AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿಗೆ ಸಮೀಪದಲ್ಲಿರುವ ತಾಣಗಳ ಕುರಿತು ಮಾಹಿತಿ ಇಲ್ಲಿದೆ

ನಿಮ್ಮ ಕೆಲಸದ ವಾರಾಂತ್ಯದಲ್ಲಿ ನಿಮ್ಮವರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

ನಿಮ್ಮ ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿಗೆ ಸಮೀಪದಲ್ಲಿರುವ ತಾಣಗಳ ಕುರಿತು ಮಾಹಿತಿ ಇಲ್ಲಿದೆ
Nandi HillsImage Credit source: NDTV
TV9 Web
| Edited By: |

Updated on: Dec 08, 2022 | 6:30 AM

Share

ಬೆಂಗಳೂರಿನಲ್ಲಿ  ಕೆಲಸದ ಒತ್ತಡ, ಜನದಟ್ಟನೆ ಧೂಳು ಮಾಲಿನ್ಯಗಳಿಂದ ನೀವು ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಳ್ಳಲು ಒಂದು ಉತ್ತಮ ನಿಸರ್ಗದತ್ತವಾದ ಪ್ರದೇಶಗಳು ಅಗತ್ಯವಿದೆ. ನಿಮ್ಮ ಕೆಲಸದ ವಾರಾಂತ್ಯದಲ್ಲಿ ನಿಮ್ಮವರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ. ಈ ಪ್ರದೇಶಗಳಿಗೆ ಭೇಟಿ ನೀಡದರೆ ನಿಮ್ಮಲ್ಲಿರುವ ಒತ್ತಡಗಳು ಕಡಿಮೆಯಾಗಬಹುದು. ಮಾನಸಿಕ ನೆಮ್ಮದಿ ಪಡೆಯಲು ಈ ಸ್ಥಳಗಳು ಉತ್ತಮ

1. ನಂದಿ ಬೆಟ್ಟ:

ಬೆಂಗಳೂರು ನಗರದಿಂದ ಕೇವಲ 2 ಗಂಟೆಗಳ ಪ್ರಯಾಣದ ಒಂದು ಪರಿಪೂರ್ಣ ಸ್ಥಳ. ಇಲ್ಲಿ ನಂದಿ ಕ್ಯಾಂಪಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಸಾಹಸ ಕ್ರೀಡೆಗಳಂತಹ ವಿವಿಧ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಕೇವಲ 60 ಕಿಮೀ ದೂರದಲ್ಲಿದೆ.

2. ಕುಂತಿ ಬೆಟ್ಟ:

ನೀವು ಸಾಹಸ-ಪ್ರೇಮಿಗಳಾಗಿದ್ದರೆ ನೀವು ಖಂಡಿತವಾಗಿಯೂ ಬೆಂಗಳೂರಿನಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ಕುಂತಿ ಬೆಟ್ಟಕ್ಕೆ ಭೇಟಿ ನೀಡಬೇಕು. ಪಾಂಡವಪುರ ಪಟ್ಟಣದಿಂದ 2882 ಮೀಟರ್ ಎತ್ತರದಲ್ಲಿರುವ ಕುಂತಿ ಬೆಟ್ಟದವರೆಗೆ ಆಸಕ್ತಿದಾಯಕ ಚಾರಣವನ್ನು ಏರ್ಪಡಿಸಲಾಗಿದೆ. ಇಲ್ಲಿ ನೀವು ಆನಂದದಾಯಕ ವಾರಾಂತ್ಯವನ್ನು ಕಳೆಯಬಹುದಾಗಿದೆ.

3. ಮೈಸೂರು:

ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮೈಸೂರು ಪ್ರಮುಖವಾದುದು. ಮೈಸೂರಿನ ಪ್ರಸಿದ್ಧ ಆಕರ್ಷಣೆಗಳಲ್ಲಿ ಮೈಸೂರು ಅರಮನೆ ಮತ್ತು ಮೈಸೂರು ಮೃಗಾಲಯಗಳು ಸೇರಿವೆ. ಬೆಂಗಳೂರಿನಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ಮೈಸೂರು ನಿಮ್ಮ ವಾರಾಂತ್ಯದ ವಿಹಾರಕ್ಕೆ ಒಂದು ಉತ್ತಮ ಸ್ಥಳವಾಗಿದೆ.

4. ಹಾಸನ:

ಬೆಂಗಳೂರಿನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಹಾಸನವು ನಿಮ್ಮ ವಾರಂತ್ಯಕ್ಕೆ ಉತ್ತಮ ಸ್ಥಳವಾಗಿದೆ. ಹಾಸನವು ಹಲವಾರು ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಶಿಲ್ಪಗಳನ್ನು ಹೊಂದಿದ್ದು, ನಿಮಗೆ ಮನೋರಂಜನೆಯ ಜೊತೆಗೆ ಇತಿಹಾಸದ ಮಾಹಿತಿಗಳನ್ನು ತಿಳಿಯಲು ಸಹಾಯಕವಾಗಿದೆ.

5. ಕಬಿನಿ:

ವನ್ಯಜೀವಿ ಅಭಯಾರಣ್ಯಗಳು ಮತ್ತು ಪ್ರಕೃತಿ ಮಡಿಲಿನಲ್ಲಿ ನೀವು ವಾರಾಂತ್ಯವನ್ನು ಕಳೆಯಲು ಬಯಸಿದರೆ ಕಬಿನಿ ಉತ್ತಮ ಆಯ್ಕೆಯಾಗಿದೆ. ಇದು ಬೆಂಗಳೂರಿನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಕಬಿನಿ ಅಣೆಕಟ್ಟು, ಕಬಿನಿ ನದಿ ಮತ್ತು ಕಬಿನಿ ಹಿನ್ನೀರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನೀವು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದಾಗಿದೆ.

6. ಚಿಕ್ಕಮಗಳೂರು:

ಚಿಕ್ಕಮಗಳೂರು ಬೆಂಗಳೂರಿನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿದೆ. ಇದು ಸ್ಥಳೀಯ ಮಾರುಕಟ್ಟೆಗಳು, ಉತ್ತಮ ತಿನಿಸುಗಳು ಮತ್ತು ಕೆಫೆಗಳೊಂದಿಗೆ ಆಸಕ್ತಿದಾಯಕ ಪ್ರವಾಸಿ ತಾಣವಾಗಿದೆ. ಜೊತೆಗೆ ನೀವು ಇಲ್ಲಿಂದ 9 ಕಿಲೋಮೀಟರ್ ಕುದುರೆಮುಖ ಟ್ರೆಕ್ಕಿಂಗ್ ಮಾಡಬಹುದಾಗಿದೆ.

ಇದನ್ನು ಓದಿ: ತಮಿಳುನಾಡಿನ ದ್ವೀಪ ಪ್ರದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು? ಮಾಹಿತಿ ಇಲ್ಲಿದೆ

7. ವಯನಾಡ್:

ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಸುಂದರವಾದ ಗಿರಿಧಾಮ ವಯನಾಡ್. ಹೇರಳವಾದ ಹಸಿರು, ಪರಿಪೂರ್ಣ ಹವಾಮಾನ ಮತ್ತು ಪ್ರಶಾಂತವಾದ ಸುಂದರವಾದ ತಾಣವಾಗಿದೆ. ವಯನಾಡ್ ಬೆಂಗಳೂರಿನಿಂದ ಸುಮಾರು 270 ಕಿಲೋಮೀಟರ್ ದೂರದಲ್ಲಿದೆ. ನಿಮ್ಮ ಒತ್ತಡದ ಕೆಲಸದಿಂದ ಸ್ವಲ್ಪ ವಿರಾಮವನ್ನು ಪಡೆಯಲು ವಯನಾಡ್ ಪರಿಪೂರ್ಣ ಸ್ಥಳವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್