ಯಾವುದೇ ಕಾರಣಕ್ಕೂ ತುಳಸಿಯನ್ನು ಅಗಿಯಬೇಡಿ, ಇದು ದೊಡ್ಡ ಅಪಾಯಕಾರಿ ಅಭ್ಯಾಸ
ತುಳಸಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವ ಅಭ್ಯಾಸ ಇದೆ. ಆದರೆ ಇದು ತಪ್ಪು, ತುಳಸಿ ಎಲೆಗೆ ಹಲ್ಲುಗಳು ಸ್ಪರ್ಶಿಸಬಾರದು, ಇದರಿಂದ ಕೆಟ್ಟ ರಸಗಳು ಉತ್ಪಾತಿಯಾಗುತ್ತದೆ. ಇದರಿಂದ ದೇಹದ ಮೇಲೆ ದೊಡ್ಡ ಪರಿಣಾವನ್ನು ಉಂಟು ಮಾಡುತ್ತದೆ. ಆ ಕಾರಣಕ್ಕಾಗಿ ತುಳಸಿಯನ್ನು ಅಗಿಯುವ ಬದಲು ಹೀಗೆ ಮಾಡಬಹದು. ಆರೋಗ್ಯಕರ ಜೀವನಶೈಲಿಗಾಗಿ ತುಳಸಿಯನ್ನು ಹೇಘ ಬಳಸುವುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ತುಳಸಿ ಗಿಡ (Tulsi) ಸರ್ವರೋಗಕ್ಕೆ ಔಷಧಿಯಾಗಿದೆ. ಇದರಲ್ಲಿ ದೈಹಿಕ ಹಾಗೂ ಆರೋಗ್ಯ ಗುಣಗಳು ಇರುತ್ತದೆ. ಧರ್ಮ ಮತ್ತು ವಿಜ್ಞಾನ ಎರಡರ ದೃಷ್ಟಿಕೋನದಿಂದ ಒಳ್ಳೆಯದು. ತುಳಸಿಯ ಪೂಜೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ, ಸಂತೋಷ ಎಲ್ಲವೂ ನೆಲೆಸಿರುತ್ತದೆ. ಜತೆಗೆ ಇದರ ಎಲೆಯಿಂದ ಆರೋಗ್ಯ ಪ್ರಯೋಜನಗಳು ಕೂಡ ಇದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗೂ ಈ ಮಕ್ಕಳಲ್ಲಿ ಶೀತ ಮತ್ತು ಜ್ವರ ಬಂದ ಸಂದರ್ಭದಲ್ಲಿ ಅವರಿಗೆ ಕಷಾಯದ ರೂಪದಲ್ಲಿ ನೀಡುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗಾಗಿ ಇದರ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾರೆ. ಆದರೆ ಈ ಅಭ್ಯಾಸ ಹಾನಿಕಾರಕ ಎಂದು ಹೇಳಲಾಗಿದೆ. ತುಳಸಿಯಲ್ಲಿ ಆರೋಗ್ಯ ಪ್ರಯೋಜನಗಳು ಇದೆ. ತುಳಸಿ ತಿನ್ನಬಾರದು ಎಂದು ಹೇಳುತ್ತಿಲ್ಲ. ಆದರೆ ಅದನ್ನು ಅಗಿದು ತಿನ್ನುವುದರಿಂದ ಅನೇಕ ಅಪಾಯಗಳು ಇವೆ. ಒಂದು ವೇಳೆ ಅದನ್ನು ಅಗಿದರು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಕೆಲವೊಂದು ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.
ತುಳಸಿ ಎಲೆಗಳನ್ನು ಏಕೆ ಅಗಿಯಬಾರದು?
- ಇದರ ಎಲೆಗಳಲ್ಲಿ ಪಾದರಸದಂತಹ ಅಂಶಗಳು ಕಂಡುಬರುತ್ತವೆ, ಇದು ನಿಮ್ಮ ಬಾಯಿಯ ಆರೋಗ್ಯಕ್ಕೆ ಹಾನಿಕಾರಕ
- ಪ್ರತಿದಿನ ತುಳಸಿಯನ್ನು ಅಗಿಯಲು ಪ್ರಾರಂಭಿಸಿದಾಗ, ಅದು ನಿಧಾನವಾಗಿ ಹಲ್ಲಿನ ದಂತಕವಚಕ್ಕೆ ಹಾನಿಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಹಲ್ಲುಗಳು ಸೂಕ್ಷ್ಮವಾಗುತ್ತವೆ. ಅಲ್ಲದೆ, ಇದರ ಎಲೆಗಳ ಸೌಮ್ಯವಾದ ಕಟುತ್ವವು ಬಾಯಿಯಲ್ಲಿ ಕಿರಿಕಿರಿ ಮತ್ತು ಗಾಯಗಳನ್ನು ಉಂಟುಮಾಡಬಹುದು.
- ಎಲೆಗಳನ್ನು ಜಗಿಯುವ ಬದಲು, ಅದರ ಕಷಾಯ ಅಥವಾ ಸಾರವನ್ನು ಕುಡಿಯಬೇಕು. ತುಳಸಿ ನೀರಿಗೆ ಜೇನುತುಪ್ಪ ಬೆರೆಸಿ ಕೂಡ ಸೇವಿಸಬಹುದು. ಇದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುವುದಿಲ್ಲ ಮತ್ತು ನೀವು ಅದರ ಪ್ರಯೋಜನಗಳನ್ನು ಪಡೆಯುತ್ತೀರಿ.
- ತುಳಸಿಗೆ ದೇವತೆಯ ಸ್ಥಾನಮಾನ ನೀಡಲಾಗಿದೆ, ಆದ್ದರಿಂದ ಅದರ ಸೇವನೆಯು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ಅಗಿಯುವ ಅಥವಾ ಕತ್ತರಿಸುವ ಬದಲು, ಅದನ್ನು ನುಂಗಬೇಕು. ಅದನ್ನು ಹಲ್ಲುಗಳಿಂದ ಕಚ್ಚುವುದನ್ನು ಅವಮಾನವೆಂದು ಹೇಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ