AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯ ಹೀಟ್​ನಿಂದ ತಪ್ಪಿಸಿಕೊಳ್ಳೋಕೆ ಗುಲಾಬಿ ಹೂವು ಸಹಕಾರಿ!

ಬೇಸಿಗೆ ಸಮಯದಲ್ಲಿ ಜ್ಯೂಸ್​ ಹಾಗೂ ಎಳನೀರು ಕುಡಿಯೋಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದರ ಜತೆಗೆ ಸಾಕಷ್ಟು ಡ್ರಿಂಕ್​ಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡಬಲ್ಲವು.

ಬೇಸಿಗೆಯ ಹೀಟ್​ನಿಂದ ತಪ್ಪಿಸಿಕೊಳ್ಳೋಕೆ ಗುಲಾಬಿ ಹೂವು ಸಹಕಾರಿ!
ರಾಜೇಶ್ ದುಗ್ಗುಮನೆ
| Edited By: ಆಯೇಷಾ ಬಾನು|

Updated on: Mar 30, 2021 | 6:42 AM

Share

ಬೇಸಿಗೆಯನ್ನು ಅನೇಕರು ದ್ವೇಷಿಸುತ್ತಾರೆ. ಇದಕ್ಕೆ ಕಾರಣ, ಸುಡುವ ಬಿಸಿಲು. ಬಿಸಿಲು ಜಾಸ್ತಿ ಆದರೆ, ತಲೆಸುತ್ತಿ ಬೀಳುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ನಿರ್ಜಲೀಕರಣ ಕೂಡ ಉಂಟಾಗುತ್ತದೆ. ಬಿಸಿಲಿನ ಹೀಟ್​ ಕಡಿಮೆ ಮಾಡಿಕೊಳ್ಳಬೇಕಾದರೆ ಕೆಲವು ಟೆಕ್ನಿಕ್​ಗಳನ್ನು ನೀವು ಉಪಯೋಗಿಸಬಹುದು.

ಬೇಸಿಗೆ ಸಮಯದಲ್ಲಿ ಜ್ಯೂಸ್​ ಹಾಗೂ ಎಳನೀರು ಕುಡಿಯೋಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಇದರಿಂದ ನೀವು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅಂಶ ಪೂರೈಕೆ ಮಾಡಿದಂತೆ ಆಗುತ್ತದೆ. ಇದರ ಜತೆಗೆ ಸಾಕಷ್ಟು ಡ್ರಿಂಕ್​ಗಳು ಬಿಸಿಲಿನಿಂದ ನಿಮಗೆ ರಕ್ಷಣೆ ನೀಡಬಲ್ಲವು. ಅವು ಯಾವವು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಸಿಲಿಗೆ ಗುಲಾಬಿ ಜ್ಯೂಸ್​! ಗುಲಾಬಿ ಹೂವನ್ನು ಬೇಸಿಗೆಯ ಹೀಟ್​ನಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಬಹುದು ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ಗುಲಾಬಿ ದಳವನ್ನು ಬಳಕೆ ಮಾಡಿಕೊಂಡು ಸಿದ್ಧಪಡಿಸುವ ಪಾನೀಯ ಸಾಕಷ್ಟು ಸಹಕಾರಿ. ಇದನ್ನು ಮಾಡುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಗುಲಾಬಿ ಎಸಳನ್ನು ಕಿತ್ತು ತನ್ನಿ. ಅದರ ಮೇಲಿರುವ ಧೂಳನ್ನು ಸ್ವಚ್ಛವಾಗಿ ತೊಳೆದು ತೆಗೆಯಿರಿ. ಗುಲಾಬಿ ಎಸಳನ್ನು ಒಂದು ಗ್ಲಾಸ್​ಗೆ ಹಾಕಿ. ಇದಕ್ಕೆ ತುಳಸಿ ಬೀಜವನ್ನು ಸೇರಿಸಿ. ತೆಂಗಿನಕಾಯಿ ಸಕ್ಕರೆ (coconut sugar) ಬೆರೆಸಿ, ಸ್ವಲ್ಪ ಲಿಂಬು ಹಿಂಡಿ. ನಂತರ ಅದಕ್ಕೆ ನೀರು ಹಾಕಿ, ಆಗಾಗ ಕುಡಿಯುತ್ತಿರಿ. ಇದರಿಂದ ಮೊಡವೆ ಕಡಿಮೆ ಆಗುತ್ತದೆ. ಬಿಸಿಲಿನಿಂದ ಉಂಟಾಗುವ ಹೀಟ್​ ಕೂಡ ಕಡಿಮೆ ಮಾಡುತ್ತದೆ.

ಗುಲ್ಕನ್​ ಬೇಸಿಗೆಯಲ್ಲಿ ಗುಲ್ಕನ್​ ಬಳಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಗುಲ್ಕನ್​ ಅಂಗಡಿಯಲ್ಲಿ ದೊರೆಯುತ್ತದೆ. ಇದರ ಜತೆಗೆ ನೀವು ಮನೆಯಲ್ಲೇ ಇದನ್ನು ಸಿದ್ಧಪಡಿಸಬಹುದು. ಗುಲ್ಕನ್​ ತಯಾರಿಸಲು ಗುಲಾಬಿ ದಳವನ್ನು ತೆಗೆದುಕೊಳ್ಳಿ. ಅದನ್ನು ಗ್ಲಾಸ್​ ಜಾರ್​ಗೆ ಹಾಕಿ. ನಂತರ ಒಂದು ಲೇಯರ್​ ಸಕ್ಕರೆ ಹಾಕಿ. ನಂತರ ಮತ್ತೊಂದು ಲೇಯರ್​ ಗುಲಾಬಿ ಎಲೆ ಹಾಕಿ. ಇದನ್ನು ನಿತ್ಯ 6 ಗಂಟೆಗಳಕಾಲ ಬಿಸಿಲಿನಲ್ಲಿ ಇರಿಸಿ. ಒಂದು ತಿಂಗಳಲ್ಲಿ ಗುಲ್ಕನ್​ ಸಿದ್ಧವಾಗುತ್ತೆ. ಹಾಲಿಗೆ ಬೆರೆಸಿ ಗುಲ್ಕನ್​ ಸೇವಿಸಬಹುದು. ಇದು ದೇಹವನ್ನು ತಂಪಾಗಿ ಇರಿಸುವುದರ ಜತೆಗೆ ಆ್ಯಸಿಡಿ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ