Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Care Tips: ಚಳಿಗಾಲದಲ್ಲಿ ಕೂದಲಿಗೆ ಹಾನಿಯುಂಟು ಮಾಡುವ ಈ ಕೆಲಸಗಳನ್ನು ಮಾಡಬೇಡಿ

ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಅಗತ್ಯವಾಗಿ ಮಾಡಲೇಬೇಕು. ಇಲ್ಲವಾದರೆ ತಲೆಹೊಟ್ಟು, ಒಣ ಮತ್ತು ಸೀಳು ಕೂದಲು ಹೀಗೆ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

Hair Care Tips: ಚಳಿಗಾಲದಲ್ಲಿ ಕೂದಲಿಗೆ ಹಾನಿಯುಂಟು ಮಾಡುವ ಈ ಕೆಲಸಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 19, 2021 | 5:53 PM

ಚಳಿಗಾಲ ಆರಂಭವಾಗಿದೆ. ಮೈಕೊರೆಯುವ ಚಳಿಗೆ ಬಿಸಿ ಬಿಸಿ ಆಹಾರ ಸೇವಿಸುವ ಹಂಬಲ. ಮೋಡದ ವಾತಾವರಣದಿಂದ ಕೂಡಿದ ಪ್ರಕೃತಿ. ಮನೆಯಿಂದ ಹೊರಹೊರಟು ಕೆಲಸಕ್ಕೆ ಹೋಗಲು ಮನಸ್ಸಿಲ್ಲದಿದ್ದರೂ ಹೋಗಲೇ ಬೇಕಾದ ಅನಿವಾರ್ಯತೆ. ಇದರ ನಡುವೆ ಬಿಸಿ ನೀರಿನ ಸ್ನಾನದ ಅನುಭವ. ತಣ್ಣನೆಯ ವಾತಾವರಣದ ನಡುವೆ ಮೈಬೆಚ್ಚಗಾಗಿಸುವ ಬಿಸಿ ನೀರಿನ ಸ್ನಾನ ಮೈಗೆ ಇನ್ನಷ್ಟು ಹಿತ ನೀಡುತ್ತದೆ. ಇವೆಲ್ಲದರ ನಡುವೆ ಚಳಿಗಾಲದಲ್ಲಿ ಕಾಡುವ ದೊಡ್ಡ ಸಮಸ್ಯೆ ಎಂದರೆ ಕೂದಲಿನ ರಕ್ಷಣೆ ಮಾಡಿಕೊಳ್ಳುವುದು. ಚಳಿಗಾಲದಲ್ಲಿ ಕೂದಲು ಶುಷ್ಕಗೊಂಡು ಡ್ರೈ ಎನಿಸಲು ಶುರುವಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಅಗತ್ಯವಾಗಿ ಮಾಡಲೇಬೇಕು. ಇಲ್ಲವಾದರೆ ತಲೆಹೊಟ್ಟು, ಒಣ ಮತ್ತು ಸೀಳು ಕೂದಲು ಹೀಗೆ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಆದ್ದರಿಂದ ಚಳಿಗಾಲದಲ್ಲಿ ಕೂದಲಿಗೆ ಹಾನಿಯಾಗುವ ಈ ಕೆಲಸಗಳನ್ನು ಮಾಡಬೇಡಿ

ಬಿಸಿನೀರಿನಿಂದ ಕೂದಲ ಸ್ನಾನ ಚಳಿಗಾಲದಲ್ಲಿ ತಲೆಗೆ ಬಿಸಿ ನೀರಿನಿಂದ ಸ್ನಾನ ಮಾಡಲೇಬೇಡಿ. ನಿಮ್ಮ ಕೂದಲಿನ ಹಾನಿಗೆ ಇದು ಪ್ರಮುಖ ಕಾರಣವಾಗುತ್ತದೆ. ಬಿಸಿನೀರು ನಿಮ್ಮ ಕೂದಲಿನ ಎಳೆಗಳಲ್ಲಿರುವ ತೇವಾಂಶ ಮತ್ತು ಎಣ್ಣೆಯ ಅಂಶವನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಇದರಿಂದ ನಿಮ್ಮ ಕೂದಲು ಡ್ರೈ ಎನಿಸುತ್ತದೆ. ಇದರಿಂದ ಕೂದಲಿನ ಆಕರ್ಷಣೆ ಕುಂದುತ್ತದೆ. ಹೊಳೆಯುವ ಕೂದಲು ಮಾಯವಾಗಿ ಒರಟಾದ ಕೂದಲಾಗುತ್ತದೆ. ಹೀಗಾಗಿ ಬಿಸಿ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಲೇಬೇಡಿ.

ನಿರಂತರ ಹೇರ್​ ಡ್ರೈಯರ್​ ಬಳಕೆ ಒದ್ದೆ ಕೂದಲನ್ನು ಒಣಗಿಸಲು ಅಥವಾ ವಿವಿಧ ರೀತಿಯ ಕೇಶ ವಿನ್ಯಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಹೇರ್​ ಡ್ರೈಯರ್​ ಬಳಕೆ ನಿಮ್ಮ ಕೂದಲಿಗೆ ಹಾನಿ ಮಾಡುತ್ತದೆ. ಹೇರ್​ ಡ್ರೈಯರ್​ ಬಳಕೆಯಿಂದ ಸೀಳು ಕೂದಲು ಉಂಟಾಗಿ ಕೂದಲ ಬೆಳವಣಿಗೆ ಕುಂಠಿತವಾಗತ್ತದೆ. ಹೀಗಾಗಿ. ಒದ್ದೆ ಕೂದಲನ್ನು ಆದಷ್ಟು ಗಾಳಿಯಲ್ಲೇ ಒಣಗಿಸಿ ಅಥವಾ ಬಿಸಿಲು ಸಿಗುವ ಹಾಗಿದ್ದರೆ ಒಂದೈದು ನಿಮಿಷ ಬಿಸಿಲಿಗೆ ಒಡ್ಡಿಕೊಳ್ಳಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ನೆತ್ತಿಯ ಬಗ್ಗೆ ಗಮನ ನೀಡದೇ ಇರುವುದು ಚಳಿಗಾಲದಲ್ಲಿ ನಿಮ್ಮ ತಲೆಯ ನೆತ್ತಿ ಒಣಗಿರುತ್ತದೆ. ಹೀಗಾಗಿ ಹೊಟ್ಟು, ತಲೆನೋವಿನಂತಹ ಸಮಸ್ಯೆಗಳು ಉಲ್ಬಣಗೊಳುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನೆತ್ತಿಯ ಬಗ್ಗೆ ಗಮನ ನೀಡದೇ ಇದ್ದರೆ ಅಪಾಯ ತಪ್ಪಿದ್ದಲ್ಲ. ಆಗಾಗ ಎಣ್ಣೆಯಿಂದ ಮಸಾಜ್​ ಮಾಡುವುದು ಅಥವಾ ಕೂದಲ ಆರೋಗ್ಯಕ್ಕೆ ಹಾಕುವ ಹೇರ್​ ಪ್ಯಾಕ್​ಗಳನ್ನು ಹಾಕಿಕೊಳ್ಳಿ ಇದು ನಿಮ್ಮ ನೆತ್ತಿಯನ್ನು ಸುರಕ್ಷಿತವಾಗಿರಿಸುತ್ತದೆ.

ಒದ್ದೆಕೂದಲನ್ನು ಕಟ್ಟುವುದು ಕೆಲವೊಮ್ಮೆ ಸಮಯದ ಅಭಾವ ಅಥವಾ ಇನ್ಯಾವುದೋ ಕಾರಣಗಳಿಂದ ತಲೆ ಸ್ನಾನದ ಬಳಿಕ ಕೂದಲನ್ನು ಸರಿಯಾಗಿ ಒಣಗಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೂದಲನ್ನು ಕಟ್ಟಿಕೊಂಡು ಧೂಳು ಇರುವ ಕಡೆ ಹೋಗಬೇಡಿ. ಇದು ನಿಮ್ಮ ಕೂದಲಿನ್ನು ಸೀಳು ಒಡೆಯುವಂತೆ ಮಾಡಬಹುದು. ಕೂದಲಿನಲ್ಲಿ ನೀರಿನ ಅಂಶ ಕಡಿಮೆಯಾಗುವವರೆಗಾದರೂ ಒಣಗಿಸಿಕೊಳ್ಳಿ ಆಗ ನಿಮ್ಮ ಕೂದಲಿಗೆ ಧೂಳು, ಹೊಗೆಯಂತಹ ಅಂಶಗಳು ಸೇರಿಕೊಳ್ಳುವುದು ಕಡಿಮೆಯಾಗುತ್ತದೆ.

ಇದನ್ನೂ ಓದಿ:

Health Tips : ಬಿಡುವಿನ ವೇಳೆಯಲ್ಲಿ ಪಾದಗಳಿಗೆ ಬಿಸಿ ನೀರಿನ ಸ್ನಾನ ಮಾಡಿಸಿ: ನಿಮ್ಮ ಒತ್ತಡ ನಿವಾರಣೆಗೂ ಒಳಿತು

Women Health: ಮಹಿಳೆಯರಲ್ಲಿನ ಈ ನಾಲ್ಕು ಆರೋಗ್ಯ ಸಮಸ್ಯೆಗಳಿಗೆ ಹಸಿ ಈರುಳ್ಳಿ ಸೇವನೆಯಿಂದ ಸಿಗಲಿದೆ ಪರಿಹಾರ!

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು