Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ತಪ್ಪಿಯೂ ಇತರರಿಗೆ ಹೇಳಬಾರದ ವಿಷಯಗಳು

ಚಾಣಕ್ಯ ನೀತಿ: ಚಾಣಕ್ಯನ ನೀತಿಯಲ್ಲಿ ವಿವರಿಸಿದ ಪ್ರತಿಯೊಂದು ಅಂಶವೂ ಜೀವನಕ್ಕೆ ಒಂದೊಂದು ಪಾಠವಾಗಿದೆ. ಈ ಕ್ರಮದಲ್ಲಿ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ನೋಡಿಕೊಳ್ಳಲು ಮತ್ತು ಅದರಿಂದ ಪಾರಾಗಲು ಯಾರೊಂದಿಗೂ ಹೇಳಬಾರದ ಕೆಲವು ವಿಷಯಗಳನ್ನು ಎಂದು ಚಾಣಕ್ಯ ವಿವರಿಸಿದರು. ಕನಿಷ್ಟ ಪಕ್ಷ ಹೆಂಡತಿಗೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.

ಚಾಣಕ್ಯ ನೀತಿ: ತಪ್ಪಿಯೂ ಇತರರಿಗೆ ಹೇಳಬಾರದ ವಿಷಯಗಳು
ಆಚಾರ್ಯ ಚಾಣಕ್ಯ ನೀತಿ
Follow us
ಪೃಥ್ವಿಶಂಕರ
| Updated By: Rakesh Nayak Manchi

Updated on:Sep 10, 2023 | 8:04 PM

ಮನುಷ್ಯನು ತನ್ನ ಜೀವನದ ಸಮಸ್ಯೆಗಳನ್ನು ಹೇಗೆ ಜಯಿಸಬೇಕು? ಇತರರೊಂದಿಗೆ ಹೇಗೆ ಬೆರೆಯಬೇಕು? ಬೇರೆಯವರೊಂದಿಗೆ ಉತ್ತಮ ಸಂಬಂಧ ಬೆಳೆಸುವುದು ಹೇಗೆ? ಆಚಾರ್ಯ ಚಾಣಕ್ಯರು (Acharya Chanakya) ವೈವಾಹಿಕ ಜೀವನದಲ್ಲಿ ವಿವಾದಗಳನ್ನು ಹೇಗೆ ಕೊನೆಗೊಳಿಸಬೇಕು ಎಂಬುದರ ಕುರಿತು ತಮ್ಮ ಬುದ್ಧಿವಂತಿಕೆಯಿಂದ ಉತ್ತಮ ಸಲಹೆಯನ್ನು ನೀಡಿದ್ದಾರೆ.

ಹಲವು ಶಾಸ್ತ್ರಗಳಲ್ಲಿ ವಿದ್ವಾಂಸರಾಗಿರುವ ಚಾಣಕ್ಯನ ಸೂಚನೆಗಳನ್ನು ಪಾಲಿಸಿದರೆ ನಿಮ್ಮ ಎಲ್ಲಾ ಚಿಂತೆಗಳನ್ನು ತೊಲಗಿಸಿ ಸಂತೋಷದ ಜೀವನ ನಡೆಸಬಹುದು ಎಂದು ಅನೇಕ ಹಿರಿಯರು ಹೇಳುತ್ತಾರೆ. ಚಾಣಕ್ಯನ ನೀತಿಯಲ್ಲಿ ವಿವರಿಸಿದ ಪ್ರತಿಯೊಂದು ಅಂಶವೂ ಜೀವನಕ್ಕೆ ಒಂದೊಂದು ಪಾಠವಾಗಿದೆ. ಈ ಕ್ರಮದಲ್ಲಿ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ನೋಡಿಕೊಳ್ಳಲು ಮತ್ತು ಅದರಿಂದ ಪಾರಾಗಲು ಯಾರೊಂದಿಗೂ ಹೇಳಬಾರದ ಕೆಲವು ವಿಷಯಗಳನ್ನು ಎಂದು ಚಾಣಕ್ಯ ವಿವರಿಸಿದರು. ಕನಿಷ್ಟ ಪಕ್ಷ ಹೆಂಡತಿಗೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.

ಗಳಿಕೆ: ಮನುಷ್ಯನು ತನ್ನ ಗಳಿಕೆಯ ಬಗ್ಗೆ ಇತರರಿಗೆ ಹೇಳದಿರುವುದು ಉತ್ತಮ. ಅಗತ್ಯವಿದ್ದರೆ ಕುಟುಂಬದೊಂದಿಗೆ ಮಾತ್ರ ಹಂಚಿಕೊಳ್ಳಿ ಎಂದು ಚಾಣಕ್ಯ ಸಲಹೆ ನೀಡಿದ್ದಾರೆ. ಆಚಾರ್ಯ ಚಾಣಕ್ಯ ಅವರು ಗಳಿಕೆಯ ಬಗ್ಗೆ ಇತರರಿಗೆ ಹೇಳುವುದರಿಂದ ನಿಮ್ಮ ಆದಾಯದ ಮೇಲೆ ಅವರ ಕೆಟ್ಟ ಕಣ್ಣು ಬೀಳುತ್ತದೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಚಾಣಕ್ಯ ನೀತಿ: ಸ್ನೇಹದ ಬಗ್ಗೆ ಕೆಲವು ಅತ್ಯುತ್ತಮ ಚಾಣಕ್ಯ ಉಲ್ಲೇಖಗಳು

ದೌರ್ಬಲ್ಯಗಳು: ಆಚಾರ್ಯ ಚಾಣಕ್ಯ ಅವರು ತಮ್ಮ ದೋಷ ಮತ್ತು ದೌರ್ಬಲ್ಯಗಳನ್ನು ಇತರರಿಗೆ ಹೇಳಬಾರದು ಎಂದು ಸಲಹೆ ನೀಡಿದ್ದಾರೆ. ಹೇಳಿದರೆ, ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ ಮತ್ತು ಯಶಸ್ಸಿನ ಅನ್ವೇಷಣೆಯಲ್ಲಿ ದೊಡ್ಡ ಅಡಚಣೆಯಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ.

ದಾನ: ದಾನದ ಬಗ್ಗೆ ಇತರರಿಗೆ ಹೇಳಬಾರದು. ಹೇಳಿದರೆ ಅದು ಪುಣ್ಯವನ್ನು ನೀಡುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ. ದಾನವು ಪುಣ್ಯದ ಕಾರ್ಯವಾಗಿದ್ದು, ಅದನ್ನು ಇತರರಿಗೆ ತಿಳಿಸುವುದರಿಂದ ಯಾವುದೇ ಪ್ರತಿಫಲ ದೊರೆಯುವುದಿಲ್ಲ ಎಂಬುದು ಚಾಣಕ್ಯನ ಮಾತು.

ದಾಂಪತ್ಯ ರಹಸ್ಯಗಳು: ಪುರುಷನು ತನ್ನ ವೈವಾಹಿಕ ಜೀವನದ ವಿವರಗಳನ್ನು ಸಹ ಇತರರೊಂದಿಗೆ ಹಂಚಿಕೊಳ್ಳಬಾರದು. ದಾಂಪತ್ಯ ಜೀವನ ರಹಸ್ಯವಾಗಿದ್ದರೆ ಮಾತ್ರ ಪತಿ-ಪತ್ನಿಯರಿಗೆ ಒಳ್ಳೆಯದು. ಇಲ್ಲದಿದ್ದರೆ ಇತರರಿಂದ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡಿದ್ದಾರೆ.

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆಯನ್ನು ಆಧರಿಸಿದೆ. ಈ ಮಾಹಿತಿಯನ್ನು ದೃಢೀಕರಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಓದುಗರ ಆಸಕ್ತಿ ಮತ್ತು ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು ನಾವು ಈ ಮಾಹಿತಿಯನ್ನು ಒದಗಿಸಿದ್ದೇವೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Sun, 10 September 23

ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ