AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು ಸುರುಳಿ ಹೋಳಿಗೆ, ಇಲ್ಲಿದೆ ರೆಸಿಪಿ

ಯಾವುದೇ ಹಬ್ಬವಿರಲಿ, ಮದುವೆ ಇರಲಿ ಅಲ್ಲಿ ಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿದ್ದರೆ ಹೇಗೆ ಹೇಳಿ. ಈ ಹೋಳಿಗೆ ಎಂದಾಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಸಿಹಿ ಸಿಹಿಯಾದ ಹೋಳಿಗೆಯಲ್ಲಿ ವಿವಿಧ ಬಗೆಯಿದ್ದು, ಸಿಹಿ ಪ್ರಿಯರಿಗಂತೂ ಎಲ್ಲಾ ಹೋಳಿಗೆಯು ಇಷ್ಟವೇ. ಆದರೆ ಉತ್ತರ ಕರ್ನಾಟಕದ ಸುರುಳಿ ಹೋಳಿಗೆಯ ಬಗ್ಗೆ ಕೇಳಿದ್ದಿರಬಹುದು. ಈ ಭಾಗದ ಸಾಂಪ್ರಾದಾಯಿಕ ಸಿಹಿ ತಿನಿಸು ಇದಾಗಿದ್ದು, ಬಾಯಲ್ಲಿಟ್ಟರೆ ಕರಗುವ ಈ ಹೋಳಿಗೆ ಮಾಡುವುದು ಸುಲಭ. ಹಾಗಾದ್ರೆ ಸುರುಳಿಕಾರದ ಹೋಳಿಗೆ ರೆಸಿಪಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು ಸುರುಳಿ ಹೋಳಿಗೆ, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jul 25, 2024 | 11:40 AM

Share

ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಸಿಹಿಸಿಹಿಯಾದ ಹೂರಣವನ್ನು ಬಾಯಲ್ಲಿಟ್ಟರೆ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಹಬ್ಬದ ಅಡುಗೆಯಲ್ಲಿ ಹೋಳಿಗೆ ಇದ್ದರೆ ಅದರ ಮಜಾನೇ ಬೇರೆ. ಉತ್ತರ ಕರ್ನಾಟಕದಲ್ಲಿ ವಿವಿಧ ಬಗೆಯ ಹೋಳಿಗೆಯು ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ಈ ಸುರುಳಿ ಹೋಳಿಗೆಯಂತೂ ತುಂಬಾನೇ ಸ್ಪೆಷಲ್. ಹೆಸರೇ ಹೇಳುವಂತೆ ಸುರುಳಿಯಾಕಾರದಲ್ಲಿರುವ ಈ ಹೋಳಿಗೆ ನೋಡಿದ ಕೂಡಲೇ ತಿನ್ನಬೇಕೆನಿಸುತ್ತದೆ. ಮನೆಯಲ್ಲಿರುವ ಕೆಲವೇ ಕೆಲವು ಐಟಂನಿಂದ ಮಾಡಬಹುದಾದ ಈ ಹೋಳಿಗೆಯನ್ನು ಒಮ್ಮೆ ಸವಿದರೆ ಬೇಡ ಎನ್ನಲು ಮನಸ್ಸೇ ಆಗುವುದಿಲ್ಲ.

ಸುರುಳಿ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು

* ಮೈದಾ ಹಿಟ್ಟು

* ಎರಡು ಚಮಚದಷ್ಟು ಎಣ್ಣೆ

* ಒಂದು ಕಪ್ ಪುಡಿ ಬೆಲ್ಲ

* ಒಂದು ಕಪ್ ಒಣಕೊಬ್ಬರಿ ತುರಿ

* ಅರ್ಧ ಕಪ್ ಹುರಿದ ಗಸಗಸೆ

* ಒಂದೆರಡು ಚಮಚ ಏಲಕ್ಕಿ ಪುಡಿ

ಇದನ್ನೂ ಓದಿ: ಬೆಳಗ್ಗೆ ತಿಂಡಿಗೆ ಬೆಸ್ಟ್ ಕೂರ್ಗ್ ಸ್ಪೆಷಲ್ ಪಾಪುಟ್ಟು, ಮಾಡೋದು ಹೇಗೆ?

ಸುರುಳಿ ಹೋಳಿಗೆ ಮಾಡುವ ವಿಧಾನ

* ಒಂದು ಕಪ್ ಮೈದಾ ಹಿಟ್ಟಿಗೆ ಎಣ್ಣೆ ಹಾಗೂ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ನೆನೆಯಲು ಬಿಡಿ.

* ಆ ಬಳಿಕ ಬೆಲ್ಲಕ್ಕೆ ಒಣ ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಹೂರಣ ಸಿದ್ಧಮಾಡಿಕೊಳ್ಳಿ.

* ನಂತರದಲ್ಲಿ ಮೈದಾ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ತೆಳ್ಳಗೆ ಲಟ್ಟಿಸಿ ಎರಡೂ ಕಡೆ ಅರ್ಧ ಬೇಯಿಸಬೇಕು.

* ಒಂದು ತುದಿಗೆ ಹೂರಣ ಹಾಕಿ ಸುರುಳಿ ಮಾಡಿ, ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಸುರುಳಿ ಹೋಳಿಗೆ ಸವಿಯಲು ಸಿದ್ಧ. ತುಪ್ಪದೊಂದಿಗೆ ಇದನ್ನು ಸವಿಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ