆ. ಈಗ, ಡಯಾಲಿಸಿಸ್‌ ಮಾಡಿಸದೆ ನಮ್ಮ ತಾಯಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ವರ್ಷದ ಹಿಂದೆ ತಂದೆಯನ್ನೂ ಕಳೆದುಕೊಂಡಿರುವೆ ಎಂದು ದೀಪಿಕಾ ಕಣ್ಣೀರುಹಾಕಿದ್ದಾರೆ.

Published On - 4:41 pm, Tue, 26 May 20

ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!