AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ 4 ಸ್ಥಳಗಳಲ್ಲಿ ಉಳಿದುಕೊಳ್ಳುವ ತಪ್ಪನ್ನು ಎಂದೂ ಮಾಡಬೇಡಿ- ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯ ಬಹಳಷ್ಟು ಸನ್ನಿವೇಶಗಳನ್ನು ಎದುರಿಗಿರಿಸಿ ವಿಚಾರವನ್ನು ತಿಳಿಸಿದ್ದಾನೆ. ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು, ಅಳವಡಿಸಿಕೊಳ್ಳಲು ಕೂಡ ಪ್ರಯತ್ನಿಸಿದರೆ ಬಹುತೇಕ ಸಮಸ್ಯೆಗಳನ್ನು ತಡೆಯಬಹುದು. ಎಚ್ಚರವಾಗಿ ಇರಬಹುದು.

Chanakya Niti: ಈ 4 ಸ್ಥಳಗಳಲ್ಲಿ ಉಳಿದುಕೊಳ್ಳುವ ತಪ್ಪನ್ನು ಎಂದೂ ಮಾಡಬೇಡಿ- ಚಾಣಕ್ಯ ನೀತಿ
ಚಾಣಕ್ಯ ನೀತಿ
TV9 Web
| Edited By: |

Updated on: Apr 03, 2022 | 6:40 AM

Share

ಜೀವನದಲ್ಲಿ ಯಾವುದೇ ಹೆಜ್ಜೆ ಇಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು ಸಣ್ಣ ತಪ್ಪು ಕೂಡ ಜೀವನವನ್ನು ತೊಂದರೆಗೆ ಸಿಲುಕಿಸಬಹುದು. ಎಲ್ಲಾ ಸಂದರ್ಭದಲ್ಲೂ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ತನಗೆ ಮಾರ್ಗದರ್ಶನ ಮಾಡಲು ಸೂಕ್ತ ವ್ಯಕ್ತಿಗಳನ್ನು ಹುಡುಕುತ್ತಾನೆ. ಅಂಥವರಿಗೆ ಆಚಾರ್ಯ ಚಾಣಕ್ಯನ ಬೋಧನೆಗಳು ಬಹಳ ಉಪಕಾರಿ ಆಗಬಹುದು. ಚಾಣಕ್ಯನ ನೀತಿಶಾಸ್ತ್ರ ಪುಸ್ತಕವನ್ನು ಓದಿದರೆ ಜೀವನದ ಬಹಳಷ್ಟು ಸನ್ನಿವೇಶಗಳನ್ನು ಎದುರಿಸಲು, ಸರಿದೂಗಿಸಲು, ಬೆಳೆಯಲು ಸಹಾಯವಾಗುತ್ತದೆ.

ಆಚಾರ್ಯ ಚಾಣಕ್ಯ ಬಹಳಷ್ಟು ಸನ್ನಿವೇಶಗಳನ್ನು ಎದುರಿಗಿರಿಸಿ ವಿಚಾರವನ್ನು ತಿಳಿಸಿದ್ದಾನೆ. ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು, ಅಳವಡಿಸಿಕೊಳ್ಳಲು ಕೂಡ ಪ್ರಯತ್ನಿಸಿದರೆ ಬಹುತೇಕ ಸಮಸ್ಯೆಗಳನ್ನು ತಡೆಯಬಹುದು. ಎಚ್ಚರವಾಗಿ ಇರಬಹುದು. ಆಚಾರ್ಯ ಚಾಣಕ್ಯ ನಾಲ್ಕು ಸ್ಥಳಗಳನ್ನು ಉಲ್ಲೇಖಿಸಿ, ಅಂಥಾ ಕಡೆ ಉಳಿಯಬೇಡಿ ಎಂದೂ ಹೇಳಿದ್ದಾನೆ. ಹಾಗೊಂದು ವೇಳೆ ಇಂಥಾ ಕಡೆ ಉಳಿದರೆ ಅಪಾಯ ಎದುರಾಗಬಹುದು ಎಂದು ತಿಳಿಸಿದ್ದಾನೆ.

ಬರಪೀಡಿತ ಪ್ರದೇಶ

ಚಾಣಕ್ಯ ನೀತಿ ಹೇಳುವಂತೆ ಬರ ಇರುವ ಸ್ಥಳ ವಾಸಯೋಗ್ಯವಲ್ಲ. ಯಾವುದೇ ಸಂದರ್ಭದಲ್ಲಿ ನೀವು ಅಲ್ಲಿಯೇ ಉಳಿದುಕೊಂಡರೆ, ನಿಮ್ಮ ಜೀವಕ್ಕೆ ಅಪಾಯ ಉಂಟಾಗಬಹುದು. ಮಾತ್ರ ಅಲ್ಲದೆ, ಇಡೀ ಕುಟುಂಬದ ಜೀವನವೂ ತೊಂದರೆಗೆ ಸಿಲುಕಬಹುದು. ಹಾಗಾಗಿ ಬರ ಪೀಡಿತ ಸ್ಥಳವನ್ನು ಕೂಡಲೇ ಬಿಟ್ಟು ಬರಬೇಕು.

ಜಗಳ ನಡೆಯುತ್ತಿರುವ ಸ್ಥಳ

ಜಗಳ, ಗಲಾಟೆ, ಗದ್ದಲ ಇಂತಹ ಘಟನೆಗಳು ಆಗುತ್ತಿರುವ ಸ್ಥಳಗಳಲ್ಲಿ ನೀವು ಇದ್ದರೆ ಅಲ್ಲಿಂದ ತಕ್ಷಣವೇ ಹೊರಡಬೇಕು. ಅಲ್ಲೇ ಇದ್ದರೆ ನಿಮಗೆ ಹಾನಿ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ಜೀವನವು ಕೂಡ ಯಾವುದೇ ಸಮಯದಲ್ಲಿ ತೊಂದರೆಗೆ ಒಳಗಾಗಬಹುದು.

ಕೆಟ್ಟ ವ್ಯಕ್ತಿಯ ಜೊತೆಗೆ ಇರಬೇಡಿ

ದುಷ್ಟರು ಯಾರಿಗೂ ಹತ್ತಿರವಾಗಿ ಇರುವುದಿಲ್ಲ. ಅವರು ನಿಮಗೆ ಎಷ್ಟೇ ಹತ್ತಿರದವರಂತೆ ಕಂಡರೂ ಅವರ ಬಲೆಗೆ ಬೀಳಬೇಡಿ. ಅವರು ನಿಮ್ಮ ಉಪಯೋಗ ಇರುವ ತನಕ ಮಾತ್ರ ನಿಮ್ಮ ಜೊತೆಗೆ ಇರುತ್ತಾರೆ. ಬಳಿಕ ಒಂದು ದಿನ ಅವರು ನಿಮಗೆ ಹಾನಿ ಮಾಡುವುದಿಲ್ಲ ಎಂದೂ ಹೇಳಲಾಗುವುದಿಲ್ಲ.

ಶತ್ರು ದಾಳಿ ನಡೆಯುತ್ತಿರುವ ಸ್ಥಳ

ಶತ್ರು ದಾಳಿ ಸ್ಥಳದಲ್ಲಿ ನೀವು ಇದ್ದರೆ ಕೂಡಲೇ ನೀವು ಸುರಕ್ಷಿತ ಸ್ಥಳಕ್ಕೆ ಬರಬೇಕು. ಹಠಾತ್ ಪರಿಸ್ಥಿತಿಯಲ್ಲಿ ನೀವು ಅಲ್ಲಿಂದ ಹೊರಬರಬೇಕು. ಅಂತಹ ಸ್ಥಳದಲ್ಲಿ ನೀವು ಜೀವನ ಎದುರಿಸಲು ಪ್ರಯತ್ನಿಸಿದರೆ ಅದು ಅಪಾಯಕಾರಿ. ಅದರಿಂದ ನಿಮಗೆ ಹಾನಿ ಉಂಟಾಗಬಹುದು. ಈ ಪರಿಸ್ಥಿತಿಯಲ್ಲಿ ವ್ಯಕ್ತಿಯು ತನ್ನ ಜೀವವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕು.

ಇದನ್ನೂ ಓದಿ: Chanakya Niti: ಪ್ರತಿಯೊಬ್ಬ ವ್ಯಕ್ತಿಯು ಈ ಎರಡು ವಿಷಯಗಳನ್ನು ಸೈನಿಕನಂತೆ ರಕ್ಷಿಸಬೇಕು!- ಚಾಣಕ್ಯ ನೀತಿ

ಇದನ್ನೂ ಓದಿ: Chanakya Niti: ಈ 5 ವಿಷಯಗಳನ್ನು ಯಾವತ್ತೂ ನೆನಪಿಡಿ, ಕೆಟ್ಟ ಸಮಯಗಳು ದೂರವಾಗುತ್ತವೆ- ಚಾಣಕ್ಯ ನೀತಿ

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ