AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ವಾಹನದ ಒಳಗಿನ ದುರ್ಗಂಧ ಹೋಗಲಾಡಿಸಲು ಸುಲಭ ಉಪಾಯ ಇಲ್ಲಿವೆ

ಮಳೆಗಾಲ ಅಂದ ಮೇಲೆ ಮಲೆನಾಡಿನಲ್ಲಂತೂ ಪ್ರತಿ ಹಳ್ಳಿಯಲ್ಲೂ ನಿತ್ಯ ಧೋ ಎಂದು ಮಳೆ ಸುರಿಯುತ್ತಲೇ ಇರುತ್ತದೆ. ಹಾಗೆಯೇ ಮಳೆಗಾಲದಲ್ಲಿ ರಸ್ತೆಗಳು ಅಷ್ಟು ಸುರಕ್ಷಿತವಾಗಿರದ ಕಾರಣ ಕಾರನ್ನು ಮನೆಯಲ್ಲಿಯೇ ಇರಿಸಿ ಸಾಮಾನ್ಯವಾಗಿ ಎಲ್ಲರೂ ಬೈಕ್​ನಲ್ಲಿಯೇ ತೆರಳುತ್ತಾರೆ

ಮಳೆಗಾಲದಲ್ಲಿ ವಾಹನದ ಒಳಗಿನ ದುರ್ಗಂಧ ಹೋಗಲಾಡಿಸಲು ಸುಲಭ ಉಪಾಯ ಇಲ್ಲಿವೆ
Dr Ravikiran Patwardhan
TV9 Web
| Updated By: ನಯನಾ ರಾಜೀವ್|

Updated on:Jul 11, 2022 | 2:15 PM

Share

ಮಳೆಗಾಲ ಅಂದ ಮೇಲೆ ಮಲೆನಾಡಿನಲ್ಲಂತೂ ಪ್ರತಿ ಹಳ್ಳಿಯಲ್ಲೂ ನಿತ್ಯ ಧೋ ಎಂದು ಮಳೆ ಸುರಿಯುತ್ತಲೇ ಇರುತ್ತದೆ. ಹಾಗೆಯೇ ಮಳೆಗಾಲದಲ್ಲಿ ರಸ್ತೆಗಳು ಅಷ್ಟು ಸುರಕ್ಷಿತವಾಗಿರದ ಕಾರಣ ಕಾರನ್ನು ಮನೆಯಲ್ಲಿಯೇ ಇರಿಸಿ ಸಾಮಾನ್ಯವಾಗಿ ಎಲ್ಲರೂ ಬೈಕ್​ನಲ್ಲಿಯೇ ತೆರಳುತ್ತಾರೆ. ಎರಡರಿಂದ ಮೂರು ತಿಂಗಳು ಕಾರು ನಿಂತಲ್ಲಿಯೇ ನಿಂತಿರುತ್ತದೆ. ಒಮ್ಮೆಲೆ ಬಾಗಿಲು ತೆರೆದಾಗ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ.

ಮಳೆಯ ಕಾರಣ ಕಾರಿನ ಗಾಜುಗಳನ್ನು ಕೆಳಗೆ ಸರಿಸಲು ಆಗುವುದಿಲ್ಲ. ಅದಕ್ಕೆ ಕಾರಿನ ಒಳಗೆ ಕುಳಿತ ನಂತರ ನಿರಂತರವಾಗಿ ಸೌಗಂಧದ್ರವ್ಯಗಳ ಸಿಂಪಡಣೆ ಮಾಡುವವರು ಹಲವರು, ಈ ದುರ್ಗಂಧ ಜೊತೆ ಸಿಂಪಡಣೆಯ ಸುಗಂಧದ ಪರಿಮಳವು ಕಾರಿನ ಒಳಗೆ ಇರುವುದು.

ಈ ಸುಗಂಧ ಸಿಂಪಡಣೆ ಹಲವರಿಗೆ ಕಾರಿನ ಒಳಗೆ ಪ್ರಯಾಣ ಮಾಡುವಾಗ ತಲೆನೋವು ಇತರ ಆರೋಗ್ಯ ಸಮಸ್ಯೆ ಉಂಟು ಮಾಡಿದ ಅನುಭವ ಕೆಲವರಿಗಿದೆ.

ಇನ್ನೂ ಕೆಲವರಿಗೆ ಈ ದ್ರವ್ಯಗಳು ಶ್ವಾಸದ ಸಮಸ್ಯೆ, ನೆಗಡಿ ಇತ್ಯಾದಿಗಳಿಗೆ ಕಾರಣವಾಗುವುದು.ಈ ರೀತಿಯ ತೊಂದರೆಗಳನ್ನು ತಪ್ಪಿಸಲು ಅತ್ಯಂತ ಸುಲಭದ ಉಪಾಯ ಎಂದರೆ ಕಾರಿನ ಒಳಗೆ ನಾಲ್ಕಾರು ದೊಡ್ಡ ಕರ್ಪೂರದ ಬಿಲ್ಲೆಗಳನ್ನು ಹಾಕಿ ಇಡುವುದು. ( ಈ ಬಿಲ್ಲೆಗಳ ಸಂಖ್ಯೆ ಅತಿ ಹೆಚ್ಚು ಬೇಡ,ಕರ್ಪೂರ ಜ್ವಲನಶೀಲ ಇರುವುದರಿಂದ ) ಕರ್ಪೂರ ಪರಿಮಳ ವಾತಾವರಣದಲ್ಲಿ ವಿಶೇಷ ಅನುಭವದ ಪ್ರಭಾವ ಬರುವಂತೆ ಮಾಡುವುದು.

ಈ ಕಾರಣಕ್ಕೆ ಕರ್ಪೂರದ ಪರಿಮಳ ಹೊರಸೂಸುವ ಯಂತ್ರಗಳು ಈಗ ಪ್ರಚಲಿತವಾಗಿದೆ.ಕರೋನಾದ ಸಮಯದಲ್ಲಿ ವಾತಾವರಣದಲ್ಲಿಯ ವೈರಸಗಳನ್ನು ನಾಶಮಾಡುವ ಗುಣದ ಬಗ್ಗೆ ಪ್ರಚಲಿತವಾಗಿತ್ತು.

ಈ ರೀತಿ ಕಾರಿನ ಒಳಗೆ ಕರ್ಪೂರ ಹಾಕಿಡುವುದು ಇದರಿಂದ ದುರ್ಗಂಧ ವಂತು ನಿವಾರಣೆಯಾಗುತ್ತದೆ, ಜೊತೆಗೆ ಸುಗಂಧದ್ರವ್ಯಗಳಿಂದ ಬರುವಂತಹ ಆರೋಗ್ಯ ಸಮಸ್ಯೆಯು ಉಂಟಾಗದು. ಹಾಗೂ ವಾಹನದ ಒಳಗೆ ಕುಳಿತಾಗ ವಿಶೇಷ ಅನುಭವದ ಜೊತೆಗೆ ತಮ್ಮ ಕಾರಿನಲ್ಲಿ ಸವಾರಿ ಮಾಡಿದವರು ಗುರುತಿಸುವುದು ಖಚಿತ.

ಇದರ ಜೊತೆಗೆ ಕಾರುಗಳಲ್ಲಿಯ ಪಾದ ಇಡುವ ಸ್ಥಳದ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಅಗತ್ಯವಿದೆ. ಮಲೆನಾಡಿನಲ್ಲಿ ಕಾರುಗಳಲ್ಲಿ ಆಗುವ ದುರ್ಗಂಧವನ್ನು ಈ ಕರ್ಪೂರದಿಂದ ನಿವಾರಿಸಬಹುದು. (ಡಾ. ರವಿಕಿರಣ್ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು)

Published On - 2:13 pm, Mon, 11 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ