AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ದಿಂಬಿನ ಕೆಳಗೆ ಮೊಬೈಲ್​ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ

ಮೊಬೈಲ್​ಗೆ ಎಷ್ಟು ಅಡಿಕ್ಟ್​ ಆಗಿದ್ದೇವೆ ಎಂದರೆ ಮಲಗುವಾಗಲೂ ಅದನ್ನು ದೂರ ಇಡುವುದಿಲ್ಲ, ಕೆಲವರು ತಮ್ಮ ಕೈಯಲ್ಲಿ, ಇನ್ನೂ ಕೆಲವರು ದಿಂಬಿನ ಕೆಳಗೆ ಇಟ್ಟು ಮಲಗುತ್ತಾರೆ.

ನಿಮಗೂ ದಿಂಬಿನ ಕೆಳಗೆ ಮೊಬೈಲ್​ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ
ಮೊಬೈಲ್ ಬಳಕೆ
ನಯನಾ ರಾಜೀವ್
|

Updated on: Jan 05, 2023 | 9:52 AM

Share

ಮೊಬೈಲ್​ಗೆ ಎಷ್ಟು ಅಡಿಕ್ಟ್​ ಆಗಿದ್ದೇವೆ ಎಂದರೆ ಮಲಗುವಾಗಲೂ ಅದನ್ನು ದೂರ ಇಡುವುದಿಲ್ಲ, ಕೆಲವರು ತಮ್ಮ ಕೈಯಲ್ಲಿ, ಇನ್ನೂ ಕೆಲವರು ದಿಂಬಿನ ಕೆಳಗೆ ಇಟ್ಟು ಮಲಗುತ್ತಾರೆ. ಮಲಗುವ ಮುನ್ನ ಫೋನ್ ಬಳಸುವುದು ಹಾನಿಕಾರಕ ಎಂಬುದರಲ್ಲಿ ಸಂದೇಹವಿಲ್ಲ. ಇದು ಉತ್ತಮ ನಿದ್ರೆ ಬರದಂತೆ ತಡೆಯುತ್ತದೆ. ಮಲಗುವ ಸ್ವಲ್ಪ ಸಮಯದ ಮುನ್ನವೇ ಮೊಬೈಲ್​ ಅನ್ನು ದೂರ ಇಡಲೇಬೇಕು, ಆಗ ಮೆದುಳಿಗೆ ನಿದ್ರೆಯ ಸಂದೇಶ ರವಾನೆಯಾಗುತ್ತದೆ. ಮೊಬೈಲ್ ನೋಡುತ್ತಿದ್ದರೆ ಮೊಬೈಲ್ ಬೆಳಕು ನಿಮ್ಮ ಮೆದುಳನ್ನು ಜಾಗೃತರಾಗಿರುವಂತೆ ನೋಡಿಕೊಳ್ಳುತ್ತದೆ, ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.

ನಿಮಗೆ ಮಧ್ಯೆರಾತ್ರಿ ಎಚ್ಚರವಾದರೆ ಒಂದೊಮ್ಮೆ ಮೊಬೈಲ್​ ಅನ್ನು ಹತ್ತಿರವಿಟ್ಟುಕೊಂಡು ಮಲಗಿದಾಗ ಮಧ್ಯೆ ಎಲ್ಲಾದರೂ ಎಚ್ಚರವಾದರೆ ತಕ್ಷಣವೇ ಮೊಬೈಲ್ ತೆರೆದು ನೋಡುವ ಅಭ್ಯಾಸ. ಅದೇ ಮೊಬೈಲ್ ದೂರ ಇದ್ದರೆ ಹಾಗೆಯೇ ಮತ್ತೆ ನಿದ್ರೆ ಬಂದುಬಿಡುತ್ತದೆ. ವಾಸ್ತವವಾಗಿ, ಹೆಚ್ಚಿನ ಜನರು ರಾತ್ರಿಯಿಡೀ ಹಲವಾರು ಬಾರಿ ಎಚ್ಚರಗೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಮತ್ತೆ ಮಲಗಲು ಪ್ರಯತ್ನಿಸಿದಾಗ, ಫೋನ್ ನೋಡುತ್ತಾರೆ, ಫೋನ್ ಬೆಳಕು ನಿಮ್ಮ ಮೆದುಳು ಮತ್ತು ದೇಹವನ್ನು ನಿದ್ರೆಯಿಂದ ದೂರವಿಡುತ್ತದೆ, ಮೆದುಳು ಎಚ್ಚರವಾಗಿರುವಂತೆ ಮಾಡುತ್ತದೆ. ಇದರಿಂದ ನಿಮ್ಮ ನಿದ್ದೆ ಮಾಯವಾಗುತ್ತದೆ.

ಆರೋಗ್ಯ ಸಮಸ್ಯೆಗಳೂ ಇವೆ ಆಂಟೆನಾಗಳ ಜಾಲದ ಮೂಲಕ ರೇಡಿಯೋ ತರಂಗಗಳನ್ನು ರವಾನಿಸುವ ಮೂಲಕ ಸ್ಮಾರ್ಟ್‌ಫೋನ್‌ಗಳು ಸಂವಹನವನ್ನು ಸುಲಭಗೊಳಿಸುತ್ತವೆ. ಈ ತರಂಗಗಳನ್ನು ರೇಡಿಯೋ ತರಂಗಗಳು ಎಂದೂ ಕರೆಯುತ್ತಾರೆ, ವಾಸ್ತವವಾಗಿ ವಿದ್ಯುತ್ಕಾಂತೀಯ ಕ್ಷೇತ್ರವಾಗಿದೆ.

NTP ಸ್ಮಾರ್ಟ್‌ಫೋನ್ ಹತ್ತಿರ ಇಡುವ ಬಗ್ಗೆ ಅಧ್ಯಯನ ಮಾಡಿದೆ. US ನ್ಯಾಷನಲ್ ಟಾಕ್ಸಿಕಾಲಜಿ ಪ್ರೋಗ್ರಾಂ (NTP) 2018 ಮತ್ತು ಇತ್ತೀಚಿನ ಅಧ್ಯಯನದ ಫಲಿತಾಂಶಗಳನ್ನು ಪ್ರಕಟಿಸಿದೆ. ಗಂಡು ಇಲಿಗಳಲ್ಲಿ ಅಸಹಜ ಹೃದಯದ ಗೆಡ್ಡೆಗಳ ಅಪಾಯವನ್ನು ಅವರು ಕಂಡುಕೊಂಡರು, ಆದರೆ ಹೆಣ್ಣು ಇಲಿಗಳಲ್ಲಿ ಇಲ್ಲ. ಇದು ತಲೆನೋವು, ಸ್ನಾಯು ನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ