AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಪ್ ಸ್ಟಿಕ್ ಮುರಿದು ಹೋದರೆ ಚಿಂತೆ ಮಾಡಬೇಡಿ, ಸಿಂಪಲ್​​​ ಟಿಪ್ಸ್​ ಫಾಲೋ ಮಾಡಿ

ದುಬಾರಿ ಬೆಲೆಯ ಲಿಪ್​ಸ್ಟಿಕ್​​​ಗಳು ಮುರಿದು ಹೋಗಿದೆ ಎಂದು ಚಿಂತಿಸದಿರಿ. ಮುರಿದಿರುವ ಲಿಪ್​​ಸ್ಟಿಕ್​​ ಅನ್ನು ನೀವು ಮತ್ತೆ ಕೂಡ ಉಪಯೋಗಿಸಬಹುದು. ಅದು ಹೇಗೆ ಎಂದು ಯೋಚಿಸುತ್ತೀದ್ದೀರಾ? ಹಾಗಿದ್ದರೆ ಈ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ.

ಲಿಪ್ ಸ್ಟಿಕ್ ಮುರಿದು ಹೋದರೆ ಚಿಂತೆ ಮಾಡಬೇಡಿ, ಸಿಂಪಲ್​​​ ಟಿಪ್ಸ್​ ಫಾಲೋ ಮಾಡಿ
Beauty TipsImage Credit source: L'Oreal Paris
ಅಕ್ಷತಾ ವರ್ಕಾಡಿ
|

Updated on: Aug 12, 2023 | 4:07 PM

Share

ಮಹಿಳೆಯರ ಸೌಂದರ್ಯದ ದಿನಚರಿಯ ಅಗತ್ಯ ವಸ್ತುಗಳ ಪೈಕಿಯಲ್ಲಿ ಲಿಪ್​​ಸ್ಟಿಕ್ (Lipstick) ​ಅತ್ಯಂತ ಪ್ರಮುಖವಾದುದು. ಕೆಲವೊಮ್ಮೆ ನೀವು ಖರೀದಿಸಿದ ದುಬಾರಿ ಬೆಲೆಯ ಲಿಪ್​​​ಸ್ಟಿಕ್​ಗಳು ಅಚಾನಕ್ಕಾಗಿ ಕೆಳಗೆ ಬಿದ್ದು ಮುರಿದು ಹೋಗುತ್ತದೆ. ಆದರೆ ಮುರಿದ ಲಿಪ್​​​ಸ್ಟಿಕ್​​​​ ಅನ್ನು ಕೂಡ ಮತ್ತೆ ಉಪಯೋಗಿಸಬಹುದು. ಇನ್ನೂ ಮುಂದೆ ದುಬಾರಿ ಬೆಲೆಯ ಲಿಪ್​ಸ್ಟಿಕ್​​​ಗಳು ಮುರಿದು ಹೋಗಿದೆ ಎಂದು ಚಿಂತಿಸದಿರಿ. ಈ ಕೆಳಗೆ ತಿಳಿಸಲಾಗಿರುವ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ ಮುರಿದಿರುವ ಲಿಪ್​​​ಸ್ಟಿಕ್​​ ಮರು ಜೋಡಿಸಿ ಬಳಸಬಹುದಾಗಿದೆ.

ಲಿಪ್​​​ಸ್ಟಿಕ್​​​​​ ಮುರಿದರೆ ಏನು ಮಾಡಬೇಕು?

ಮುರಿದಿರುವ ಲಿಪ್​​​ಸ್ಟಿಕ್​​ ಅನ್ನು ನವು ಸುಲಭವಾಗಿ ಜೋಡಿಸಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಲಿಪ್​​ಸ್ಟಿಕ್​​​ನ ಮುರಿದ ಭಾಗಗಳನ್ನು ಲೈಟರ್​​​ನಿಂದ ಬಿಸಿ ಮಾಡಿ ಮತ್ತು ನಂತರ ಎರಡೂ ಭಾಗಗಳು ಬಿಸಿಯಾದಾಗ , ಎರಡು ಭಾಗಗಳನ್ನು ಒಟ್ಟಿಗೆ ಜೋಡಿಸಿ. ಸ್ಪಲ್ಪ ಹೊತ್ತು ಹಾಗೆಯೇ ಬಿಡಿ. ಈ ರೀತಿಯಾಗಿ ಮರು ಜೋಡಿಸಿ ಮತ್ತೆ ಲಿಪ್​​​ಸ್ಟಿಕ್​ ಬಳಸಬಹುದು.

ಇದನ್ನೂ ಓದಿ: ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?

ಲಿಪ್​​​ ಸ್ಟಿಕ್​​​​ ಹಚ್ಚುವ ಮೊದಲು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು:

ದೀರ್ಘಕಾಲದ ವರೆಗೆ ನೀವು ಹಚ್ಚಿರುವ ಲಿಪ್​ಸ್ಟಿಕ್​ ಹಾಗೆಯೇ ಉಳಿಯಲು ಕೆಲವೊಂದು ಸಿಂಪಲ್​​ ಟಿಪ್ಸ್​​​ಗಳು ಇಲ್ಲಿವೆ. ಸೌಂದರ್ಯದ ಜೊತೆಗೆ ನಿಮ್ಮ ತುಟಿಯ ಚರ್ಮವು ಸೂಕ್ಷ್ಮವಾಗಿರುವುದರಿಂದ ಲಿಪ್​ಸ್ಟಿಕ್​ ಹಚ್ಚುವ ಮೊದಲು ತುಟಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ. ನಂತರ ಟಿಶ್ಯೂ ಪೇಪರ್‌ನಿಂದ ತುಟಿಗಳನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ತುಟಿಗಳಿಗೆ ತೇವಾಂಶವನ್ನು ತರುತ್ತದೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ನಂತರ, ಲಿಪ್​​ಸ್ಟಿಕ್​​ ಹಚ್ಚಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!