AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಂಗಿನ ಚಿಪ್ಪಿನಲ್ಲಿ ಸಬ್ಬಸಿಗೆ ಇಡ್ಲಿ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ

ನೀವು ಇಡ್ಲಿ ಪ್ರೀಯರಾಗಿದ್ದರೆ ಅಥವಾ ನಿಮಗೆ ಒಂದೇ ತರನಾದ ತಿಂಡಿ ತಿಂದು ಬೇಸರವಾಗಿದ್ದರೆ, ಸಬ್ಬಸಿಗೆ ಸೊಪ್ಪನ್ನು ಬಳಸುವ ಮೂಲಕ ಇಡ್ಲಿ ತಯಾರಿಸಿಕೊಳ್ಳಬಹುದು. ಜೊತೆಗೆ ಈ ಇಡ್ಲಿಯನ್ನು ಬಡಿಸಲು ತೆಂಗಿನ ಚಿಪ್ಪನ್ನು ಸಹ ನೀವು ಬಳಸಿಕೊಳ್ಳಬಹುದು. ಸಬ್ಬಸಿಗೆ ಎಲೆಗಳ ಜೊತೆ ತೆಂಗಿನ ಚಿಪ್ಪನ್ನು ಬಳಸುವುದರಿಂದ ಇಡ್ಲಿಗಳನ್ನು ಹೆಚ್ಚು ಪೌಷ್ಟಿಕವಾಗಿಸಬಹುದು. ಅದರ ಮೇಲೆ ಸ್ವಲ್ಪ ಕರಗಿಸಿದ ತುಪ್ಪ, ಚಟ್ನಿ ಪುಡಿ ಹಾಕಿ ಆನಂದಿಸಿದರೆ ಮತ್ತೂ ಸ್ವಾದಿಷ್ಟವಾಗಿರುತ್ತದೆ.

ತೆಂಗಿನ ಚಿಪ್ಪಿನಲ್ಲಿ ಸಬ್ಬಸಿಗೆ ಇಡ್ಲಿ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 14, 2023 | 6:27 PM

Share

ಈ ವಾರಾಂತ್ಯಕ್ಕೆ ಯಾವ ತಿಂಡಿ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಅಥವಾ ಭಾನುವಾರ ಮನೆಯಲ್ಲಿ ಏನಾದರೂ ವಿನೂತನ ಶೈಲಿ, ಜೊತೆಗೆ ಬಾಯಿಗೂ ರುಚಿ ನೀಡುವಂತಹ ಹಾಗೂ ಆರೋಗ್ಯಕರ ರೆಸಿಪಿ ಬಯಸುತ್ತಿರುವವರಿಗೆ ಈ ಪಾಕವಿಧಾನ ಹೇಳಿ ಮಾಡಿಸಿದಂತಿದೆ. ಹಾಗಾದರೆ ಏನಿದು? ಹೇಗೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ನೀವು ಇಡ್ಲಿ ಪ್ರೀಯರಾಗಿದ್ದರೆ ಅಥವಾ ನಿಮಗೆ ಒಂದೇ ತರನಾದ ತಿಂಡಿ ತಿಂದು ಬೇಸರವಾಗಿದ್ದರೆ, ಸಬ್ಬಸಿಗೆ ಸೊಪ್ಪನ್ನು ಬಳಸುವ ಮೂಲಕ ಇಡ್ಲಿ ತಯಾರಿಸಿಕೊಳ್ಳಬಹುದು. ಜೊತೆಗೆ ಈ ಇಡ್ಲಿಯನ್ನು ಬಡಿಸಲು ತೆಂಗಿನ ಚಿಪ್ಪನ್ನು ಸಹ ನೀವು ಬಳಸಿಕೊಳ್ಳಬಹುದು. ಸಬ್ಬಸಿಗೆ ಎಲೆಗಳ ಜೊತೆ ತೆಂಗಿನ ಚಿಪ್ಪನ್ನು ಬಳಸುವುದರಿಂದ ಇಡ್ಲಿಗಳನ್ನು ಹೆಚ್ಚು ಪೌಷ್ಟಿಕವಾಗಿಸಬಹುದು. ಅದರ ಮೇಲೆ ಸ್ವಲ್ಪ ಕರಗಿಸಿದ ತುಪ್ಪ, ಚಟ್ನಿ ಪುಡಿ ಹಾಕಿ ಆನಂದಿಸಿದರೆ ಮತ್ತೂ ಸ್ವಾದಿಷ್ಟವಾಗಿರುತ್ತದೆ.

ಸಬ್ಬಸಿಗೆ ಎಲೆಗಳನ್ನು ಭಾರತದಲ್ಲಿ ‘ಸೋಯಾ’, ‘ಸೋವಾ’ ಅಥವಾ ‘ಸಾವಾ’ ಎಂದು ಕರೆಯಲಾಗುತ್ತದೆ. ಈ ಸೊಪ್ಪಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದು ಇದರಲ್ಲಿರುವ ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಬ್ಬಸಿಗೆ ಸೊಪ್ಪಿನಲ್ಲಿರುವ ವಿಟಮಿನ್ ಎ ನಿಮ್ಮ ದೃಷ್ಟಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸಬ್ಬಸಿಗೆ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಇದರಿಂದ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಸಬ್ಬಸಿಗೆ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು:

3 ಕಪ್ ಇಡ್ಲಿ ರೈಸ್

1/2 ಕಪ್ ಪೋಹಾ (ಅವಲಕ್ಕಿ)

1 ಕಪ್ ಉದ್ದಿನ ಬೇಳೆ

1 ಟೀ ಸ್ಪೂನ್ ಮೆಂತ್ಯ ಬೀಜಗಳು

1/4 ಕಪ್ ಸಬ್ಬಸಿಗೆ ಎಲೆಗಳು (ತೊಳೆದು ಕತ್ತರಿಸಿದ)

ಉಪ್ಪು, ರುಚಿಗೆ ತಕ್ಕಷ್ಟು

ರೆಸಿಪಿ ವಿಡಿಯೋ ಇಲ್ಲಿದೆ:

ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ ಇಡ್ಲಿ ರೈಸ್, ಪೋಹಾ (ಅವಲಕ್ಕಿ), ಚೆನ್ನಾಗಿ ತೊಳೆಯಿರಿ. ಬಳಿಕ ಇದನ್ನು 4- 5 ಗಂಟೆಗಳ ಕಾಲ ಹಾಗೆ ಬಿಡಿ. ಇನ್ನು ಒಂದು ಬಟ್ಟಲಿನಲ್ಲಿ ಉದ್ದಿನ ಬೇಳೆಯನ್ನು ಹಾಕಿ, ಅದನ್ನು ಚೆನ್ನಾಗಿ ತೊಳೆದು 6- 7 ಗಂಟೆಗಳ ಕಾಲ ಬಿಡಿ. ಇವೆಲ್ಲಾ ಚೆನ್ನಾಗಿ ನೆನೆದ ಬಳಿಕ ಪ್ರತ್ಯೇಕವಾಗಿ ರುಬ್ಬಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿಯಿಡಿ 6- 7 ಗಂಟೆಗಳ ಕಾಲ ಹುದುಗಲು ಬಿಡಿ. ಬಳಿಕ ಹಿಟ್ಟನ್ನು ಸರಿಯಾಗಿ ಕಲಸಿ, ಈ ಮಿಶ್ರಣಕ್ಕೆ ಉಪ್ಪು, ಸಬ್ಬಸಿಗೆ ಎಲೆಗಳನ್ನು ಸೇರಿಸಿ ಹಿಟ್ಟನ್ನು ಸರಿಯಾದ ಮಿಶ್ರಣಕ್ಕೆ ತನ್ನಿ. ಇನ್ನು ಗರಟೆ ಅಥವಾ ತೆಂಗಿನ ಚಿಪ್ಪಿಗೆ ಚೆನ್ನಾಗಿ ತುಪ್ಪ ಸವರಿ ಬಳಿಕ ಅದಕ್ಕೆ ಇಡ್ಲಿ ಹಿಟ್ಟನ್ನು ಸುರಿಯಿರಿ ಬಳಿಕ ಸುಮಾರು 15- 20 ನಿಮಿಷಗಳ ಕಾಲ ಅಥವಾ ಇಡ್ಲಿಗಳು ಚೆನ್ನಾಗಿ ಬೇಯುವವರೆಗೆ ಹಬೆಯಲ್ಲಿ ಬೇಯಿಸಿಕೊಳ್ಳಿ. ಬಳಿಕ ಬಿಸಿ ಬಿಸಿ ಇಡ್ಲಿ ಮೇಲೆ ಸ್ವಲ್ಪ ತುಪ್ಪ, ತೆಂಗಿನಕಾಯಿ ಚಟ್ನಿ ಪುಡಿ ಹಾಕಿ ಆನಂದಿಸಿ.

ಇದನ್ನೂ ಓದಿ: ಬಾಳೆ ಎಲೆ ಕಪ್​​ನಲ್ಲಿ ಇಡ್ಲಿ- ಸಾಂಬಾರ್ ತಿಂದಿದ್ದೀರಾ? ಈ ಕಪ್ ತಯಾರಿಸುವುದು ಹೇಗೆ?

ಈ ವಿಡಿಯೋವನ್ನು thespicystory ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಅನೇಕರು ಈ ಆರೋಗ್ಯಕರ ರೆಸಿಪಿಯನ್ನು ಇಷ್ಟ ಪಟ್ಟಿದ್ದು, ಮಕ್ಕಳ ಊಟ ಮತ್ತು ತಿಂಡಿ ಡಬ್ಬಿಗೆ ಹಾಕಲು ತುಂಬಾ ಉಪಯುಕ್ತ ರೆಸಿಪಿ ಎಂದಿದ್ದಾರೆ. ಇನ್ನು ಹಲವರು ಈ ಸರಳ ಪಾಕವಿಧಾನವನ್ನು ನಾವು ಕೂಡ ಮನೆಯಲ್ಲಿ ಟ್ರೈ ಮಾಡುತ್ತೇವೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ