ಕಾಯಿ ಪಪ್ಪಾಯಿಯ ಸಲಾಡ್ ಮಾಡುವ ವಿಧಾನ ಇಲ್ಲಿದೆ

ಕಾಯಿ ಪಪ್ಪಾಯಿ ಸಲಾಡ್ ಮಾಡುವ ಕ್ರಮ ಹುಟ್ಟಿಕೊಂಡಿದ್ದು ಆಗ್ನೇಯ ಏಷ್ಯಾದಲ್ಲಿ. ಈ ಖಾದ್ಯವು ಸಿಹಿ, ಹುಳಿ, ಉಪ್ಪು ಮತ್ತು ಮಸಾಲೆಯುಕ್ತ ರುಚಿಗಳ ಪರಿಪೂರ್ಣ ಸಮತೋಲನವಾಗಿದೆ. ಇದನ್ನು ನೀವು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದು ಅನಿಸುವುದು ಸಹಜ. ಈ ತ್ವರಿತ ಮತ್ತು ಸುಲಭವಾದ ಸಲಾಡ್ ಅನ್ನು ಯಾವುದೇ ಸಮಯದಲ್ಲಿಯೂ ತಯಾರಿಸಿ ತಿನ್ನಬಹುದು. ಹಾಗಾದರೆ ರುಚಿಕರವಾದ ಕಚ್ಚಾ ಪಪ್ಪಾಯಿ ಸಲಾಡ್ ಅನ್ನು ಹೇಗೆ ತಯಾರಿಸುವುದು? ಇಲ್ಲಿದೆ ಮಾಹಿತಿ

ಕಾಯಿ ಪಪ್ಪಾಯಿಯ ಸಲಾಡ್ ಮಾಡುವ ವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: Nov 18, 2023 | 5:37 PM

ಅಡುಗೆ ಮನೆಯಲ್ಲಿ ವಿಧ ವಿಧವಾದ ಖಾದ್ಯ ಮಾಡಿದಾಗಲೇ ಹಲವಾರು ರುಚಿಯನ್ನು ಸವಿಯಲು ಸಾಧ್ಯ. ಹಾಗಾಗಿ ಕುರುಕಲು ತಿಂಡಿಯನ್ನು ಹೆಚ್ಚಾಗಿ ತಿನ್ನುವ ಬದಲು ರುಚಿ ಕೊಡುವ ಮತ್ತು ಆರೋಗ್ಯಕ್ಕೆ ಹಿತವಾಗುವ ತಿಂಡಿ ಮಾಡಿ ತಿನ್ನಬಹುದು. ಇದರಲ್ಲಿ ಕಾಯಿ ಪಪ್ಪಾಯಿ ಸಲಾಡ್ ಕೂಡ ಒಂದು. ಈ ರುಚಿಯ ಹುಟ್ಟಿಕೊಂಡಿದ್ದು ಆಗ್ನೇಯ ಏಷ್ಯಾದಲ್ಲಿ. ಈ ಖಾದ್ಯವು ಸಿಹಿ, ಹುಳಿ, ಉಪ್ಪು ಮತ್ತು ಮಸಾಲೆಯುಕ್ತ ರುಚಿಗಳ ಪರಿಪೂರ್ಣ ಸಮತೋಲನವಾಗಿದೆ. ಇದನ್ನು ನೀವು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದು ಅನಿಸುವುದು ಸಹಜ. ಈ ತ್ವರಿತ ಮತ್ತು ಸುಲಭವಾದ ಸಲಾಡ್ ಅನ್ನು ಯಾವುದೇ ಸಮಯದಲ್ಲಿಯೂ ತಯಾರಿಸಿ ತಿನ್ನಬಹುದು. ಜೊತೆಗೆ ನಿಮ್ಮ ಮಧ್ಯಾಹ್ನ ಅಥವಾ ರಾತ್ರಿಯ ದಿನಚರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ. ನೀವು ಮಸಾಲೆಯುಕ್ತ ಆಹಾರದ ಪ್ರೀಯರಾಗಿರಲಿ ಅಥವಾ ಸೌಮ್ಯ ಆಹಾರವನ್ನು ಇಷ್ಟಪಡುವವರಾಗಲಿ ಈ ಪಾಕವಿಧಾನ ನಿಮ್ಮ ರುಚಿಗೆ ತಕ್ಕಂತೆ ಸರಿಹೊಂದಿಕೊಳ್ಳುತ್ತದೆ. ರುಚಿಕರವಾದ ಕಚ್ಚಾ ಪಪ್ಪಾಯಿ ಸಲಾಡ್ ಅನ್ನು ಹೇಗೆ ತಯಾರಿಸುವುದು? ಇಲ್ಲಿದೆ ಮಾಹಿತಿ.

ಕಾಯಿ ಪಪ್ಪಾಯಿ ಸಲಾಡ್ ಅಥವಾ ಥಾಯ್ ಪಪ್ಪಾಯಿ ಸಲಾಡ್ ಎಂದೂ ಕರೆಯಲ್ಪಡುವ ಕಚ್ಚಾ ಪಪ್ಪಾಯಿ ಸಲಾಡ್ ರುಚಿಕರ ಮಾತ್ರವಲ್ಲ, ಇದು ಪೌಷ್ಟಿಕರವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಸಲಾಡ್ ನ ಕೆಲವು ಪ್ರಯೋಜನಗಳು ಇಲ್ಲಿವೆ.

1. ಪೋಷಕಾಂಶಗಳಿಂದ ಸಮೃದ್ಧವಾಗಿದೆ: ಕಾಯಿ ಪಪ್ಪಾಯಿಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.

2. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಕಾಯಿ ಪಪ್ಪಾಯಿಯಲ್ಲಿರುವ ಫೈಬರ್ ಮತ್ತು ಜೀರ್ಣಕಾರಿ ಕಿಣ್ವಗಳು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

3. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ: ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಫೈಬರ್ ಅಧಿಕವಾಗಿದೆ, ಹಾಗಾಗಿ ಇದು ತೂಕ ನಷ್ಟಕ್ಕೆ ಉತ್ತಮ ಆಹಾರವಾಗಿದೆ ಎಂದರೆ ತಪ್ಪಾಗಲಾರದು.

4. ಉರಿಯೂತ ನಿವಾರಕ ಗುಣಲಕ್ಷಣಗಳು: ಪಪ್ಪಾಯಿಯಲ್ಲಿರುವ ಉರಿಯೂತ ನಿವಾರಕ ಗುಣಲಕ್ಷಣಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.

5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಪಪ್ಪಾಯಿಯಲ್ಲಿರುವ ಹೆಚ್ಚಿನ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ.

ಇದನ್ನೂ ಓದಿ: ಪಪ್ಪಾಯಿ ತಿಂದ ನಂತರ ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ, ಇಲ್ಲಿದೆ ಅಡ್ಡ ಪರಿಣಾಮ

6. ಚರ್ಮಕ್ಕೆ ಒಳ್ಳೆಯದು: ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾದ ಗುರುತುಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

7. ಒತ್ತಡವನ್ನು ಕಡಿಮೆ ಮಾಡುತ್ತದೆ: ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿದೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡಲು ಸಹಕಾರಿಯಾಗಿದೆ.

ಕಾಯಿ ಅಥವಾ ಸಿಹಿ ಪಪ್ಪಾಯಿಯ ಸಲಾಡ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ, ನೀವು ಒಂದು ಹೊಸ ರುಚಿಯನ್ನು ಆನಂದಿಸಬಹುದು ಮತ್ತು ಅದು ನೀಡುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಹಸಿ ಪಪ್ಪಾಯಿ ಸಲಾಡ್ ತಯಾರಿಸುವ ವಿಧಾನ ಇಲ್ಲಿದೆ:
ಬೇಕಾಗುವ ಸಾಮಾಗ್ರಿಗಳು:

* 1 ಮಧ್ಯಮ ಗಾತ್ರದ ಕಾಯಿ (ಹಣ್ಣಾಗದ) ಪಪ್ಪಾಯಿ, ಸಿಪ್ಪೆ ಸುಲಿದು ತುರಿದು ಇಟ್ಟುಕೊಳ್ಳಿ

* 1 ಸಣ್ಣ ಕ್ಯಾರೆಟ್ ತುರಿದದ್ದು

* 1 ಸಣ್ಣ ಟೊಮೆಟೊ, (ಕತ್ತರಿಸಿದ)

* 1 ಸಣ್ಣ ಈರುಳ್ಳಿ (ತೆಳುವಾಗಿ ಕತ್ತರಿಸಿ)

* 1- 2 ಬೆಳ್ಳುಳ್ಳಿ ಎಸಳು

* 12 ಕೆಂಪು ಮೆಣಸು (ಐಚ್ಛಿಕ)

* 1 ಟೇಬಲ್ ಚಮಚ ಫಿಶ್ ಸಾಸ್

* 2 ಚಮಚ ತಾಜಾ ನಿಂಬೆ ರಸ

* 1 ಟೇಬಲ್ ಚಮಚ ಕಂದು ಸಕ್ಕರೆ

* 1 ಚಮಚ ಹುರಿದ ಕಡಲೆಕಾಯಿ

* ಅಲಂಕಾರಕ್ಕಾಗಿ ತಾಜಾ ಕೊತ್ತಂಬರಿ ಸೊಪ್ಪು

ಇದನ್ನೂ ಓದಿ:

ಮಾಡುವ ವಿಧಾನ:

1. ಹಸಿ ಅಥವಾ ಕಾಯಿ ಪಪ್ಪಾಯಿಯನ್ನು ಸಿಪ್ಪೆ ಸುಲಿದು ತೆಳುವಾಗಿ ತುರಿದಿಟ್ಟುಕೊಳ್ಳಿ.

2. ಜೊತೆಗೆ ಕ್ಯಾರೆಟ್ ಅನ್ನು ತುರಿದು ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಕೆಂಪು ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದರ ಜೊತೆಗೆ ಬೆಳ್ಳುಳ್ಳಿಯನ್ನು ತುಂಡು ಮಾಡಿಟ್ಟುಕೊಳ್ಳಿ. ಅಗತ್ಯವಿದ್ದರೆ ಕೆಂಪು ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.

3. ಒಂದು ದೊಡ್ಡ ಮಿಕ್ಸಿಂಗ್ ಬೌಲ್ ನಲ್ಲಿ ತುರಿದ ಪಪ್ಪಾಯಿ, ಕ್ಯಾರೆಟ್, ಕತ್ತರಿಸಿದ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸನ್ನು ಸೇರಿಸಿ.

4. ಒಂದು ಸಣ್ಣ ಮಿಕ್ಸಿಂಗ್ ಬೌಲ್ ನಲ್ಲಿ ಮೀನಿನ ಸಾಸ್, ನಿಂಬೆ ರಸ ಮತ್ತು ಕಂದು ಸಕ್ಕರೆ ಸೇರಿಸಿಕೊಳ್ಳಿ. ಇದು ಚೆನ್ನಾಗಿ ಬೆರೆಯುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.

5. ಪಪ್ಪಾಯಿ ಮಿಶ್ರಣದ ಮೇಲೆ ಹುರಿದ ಕಡಲೆಕಾಯಿಯನ್ನು ಸಣ್ಣ ತುಂಡುಗಳಾಗಿ ಜಜ್ಜಿ ಸಿಂಪಡಿಸಿಕೊಳ್ಳಿ.

6. ಜೊತೆಗೆ ಸ್ವಲ್ಪ ತಾಜಾ ಕೊತ್ತಂಬರಿಯನ್ನು ಕತ್ತರಿಸಿ ಸಲಾಡ್ ಮೇಲೆ ಸಿಂಪಡಿಸಿ.

7. ತಕ್ಷಣ ಬಡಿಸಿ ಮತ್ತು ನಿಮ್ಮ ರುಚಿಕರವಾದ ಹಸಿ ಪಪ್ಪಾಯಿ ಸಲಾಡ್ ಅನ್ನು ಆನಂದಿಸಿ!

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Sat, 18 November 23

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us