ಬಳಸಿದ ಬಾಟಲ್​ನಲ್ಲಿ ಅಂಟಿಕೊಂಡಿರುತ್ತವೆ ಸೂಕ್ಷ್ಮಜೀವಿಗಳು: ಈ ವಿಧಾನದ ಮೂಲಕ ಶುಚಿಗೊಳಿಸಿ

ಅನೇಕ ಜನರು ಬಾಟಲಿಯ ನೀರನ್ನು ತುಂಬಿರುತ್ತಾರೆ, ಆದರೆ ಬಾಟಲಿಯನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದು ಮತ್ತೆ ನೀವು ಅದೇ ಬಾಟಲಿಗೆ ನೀರನ್ನು ತುಂಬಿಸಿದಾಗ ಆ ನೀರು ಕಲುಷಿತವಾಗುತ್ತದೆ ಎಂಬುದು ತಿಳಿದಿರಲಿ.

ಬಳಸಿದ ಬಾಟಲ್​ನಲ್ಲಿ ಅಂಟಿಕೊಂಡಿರುತ್ತವೆ ಸೂಕ್ಷ್ಮಜೀವಿಗಳು: ಈ ವಿಧಾನದ ಮೂಲಕ ಶುಚಿಗೊಳಿಸಿ
ಕುಡಿಯುವ ನೀರಿನ ಬಾಟಲಿಯನ್ನು ಶುಚಿಗೊಳಿಸುವ ಸುಲಭ ವಿಧಾನಗಳು (ಸಾಂದರ್ಭಿಕ ಚಿತ್ರ)
Follow us
| Updated By: Rakesh Nayak Manchi

Updated on: Sep 18, 2022 | 7:33 AM

ಅನೇಕ ಜನರು ನೀರು ಕುಡಿಯಲು ಬಾಟಲಿಯನ್ನು ಬಳಸುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದರೆ ಕೇವಲ ಶುದ್ಧ ನೀರು ಕುಡಿದರೆ ಸಾಕಾಗುವುದಿಲ್ಲ, ನಿಮ್ಮ ನೀರಿನ ಬಾಟಲಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ಬಾಟಲಿಯನ್ನು ಸ್ವಚ್ಛವಾಗಿ ಮತ್ತು ರೋಗಾಣು ಮುಕ್ತವಾಗಿಡುವುದು ತುಂಬಾ ಕಷ್ಟದ ಕೆಲಸ. ಅನೇಕ ಜನರು ಬಾಟಲಿಯ ನೀರನ್ನು ತುಂಬಿರುತ್ತಾರೆ, ಆದರೆ ಬಾಟಲಿಯನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇದು ಮತ್ತೆ ನೀವು ಅದೇ ಬಾಟಲಿಗೆ ನೀರನ್ನು ತುಂಬಿಸಿದಾಗ ನೀರು ಕಲುಷಿತಗೊಳ್ಳುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನೀರಿನ ಬಾಟಲಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ ಎಂದು ತಿಳಿಯೋಣ.

ಲಿಕ್ವಿಡ್ ಡಿಶ್ ಸೋಪ್

ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ನೀವು ಲಿಕ್ವಿಡ್ ಡಿಶ್ ಸೋಪ್ ಅನ್ನು ಬಳಸಬಹುದು. ಅದಕ್ಕಾಗಿ ಬಾಣಲೆ ಅಥವಾ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಬಿಸಿ ಮಾಡಿ. ಇದಕ್ಕೆ 1-2 ಚಮಚ ದ್ರವ ಸೋಪ್ ಸೇರಿಸಿ. ನಂತರ ಅದಕ್ಕೆ ಒಂದು ಬಾಟಲ್ ನೀರನ್ನು ಸೇರಿಸಿ ರಾತ್ರಿಯಿಡೀ ಇಡಿ. ಬೆಳಿಗ್ಗೆ ಸರಳ ನೀರಿನಲ್ಲಿ ಬಾಟಲಿಯನ್ನು ತೊಳೆಯಿರಿ.

ನಿಂಬೆ ಮತ್ತು ಉಪ್ಪು

ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ನಿಂಬೆ, ಉಪ್ಪು ಮತ್ತು ಐಸ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ನೀರಿನ ಬಾಟಲಿಯಲ್ಲಿ 1 ಕಪ್ ನೀರನ್ನು ಸೇರಿಸಿ. ನಂತರ ಆ ಬಾಟಲಿಗೆ ನಿಂಬೆ ರಸ, ಉಪ್ಪು ಮತ್ತು ಐಸ್ ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಬಲವಾಗಿ ಶೇಕ್ ಮಾಡಿ. ಬಳಿಕ ಬಾಟಲಿಯನ್ನು ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ ಮತ್ತು ವಿನೆಗರ್

ಅಡುಗೆ ಸೋಡಾ ಮತ್ತು ವಿನೆಗರ್ ನೀರಿನ ಬಾಟಲಿಯನ್ನು ಸ್ವಚ್ಛವಾಗಿಡಲು ಸಹಾಯಕವಾಗಿದೆ. ಇದಕ್ಕಾಗಿ ಒಂದು ಬಾಟಲಿಯಲ್ಲಿ 1 ಚಮಚ ಅಡಿಗೆ ಸೋಡಾ ಮತ್ತು 2 ಚಮಚ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ಇರಿಸಿ. ನಂತರ ಬಾಟಲಿಯನ್ನು ಸರಳ ನೀರಿನಿಂದ ತೊಳೆಯಿರಿ. ಇದು ನಿಮ್ಮ ನೀರಿನ ಬಾಟಲಿಯನ್ನು ಹೊಳೆಯುವಂತೆ ಮಾಡಲಿದೆ.

ಮತ್ತಷ್ಟು ಲೈಫ್​ಸ್ಟೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್