AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep: ಅಲಾರಂ ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸವಿದೆಯಾ, ಇದ್ರೆ ಒಳ್ಳೇದೆ ಅನ್ನುತ್ತೆ ಅಧ್ಯಯನ

ಬೆಳಗ್ಗೆ ಅಲಾರಂ ಹೊಡೆದ ತಕ್ಷಣ ನಿದ್ರೆಯಿಂದ ಎಚ್ಚರವಾಗುತ್ತೆ, ಆದ್ರೂ ಹಿಂದಿನ ದಿನದ ಆಯಾಸ ಇರುವ ಅನುಭವವಾಗುತ್ತದೆ.

Sleep: ಅಲಾರಂ ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸವಿದೆಯಾ, ಇದ್ರೆ ಒಳ್ಳೇದೆ ಅನ್ನುತ್ತೆ ಅಧ್ಯಯನ
ನಿದ್ರೆ
ನಯನಾ ರಾಜೀವ್
|

Updated on: Mar 09, 2023 | 2:18 PM

Share

ಬೆಳಗ್ಗೆ ಅಲಾರಂ ಹೊಡೆದ ತಕ್ಷಣ ನಿದ್ರೆಯಿಂದ ಎಚ್ಚರವಾಗುತ್ತೆ, ಆದ್ರೂ ಹಿಂದಿನ ದಿನದ ಆಯಾಸ ಹಾಗೆಯೇ ಉಳಿದಿರಬಹುದು. ಏಳೋಕೆ ಮನಸ್ಸಾಗುತ್ತಿಲ್ಲ ಎಂದು ಮತ್ತೆ ಹೊದ್ದು ಮಲಗಿಬಿಡುತ್ತೀರಿ.  ಸ್ವಲ್ಪ ಸಮಯದ ನಂತರ ಏಳುತ್ತೀರಿ. ಈ ಸ್ಥಿತಿಗೆ ನಿಮ್ಮ ದಿನಚರಿಯೂ ಕಾರಣವಾಗಿರಬಹುದು. ನೀವು ದಿನವೂ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ನಿತ್ಯವೂ ಸಮಯ ಬದಲಾಗುತ್ತಿದ್ದರೆ ಬೆಳಗ್ಗೆ ನೀವಂದುಕೊಂಡಾಗ ಏಳಲು ಸಾಧ್ಯವಾಗುವುದಿಲ್ಲ. ನಿಮಗೆ ಒಂದೊಮ್ಮೆ ಅಲಾರಂ ಆದ ತಕ್ಷಣ ಏಳಲು ಮನಸಾಗದಿದ್ದರೆ ಮತ್ತೆ ಮಲಗಿ ಸ್ವಲ್ಪ ಸಮಯದ ಬಳಿಕ ಎದ್ದಾಗ ದೇಹದಲ್ಲಿ ಚೈತನ್ಯ ಉತ್ತಮವಾಗಿರುತ್ತದೆ.

ಗ್ಯಾಜೆಟ್‌ಗಳನ್ನು ದೂರವಿಡಿ ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಲ್ಲಾ ರೀತಿಯ ಗ್ಯಾಜೆಟ್‌ಗಳನ್ನು ಬಳಸುವುದನ್ನು ನಿಲ್ಲಿಸಿ. ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್ ನೋಡುತ್ತಾ ಮಲಗುವುದರಿಂದ ಮನಸ್ಸಿಗೆ ಸಂಪೂರ್ಣ ಸಮಾಧಾನವಾಗುವುದಿಲ್ಲ ಮತ್ತು ದೇಹವು ದಣಿದಿರುತ್ತದೆ.

ನೀವು ಇಷ್ಟಪಡುವುದನ್ನು ಮಾಡಿ ಮಲಗುವ ಮೊದಲು, ಒಳ್ಳೆಯ ಪುಸ್ತಕವನ್ನು ಆರಿಸಿ, ಓದಿ ಬಳಿಕ ನಿದ್ದೆ ಮಾಡಿ. ಸಂಗೀತದ ಬಗ್ಗೆ ಒಲವಿದ್ದರೆ ಹಿತವಾದ ಸಂಗೀತವನ್ನು ಕೇಳುತ್ತಾ ಮಲಗಬಹುದು.

ಕೈಕಾಲುಗಳನ್ನು ತೊಳೆಯಿರಿ ರಾತ್ರಿ ಮಲಗುವಾಗ ನಮ್ಮ ದೇಹದ ಜೀವಕೋಶಗಳು ಪುನಶ್ಚೇತನಗೊಳ್ಳುತ್ತವೆ. ದೇಹವು ಸ್ವತಃ ರಿಪೇರಿ ಮಾಡುತ್ತದೆ. ಅದಕ್ಕಾಗಿಯೇ ರಾತ್ರಿ ಮಲಗುವಾಗ ಮುಖ, ಕೈ ಕಾಲುಗಳನ್ನು ಸ್ವಚ್ಛಗೊಳಿಸಿ ಮಲಗಿ. ಇದರಿಂದ ನಿಮ್ಮ ತ್ವಚೆ ಕೂಡ ರಿಲ್ಯಾಕ್ಸ್ ಆಗಬಹುದು ಮತ್ತು ಬೆಳಗ್ಗೆ ತಾಜಾತನವನ್ನು ಅನುಭವಿಸಬಹುದು.

ಕೋಣೆಯ ತಾಪಮಾನ ಹಿತಕರವಾಗಿರಲಿ ಮಲಗುವ ಸಮಯದಲ್ಲಿ, ನಿಮ್ಮ ಕೋಣೆಯ ಉಷ್ಣತೆಯು ತುಂಬಾ ತಂಪಾಗಿರಬಾರದು ಅಥವಾ ತುಂಬಾ ಬಿಸಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಎಸಿ ಅಥವಾ ಹೀಟರ್ ನೀವು ಬಳಸುತ್ತಿದ್ದರೆ ತಾಪಮಾನ ಹಿತಕರವಾಗಿರುವಂತೆ ನೋಡಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ