AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ತಪ್ಪಿಯೂ ಇತರರಿಗೆ ಹೇಳಬಾರದ ವಿಷಯಗಳು

ಚಾಣಕ್ಯ ನೀತಿ: ಚಾಣಕ್ಯನ ನೀತಿಯಲ್ಲಿ ವಿವರಿಸಿದ ಪ್ರತಿಯೊಂದು ಅಂಶವೂ ಜೀವನಕ್ಕೆ ಒಂದೊಂದು ಪಾಠವಾಗಿದೆ. ಈ ಕ್ರಮದಲ್ಲಿ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ನೋಡಿಕೊಳ್ಳಲು ಮತ್ತು ಅದರಿಂದ ಪಾರಾಗಲು ಯಾರೊಂದಿಗೂ ಹೇಳಬಾರದ ಕೆಲವು ವಿಷಯಗಳನ್ನು ಎಂದು ಚಾಣಕ್ಯ ವಿವರಿಸಿದರು. ಕನಿಷ್ಟ ಪಕ್ಷ ಹೆಂಡತಿಗೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.

ಚಾಣಕ್ಯ ನೀತಿ: ತಪ್ಪಿಯೂ ಇತರರಿಗೆ ಹೇಳಬಾರದ ವಿಷಯಗಳು
ಆಚಾರ್ಯ ಚಾಣಕ್ಯ ನೀತಿ
ಪೃಥ್ವಿಶಂಕರ
| Updated By: Rakesh Nayak Manchi|

Updated on:Sep 10, 2023 | 8:04 PM

Share

ಮನುಷ್ಯನು ತನ್ನ ಜೀವನದ ಸಮಸ್ಯೆಗಳನ್ನು ಹೇಗೆ ಜಯಿಸಬೇಕು? ಇತರರೊಂದಿಗೆ ಹೇಗೆ ಬೆರೆಯಬೇಕು? ಬೇರೆಯವರೊಂದಿಗೆ ಉತ್ತಮ ಸಂಬಂಧ ಬೆಳೆಸುವುದು ಹೇಗೆ? ಆಚಾರ್ಯ ಚಾಣಕ್ಯರು (Acharya Chanakya) ವೈವಾಹಿಕ ಜೀವನದಲ್ಲಿ ವಿವಾದಗಳನ್ನು ಹೇಗೆ ಕೊನೆಗೊಳಿಸಬೇಕು ಎಂಬುದರ ಕುರಿತು ತಮ್ಮ ಬುದ್ಧಿವಂತಿಕೆಯಿಂದ ಉತ್ತಮ ಸಲಹೆಯನ್ನು ನೀಡಿದ್ದಾರೆ.

ಹಲವು ಶಾಸ್ತ್ರಗಳಲ್ಲಿ ವಿದ್ವಾಂಸರಾಗಿರುವ ಚಾಣಕ್ಯನ ಸೂಚನೆಗಳನ್ನು ಪಾಲಿಸಿದರೆ ನಿಮ್ಮ ಎಲ್ಲಾ ಚಿಂತೆಗಳನ್ನು ತೊಲಗಿಸಿ ಸಂತೋಷದ ಜೀವನ ನಡೆಸಬಹುದು ಎಂದು ಅನೇಕ ಹಿರಿಯರು ಹೇಳುತ್ತಾರೆ. ಚಾಣಕ್ಯನ ನೀತಿಯಲ್ಲಿ ವಿವರಿಸಿದ ಪ್ರತಿಯೊಂದು ಅಂಶವೂ ಜೀವನಕ್ಕೆ ಒಂದೊಂದು ಪಾಠವಾಗಿದೆ. ಈ ಕ್ರಮದಲ್ಲಿ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ನೋಡಿಕೊಳ್ಳಲು ಮತ್ತು ಅದರಿಂದ ಪಾರಾಗಲು ಯಾರೊಂದಿಗೂ ಹೇಳಬಾರದ ಕೆಲವು ವಿಷಯಗಳನ್ನು ಎಂದು ಚಾಣಕ್ಯ ವಿವರಿಸಿದರು. ಕನಿಷ್ಟ ಪಕ್ಷ ಹೆಂಡತಿಗೂ ಹೇಳಬಾರದು ಎನ್ನುತ್ತಾರೆ ಚಾಣಕ್ಯ.

ಗಳಿಕೆ: ಮನುಷ್ಯನು ತನ್ನ ಗಳಿಕೆಯ ಬಗ್ಗೆ ಇತರರಿಗೆ ಹೇಳದಿರುವುದು ಉತ್ತಮ. ಅಗತ್ಯವಿದ್ದರೆ ಕುಟುಂಬದೊಂದಿಗೆ ಮಾತ್ರ ಹಂಚಿಕೊಳ್ಳಿ ಎಂದು ಚಾಣಕ್ಯ ಸಲಹೆ ನೀಡಿದ್ದಾರೆ. ಆಚಾರ್ಯ ಚಾಣಕ್ಯ ಅವರು ಗಳಿಕೆಯ ಬಗ್ಗೆ ಇತರರಿಗೆ ಹೇಳುವುದರಿಂದ ನಿಮ್ಮ ಆದಾಯದ ಮೇಲೆ ಅವರ ಕೆಟ್ಟ ಕಣ್ಣು ಬೀಳುತ್ತದೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಚಾಣಕ್ಯ ನೀತಿ: ಸ್ನೇಹದ ಬಗ್ಗೆ ಕೆಲವು ಅತ್ಯುತ್ತಮ ಚಾಣಕ್ಯ ಉಲ್ಲೇಖಗಳು

ದೌರ್ಬಲ್ಯಗಳು: ಆಚಾರ್ಯ ಚಾಣಕ್ಯ ಅವರು ತಮ್ಮ ದೋಷ ಮತ್ತು ದೌರ್ಬಲ್ಯಗಳನ್ನು ಇತರರಿಗೆ ಹೇಳಬಾರದು ಎಂದು ಸಲಹೆ ನೀಡಿದ್ದಾರೆ. ಹೇಳಿದರೆ, ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ ಮತ್ತು ಯಶಸ್ಸಿನ ಅನ್ವೇಷಣೆಯಲ್ಲಿ ದೊಡ್ಡ ಅಡಚಣೆಯಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ.

ದಾನ: ದಾನದ ಬಗ್ಗೆ ಇತರರಿಗೆ ಹೇಳಬಾರದು. ಹೇಳಿದರೆ ಅದು ಪುಣ್ಯವನ್ನು ನೀಡುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ. ದಾನವು ಪುಣ್ಯದ ಕಾರ್ಯವಾಗಿದ್ದು, ಅದನ್ನು ಇತರರಿಗೆ ತಿಳಿಸುವುದರಿಂದ ಯಾವುದೇ ಪ್ರತಿಫಲ ದೊರೆಯುವುದಿಲ್ಲ ಎಂಬುದು ಚಾಣಕ್ಯನ ಮಾತು.

ದಾಂಪತ್ಯ ರಹಸ್ಯಗಳು: ಪುರುಷನು ತನ್ನ ವೈವಾಹಿಕ ಜೀವನದ ವಿವರಗಳನ್ನು ಸಹ ಇತರರೊಂದಿಗೆ ಹಂಚಿಕೊಳ್ಳಬಾರದು. ದಾಂಪತ್ಯ ಜೀವನ ರಹಸ್ಯವಾಗಿದ್ದರೆ ಮಾತ್ರ ಪತಿ-ಪತ್ನಿಯರಿಗೆ ಒಳ್ಳೆಯದು. ಇಲ್ಲದಿದ್ದರೆ ಇತರರಿಂದ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡಿದ್ದಾರೆ.

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆಯನ್ನು ಆಧರಿಸಿದೆ. ಈ ಮಾಹಿತಿಯನ್ನು ದೃಢೀಕರಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಓದುಗರ ಆಸಕ್ತಿ ಮತ್ತು ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು ನಾವು ಈ ಮಾಹಿತಿಯನ್ನು ಒದಗಿಸಿದ್ದೇವೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Sun, 10 September 23

ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?