AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆತ್ತಲೆಯಾಗಿ ಓಡಾಡಲು ಈತನಿಗೆ ಬಾಡಿಗೆಗೆ ಗಾರ್ಡನ್ ಬೇಕಂತೆ: ವೃದ್ದನ ಹುಚ್ಚಾಸೆ ಹಿಂದಿನ ಕಥೆ ಇಲ್ಲಿದೆ

ಬ್ರಿಟನ್ ವ್ಯಕ್ತೊಯೊಬ್ಬ ಬೆತ್ತಲೆಯಾಗಿ ಓಡಾಡಲು ಬಾಡಿಗೆಗೆ ಗಾರ್ಡನ್​ ಹುಡುಕುತ್ತಿದ್ದಾನೆ. ವೃದ್ದನ ಹುಚ್ಚಾಸೆ ಹಿಂದಿನ ಕಥೆ ಇಲ್ಲಿದೆ.

ಬೆತ್ತಲೆಯಾಗಿ ಓಡಾಡಲು ಈತನಿಗೆ ಬಾಡಿಗೆಗೆ ಗಾರ್ಡನ್ ಬೇಕಂತೆ: ವೃದ್ದನ ಹುಚ್ಚಾಸೆ ಹಿಂದಿನ ಕಥೆ ಇಲ್ಲಿದೆ
Stuart Haywood
TV9 Web
| Edited By: |

Updated on:Nov 13, 2022 | 4:51 PM

Share

ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಸೆ ಇದ್ದೇ ಇರುತ್ತೆ. ಆದ್ರೆ,  ಈ ಬ್ರಿಟನ್ ಪ್ರಜೆಗೆ ವಿಚಿತ್ರ ಆಸೆ ಹೊಂದಿದ್ದಾರೆ. ಗಾರ್ಡನ್​ನಲ್ಲಿ ಬೆತ್ತಲೆಯಾಗಿ ಆಯಾಗಿ ಸಮಯಕ ಕಳೆಯುವುದೇ ಈ ಮನುಷ್ಯ ತುಂಬ ಆಸೆಯಂತೆ. ಹೌದು..ಅಚ್ಚರಿ ಜೊತೆಗೆ ವಿಚಿತ್ರ ಎನಿಸಿದರೂ ಸತ್ಯ.

ಹಣಕ್ಕಾಗಿ ಕಟ್ಟಿಕೊಂಡ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದ್ವೆ ಮಾಡಿಸಿದ ಪತಿರಾಯ!

ಹೌದು…ಬ್ರಿಟನ್ ಪ್ರಜೆಯಾಗಿರುವ 86 ವರ್ಷದ ಪರಿಸರವಾದಿ ಸ್ಟುವರ್ಟ್ ಹವುಡ್​ಗೆ ಮೈಮೇಲೆ ಬಟ್ಟೆ ಇಲ್ಲದೇ ಆಯಾಗಿ ಬೆತ್ತಲೆಯಾಗಿ ಓಡಾಡುವುದಂದ್ರೆ ಇಷ್ಟವಂತೆ. ಈ ಹಿನ್ನೆಲೆಯಲ್ಲಿ ಬೆತ್ತಲೆಯಾಗಿ ಓಡಾಡಲು ಸ್ಟುವರ್ಟ್ ಹವುಡ್​, ಬಾಡಿಗೆ ಉದ್ಯಾನವನವನ್ನ ಹುಡುಕುತ್ತಿದ್ದಾರೆ.

ಸ್ಟುವರ್ಟ್ ಹವುಡ್​ಗೆ 2008 ರಿಂದಲೂ ಬೆತ್ತಲೆಯಾಗಿ ಓಡಾಡುವ ಅಭ್ಯಾಸ ಇದೆ. ಅಂದಿನಿಂದ ಸಮಯ ಸಿಕ್ಕಾಗೆಲ್ಲ ಕೆಲ ಕಡೆ ಹೋಗಿ ಉದ್ಯಾನವನದಲ್ಲಿ ಬೆತ್ತಲೆಯಾಗಿ ಸುತ್ತಾಡಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಆದ್ರೆ, ಇದೀಗ ವಯಸ್ಸಾಗಿದ್ದರಿಂದ ಅವರು ಬೇರೆ ಕರೆ ಹೋಗಲು ಸಾಧ್ಯವಾಗುತ್ತಿಲ್ಲ.

14 ವರ್ಷದ ಹಿಂದೆ, ದಕ್ಷಿಣ ಡರ್ಬಿಶೈರ್‌ನ ಸ್ಮಾಡಿನ್ ‌ಕೋಟ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಟುವರ್ಟ್ ಮತ್ತು ಇವರ ಪತ್ನಿ ಭಾಗವಹಿಸಿದ್ದರು. ಅಲ್ಲಿ ತೋರಿಸಲಾದ ಸಾಕ್ಷ್ಯಚಿತ್ರ ವೀಕ್ಷಿಸಿ, ಹಾಗೂ ಅಲ್ಲಿನ ಸೆಷನ್‌ನಲ್ಲಿ ಭಾಗವಹಿಸಿದ್ದ ನಂತರ ಇವರು ಜೀವನ ನೋಡುವ ದೃಷ್ಟಿಯೇ ಬದಲಾಗಿದೆ. ಪ್ರತಿವರ್ಷ ಸೈಗ್ರೆಸ್ ಬಳಿಯ ಲೇಕ್ ಸೈಡ್ ಫಾರ್ಮಗೆ, ವರ್ಷಕ್ಕೆ ಏನಿಲ್ಲ ಅಂದರೂ ಎರಡು ಬಾರಿ ಇವರು ಭೇಟಿ ಕೊಟ್ಟು, ಅಲ್ಲಿ ಕೆಲ ದಿನ ಬೆತ್ತಲೆಯಾಗಿ ಓಡಾಡಿ ಬರುತ್ತಿದ್ದರು. ಆದರೆ ಈಗ ವಯಸ್ಸಾದ ಕಾರಣ ಅಷ್ಟು ದೂರ ಪ್ರಯಾಣ ಮಾಡುವುದು ಕಷ್ಟವಾಗಿದೆ. ಈ ಕಾರಣಕ್ಕೆ ಸ್ಟುವರ್ಟ್ ಹವುಡ್ ಬೆತ್ತಲೆಯಾಗಿ ಓಡಾಡಲು ಈಗ ತಮ್ಮ ಮನೆಯ ಸುತ್ತಾಮುತ್ತ ತೋಟಗಳನ್ನ ಹುಡುಕುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಸ್ಟುವರ್ಟ್, ನನಗೆ ಬೆತ್ತಲೆಯಾಗಿ ಓಡಾಡುವುದಕ್ಕೆ ಖುಷಿಯಾಗುತ್ತೆ. ನಾನು ಸ್ವತಂತ್ರವಾಗಿದ್ದೇನೆ ಅನ್ನೋ ಭಾವ. ಬೆತ್ತಲೆಯಾಗುವುದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ. ನಿಮ್ಮ ದೇಹದ ಬಗ್ಗೆ ಹೆಮ್ಮೆ ಇರಬೇಕೇ ವಿನಃ ನಾಚಿಕೆಯಲ್ಲ. ಯಾರಾದರೂ ಬಾಡಿಗೆಗೆ ತೋಟ ಕೊಟ್ಟಿದ್ದೇ ಆದಲ್ಲಿ ಅವರಿಗೆ ಬಾಡಿಗೆ ಹಣ ಕೊಡುವುದಲ್ಲದೇ ತೋಟದ ಮಾಲೀಕನಿಗೆ ಉದ್ಯಾನವನದ ಕುರಿತಾಗಿ ಉಪಯುಕ್ತವಾದ ಕೆಲ ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sun, 13 November 22

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ