Sign In

By signing in or creating an account, you agree with Associated Broadcasting Company's Terms & Conditions and Privacy Policy.

Temple Chakkara Pongal: ದೇವಸ್ಥಾನ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ ನೋಡಿ

ಸಕ್ಕರೆ ಪೊಂಗಲ್ ಅನ್ನು ಹಲವು ರೀತಿಯಲ್ಲಿ ತಯಾರಿಸಲಾಗುತ್ತದೆ. ಅಲ್ಲದೆ ಪ್ರದೇಶಗಳನ್ನು ಅವಲಂಬಿಸಿ ರುಚಿಯೂ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಹಬ್ಬ ಅಥವಾ ಶುಭ ಸಂದರ್ಭಗಳಿರುವಾಗ ತಯಾರಿಸಲಾಗುತ್ತದೆ. ಆದರೆ ದೇವಸ್ಥಾನಗಳಲ್ಲಿ ಸಿಗುವ ಪೊಂಗಲ್ ಗಳ ರುಚಿಯೇ ಬೇರೆ. ಎಷ್ಟು ತಿಂದರೂ, ಇನ್ನೂ ತಿನ್ನಬೇಕು ಮತ್ತೂ ತಿನ್ನಬೇಕು ಎಂದು ಎನಿಸುತ್ತದೆ. ಹಾಗಾಗಿ ಈ ರುಚಿಯನ್ನು ಸುಲಭವಾಗಿ ಮನೆಯಲ್ಲಿಯೇ ಆನಂದಿಸಬಹುದು. ಹಾಗಾದರೆ ದೇವಾಲಯಗಳ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ? ಅಗತ್ಯವಿರುವ ಪದಾರ್ಥಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

Temple Chakkara Pongal: ದೇವಸ್ಥಾನ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ ನೋಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 5:57 PM

ಹಬ್ಬಗಳು ಸಾಲು ಸಾಲಾಗಿ ಬರುವಾಗ ಮನೆಯಲ್ಲಿಯೇ ವಿಶೇಷವಾಗಿ ಏನಾದರೂ ಸಿಹಿ ತಿಂಡಿ ಮಾಡಬೇಕು ಎಂದು ಮನಸ್ಸಾಗುತ್ತದೆ. ಆ ಸಮಯದಲ್ಲಿ ಒಂದೇ ಬಗೆಯ ಸಿಹಿ ಪದಾರ್ಥಗಳನ್ನು ಮಾಡಿ ಸವಿಯಲು ಮನಸ್ಸು ಒಪ್ಪುವುದಿಲ್ಲ. ಅಂತಹ ಸಮಯದಲ್ಲಿ ಸುಲಭವಾಗಿ ಅದರಲ್ಲಿಯೂ ರುಚಿಯಾಗಿ ಮಾಡಬಹುದಾದ ಪಾಕವಿಧಾನವನ್ನು ಅನುಸರಿಸುವುದು ಉತ್ತಮ. ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಮಾಡಬಹುದಾದ ಸಕ್ಕರೆ ಪೊಂಗಲ್ ಗೆ ಎಲ್ಲಾ ಕಡೆಯಲ್ಲಿಯೂ ವಿಶೇಷ ಸ್ಥಾನವಿದೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಿದರೂ, ಮೊದಲು ಮಾಡಬೇಕಾದ ಕೆಲಸವೆಂದರೆ ಸಿಹಿ ತಿನಿಸುಗಳನ್ನು ಮಾಡುವುದು ಅದರಲ್ಲಿ ಸಕ್ಕರೆ ಪೊಂಗಲ್ ಕೂಡ ಒಂದು. ಇದನ್ನು ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನ ಶೈಲಿಯಲ್ಲಿ ಮಾಡುತ್ತಾರೆ. ಅಲ್ಲದೆ ಪ್ರದೇಶಗಳನ್ನು ಅವಲಂಬಿಸಿ ರುಚಿಯೂ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಹಬ್ಬ ಅಥವಾ ಶುಭ ಸಂದರ್ಭಗಳಿರುವಾಗ ತಯಾರಿಸಲಾಗುತ್ತದೆ ಅದಲ್ಲದೆ ದೇವರ ನೈವೇದ್ಯಕ್ಕೂ ಶ್ರೇಷ್ಠವಾಗಿದೆ.

ಸಕ್ಕರೆ ಪೊಂಗಲ್ ಅನ್ನು ಹಲವು ರೀತಿಯಲ್ಲಿ ತಯಾರಿಸಲಾಗುತ್ತದೆ. ಆದರೆ ದೇವಸ್ಥಾನಗಳಲ್ಲಿ ಸಿಗುವ ಪೊಂಗಲ್ ಗಳ ರುಚಿಯೇ ಬೇರೆ. ಎಷ್ಟು ತಿಂದರೂ, ಇನ್ನೂ ತಿನ್ನಬೇಕು ಮತ್ತೂ ತಿನ್ನಬೇಕು ಎಂದು ಎನಿಸುತ್ತದೆ. ಹಾಗಾಗಿ ಈ ರುಚಿಯನ್ನು ಸುಲಭವಾಗಿ ಮನೆಯಲ್ಲಿಯೇ ಆನಂದಿಸುವುದು ಉತ್ತಮ. ಹಾಗಾದರೆ ದೇವಾಲಯಗಳ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ? ಅಗತ್ಯವಿರುವ ಪದಾರ್ಥಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

ದೇವಾಲಯ ಶೈಲಿಯ ಸಕ್ಕರೆ ಪೊಂಗಲ್ ಮಾಡಲು ಬೇಕಾಗುವ ಪದಾರ್ಥಗಳು:

ಹಾಲು

ಬಾಳೆಹಣ್ಣು

ಹೆಸರುಬೇಳೆ

ಅಕ್ಕಿ

ಸಕ್ಕರೆ

ತುಪ್ಪ

ಏಲಕ್ಕಿ ಪುಡಿ

ಜೀರಿಗೆ

ಒಣ ಹಣ್ಣುಗಳು

ತಯಾರಿಸುವ ವಿಧಾನ:

ಮೊದಲು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು ನೆನೆಸಿಟ್ಟುಕೊಳ್ಳಿ. ಬಳಿಕ ಆ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ಅದರ ನಂತರ, ಅಕ್ಕಿಯನ್ನು ತೊಳೆದು ಸರಿಯಾದ ನೀರಿನ ಅಳತೆಯಲ್ಲಿ ಕುದಿಸಿ. ಅಕ್ಕಿ ಸರಿಯಾಗಿ ಬೆಂದ ನಂತರ ಪಕ್ಕಕ್ಕೆ ಇಡಬೇಕು. ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸೇರಿಸಿ. ಅದು ಬಿಸಿಯಾದ ನಂತರ ಸ್ವಲ್ಪ ಜೀರಿಗೆ ಹಾಕಿ ಹುರಿದುಕೊಳ್ಳಿ ಬಳಿಕ ಹೆಸರುಬೇಳೆ ಮಿಶ್ರಣವನ್ನು ಸೇರಿಸಿ ಹುರಿಯಿರಿ. ಒಂದೆರಡು ನಿಮಿಷಗಳು ಹುರಿದ ನಂತರ ಅಕ್ಕಿ ಮತ್ತು ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಎಲ್ಲವನ್ನೂ ಸ್ವಲ್ಪ ಬೇಯಿಸಿ. ಬಳಿಕ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ. ಸಕ್ಕರೆ ಸೇವನೆ ಮಾಡದಿದ್ದರೆ ಬೆಲ್ಲವನ್ನು ಬಳಸಬಹುದು. ಈ ಎಲ್ಲವನ್ನೂ ಒಟ್ಟಿ ಮಿಶ್ರವಾಗಲು ಬಿಡಿ. ನಂತರ ಏಲಕ್ಕಿ ಪುಡಿಯನ್ನು ಸೇರಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಒಣ ಹಣ್ಣುಗಳಿಂದ ಅಲಂಕರಿಸಿ. ಈ ರೀತಿ ಮಾಡಿದರೆ ದೇವಸ್ಥಾನ ಶೈಲಿಯಲ್ಲಿ ಮಾಡುವ ಪೊಂಗಲ್ ಸವಿಯಲು ಸಿದ್ದವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ