Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃದುವಾದ ಪಾದ ನಿಮ್ಮದಾಗಲು ರಾತ್ರಿ ಈ ಅಭ್ಯಾಸ ರೂಢಿಸಿಕೊಳ್ಳಿ

ತೆಂಗಿನೆಣ್ಣೆ ಒಂದು ಮಾಂತ್ರಿಕ ಅಂಶವಾಗಿದ್ದು, ಅದು ನಿಮಗೆ ಆರೋಗ್ಯಕರ ಕೂದಲು, ಚರ್ಮ ಮತ್ತು ಉಗುರುಗಳನ್ನು ಹೊಂದಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಿಂದ ಕಾಲುಗಳನ್ನು ಮಸಾಜ್ ಮಾಡುವ ಅಭ್ಯಾಸ ರೂಢಿಸಿಕೊಂಡರೆ ನಿಮಗೆ ಅನೇಕ ಪ್ರಯೋಜನಗಳು ಸಿಗುತ್ತದೆ.

ಮೃದುವಾದ ಪಾದ ನಿಮ್ಮದಾಗಲು ರಾತ್ರಿ ಈ ಅಭ್ಯಾಸ ರೂಢಿಸಿಕೊಳ್ಳಿ
ಪಾದದ ಮಸಾಜ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 17, 2023 | 6:57 PM

ನಿಮ್ಮ ಪಾದಗಳ ಆರೈಕೆಯನ್ನು ನೀವು ನಿರ್ಲಕ್ಷಿಸುತ್ತಿದ್ದೀರಾ? ನಿಮ್ಮ ಮುಖ, ಕೂದಲು ಅಥವಾ ದೇಹದಷ್ಟೇ ನಿಮ್ಮ ಪಾದಗಳಿಗೂ ನಿಮ್ಮ ಗಮನ ಬೇಕು. ಏಕೆಂದರೆ ಪಾದಗಳು ದಿನವಿಡೀ ನಿಮ್ಮ ದೇಹದ ತೂಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ಪಾದಕ್ಕೆ ಸಾಕಷ್ಟು ಧೂಳು ಮತ್ತು ಕೊಳೆ ಅಂಟಿಕೊಳ್ಳುವುದರಿಂದ ಪಾದದ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ನೀವು ಗಮನ ನೀಡುವುದು ಅಗತ್ಯ. ಅದಕ್ಕೆ ನೀವು ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಕೊಬ್ಬರಿ ಎಣ್ಣೆ ಬಳಸಿ ನಿಮ್ಮ ಪಾದವನ್ನು ಮೃದುಗೊಳಿಸುವುದು ಹೇಗೆಂಬ ಬಗ್ಗೆ ಮಾಹಿತಿ ಇಲ್ಲಿದೆ.

ತೆಂಗಿನೆಣ್ಣೆ ಒಂದು ಮಾಂತ್ರಿಕ ಅಂಶವಾಗಿದ್ದು, ಅದು ನಿಮಗೆ ಆರೋಗ್ಯಕರ ಕೂದಲು, ಚರ್ಮ ಮತ್ತು ಉಗುರುಗಳನ್ನು ಹೊಂದಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಿಂದ ಕಾಲುಗಳನ್ನು ಮಸಾಜ್ ಮಾಡುವ ಅಭ್ಯಾಸ ರೂಢಿಸಿಕೊಂಡರೆ ನಿಮಗೆ ಅನೇಕ ಪ್ರಯೋಜನಗಳು ಸಿಗುತ್ತದೆ. ಅದರಲ್ಲೂ ರಾತ್ರಿ ಕೊಬ್ಬರಿ ಎಣ್ಣೆಯಿಂದ ನಿಮ್ಮ ಪಾದಗಳಿಗೆ ಮಸಾಜ್ ಮಾಡಿಕೊಂಡರೆ ಅನೇಕ ಪ್ರಯೋಜನಗಳಿವೆ.

ಇದನ್ನೂ ಓದಿ: ಉತ್ತಮ ನಿದ್ರೆಗೆ ಒಮ್ಮೆಯಾದರೂ ಈ ಸ್ಪೆಷಲ್ ಮಸಾಜ್ ಟ್ರೈ ಮಾಡಿ

ಮಲಗುವ ಮುನ್ನ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ನಿಮ್ಮ ಪಾದಗಳಿಗೆ ಹಚ್ಚುವುದು ಉತ್ತಮ ಅಭ್ಯಾಸ. ಇದು ನಿಮ್ಮ ಪಾದಗಳಿಗೆ ಎಣ್ಣೆಯನ್ನು ಹೀರಿಕೊಳ್ಳಲು ಮತ್ತು ಪುನರ್ಯೌವನಗೊಳಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಬಿಡುವಿಲ್ಲದ ದಿನಗಳಲ್ಲಿ, ನಿಮ್ಮ ಪಾದಗಳಿಗೆ ಎಣ್ಣೆಯನ್ನು ಹಚ್ಚಲು, ವಿಶ್ರಾಂತಿ ಪಡೆಯಲು ಮತ್ತು ಎಣ್ಣೆಯನ್ನು ಹೀರಿಕೊಳ್ಳಲು ಕಾಯಲು ನಿಮಗೆ ಸಾಕಷ್ಟು ಸಮಯ ಇರುವುದಿಲ್ಲ. ಆದ್ದರಿಂದ, ರಾತ್ರಿಯಲ್ಲಿ ಪಾದಗಳಿಗೆ ವಿಶ್ರಾಂತಿ ನೀಡಲು ಮರೆಯಬೇಡಿ. ಮಲಗುವ ಮುನ್ನ ನಿಮ್ಮ ಪಾದಗಳನ್ನು ಸರಿಯಾಗಿ ಶುಚಿಗೊಳಿಸಿ, ಎಣ್ಣೆಯ ಮಸಾಜ್ ಮಾಡಿ. ಇದು ನಿಮ್ಮ ಪಾದಗಳನ್ನು ಮೃದು ಮತ್ತು ಸುಂದರವಾಗಿಡುವುದಲ್ಲದೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ರಾತ್ರಿಯಲ್ಲಿ ನಿಯಮಿತ ತೆಂಗಿನ ಎಣ್ಣೆ ಮಸಾಜ್ ತೇವಾಂಶವನ್ನು ಲಾಕ್ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಒಣಗದಂತೆ ರಕ್ಷಿಸುತ್ತದೆ. ಬೆಚ್ಚಗಿನ ತೆಂಗಿನ ಎಣ್ಣೆಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡುವುದರಿಂದ ಹಿಮ್ಮಡಿಗಳು ಬಿರುಕು ಬಿಡುವುದನ್ನು ತಡೆಯುತ್ತದೆ ಮತ್ತು ಅವುಗಳನ್ನು ಮೃದುವಾಗಿರಿಸುತ್ತದೆ. ರಾತ್ರಿ ತೆಂಗಿನ ಎಣ್ಣೆಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡಲು ಈ ಹಂತಗಳನ್ನು ಅನುಸರಿಸಿ.

ಪಾದವನ್ನು ಸ್ವಚ್ಛಗೊಳಿಸಿ:

ಮೊದಲಿಗೆ, ಸೋಪ್ ನೀರಿನಿಂದ ನಿಮ್ಮ ಪಾದಗಳ ಎಲ್ಲಾ ಕೊಳೆಯನ್ನು ತೆಗೆದುಹಾಕಬೇಕು. ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಸ್ವಚ್ಛವಾದ ಟವೆಲ್​ನಿಂದ ಒಣಗಿಸಿ.

ಇದನ್ನೂ ಓದಿ: ಉಪ್ಪಿನಲ್ಲಿ ಎಷ್ಟು ವಿಧ?; ಆರೋಗ್ಯಕ್ಕೆ ಯಾವ ರೀತಿಯ ಉಪ್ಪು ಉತ್ತಮ?

ಮಸಾಜ್ ಮಾಡಿ:

ಪಾದಗಳನ್ನು ಸ್ವಚ್ಛಗೊಳಿಸಿದ ನಂತರ ನಿಮ್ಮ ಹಾಸಿಗೆಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಕಾಲುಗಳನ್ನು ಹಿಗ್ಗಿಸಿ. ನಿಮ್ಮ ಪಾದಗಳನ್ನು ತುಸು ಬಿಸಿಯಾದ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಪ್ರತಿ ಪಾದಕ್ಕೆ ಕೆಲವು ಹನಿ ಎಣ್ಣೆಯನ್ನು ಹಚ್ಚಿ ಮತ್ತು ಕೈಯಿಂದ ಗಟ್ಟಿಯಾಗಿ ಮಸಾಜ್ ಮಾಡಿ. ಪಾದದ ಸೇರಿದಂತೆ ಕಾಲ್ಬೆರಳುಗಳು ಮತ್ತು ನಿಮ್ಮ ಪಾದಗಳ ನಡುವೆ ನಿಮ್ಮ ಅಡಿಭಾಗವನ್ನು ಮೊದಲು ಮಸಾಜ್ ಮಾಡುವ ಮೂಲಕ ಪ್ರಾರಂಭಿಸಿ.

ಹೆಚ್ಚುವರಿ ಎಣ್ಣೆಯನ್ನು ಒರೆಸಿ:

ಮಸಾಜ್ ಮಾಡಿದ ನಂತರ, ನಿಮ್ಮ ಪಾದಗಳಲ್ಲಿ ಹೆಚ್ಚು ಎಣ್ಣೆ ಇದೆ ಎಂದು ನಿಮಗೆ ಅನಿಸಿದರೆ, ಹಳೆಯ ಟವೆಲ್ ಅನ್ನು ತೆಗೆದುಕೊಂಡು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ. ಆದರೆ ಟವೆಲ್​ನಿಂದ ಪಾದವನ್ನು ಗಟ್ಟಿಯಾಗಿ ಉಜ್ಜಬೇಡಿ. ಮೆತ್ತಗೆ ಒತ್ತುತ್ತಾ ಎಣ್ಣೆಯನ್ನು ಸಂಪೂರ್ಣವಾಗಿ ಒಣಗುವಂತೆ ಒರೆಸಿ. ಇಲ್ಲವಾದರೆ ಹಾಸಿಗೆಯೆಲ್ಲ ಎಣ್ಣೆಮಯವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ