Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಪ್ರತಿಯೊಬ್ಬ ವ್ಯಕ್ತಿಯು ಈ ಎರಡು ವಿಷಯಗಳನ್ನು ಸೈನಿಕನಂತೆ ರಕ್ಷಿಸಬೇಕು!- ಚಾಣಕ್ಯ ನೀತಿ

ಚಾಣಕ್ಯ ನೀತಿಯಲ್ಲಿ, ಆಚಾರ್ಯರು ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆಚಾರ್ಯರು ವಿಶೇಷ ಪ್ರಾಮುಖ್ಯತೆಯನ್ನು ನೀಡಿ ಸೈನಿಕರಂತೆ ರಕ್ಷಿಸಲು ಹೇಳಿದ ಆ ಎರಡು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

Chanakya Niti: ಪ್ರತಿಯೊಬ್ಬ ವ್ಯಕ್ತಿಯು ಈ ಎರಡು ವಿಷಯಗಳನ್ನು ಸೈನಿಕನಂತೆ ರಕ್ಷಿಸಬೇಕು!- ಚಾಣಕ್ಯ ನೀತಿ
ಚಾಣಕ್ಯ ನೀತಿ
Follow us
TV9 Web
| Updated By: ganapathi bhat

Updated on: Mar 28, 2022 | 6:25 AM

ಆಚಾರ್ಯ ಚಾಣಕ್ಯರು ಏನೇ ಹೇಳುತ್ತಿದ್ದರೂ ಬಹಳ ಚಿಂತನಶೀಲವಾಗಿ ಹೇಳುತ್ತಿದ್ದರು. ಆಚಾರ್ಯರು ತಮ್ಮ ಜೀವನದಲ್ಲಿ ಎಂದಿಗೂ ಸೋಲಲಿಲ್ಲ. ಆಚಾರ್ಯರು ಪ್ರತಿಯೊಂದು ಸನ್ನಿವೇಶವನ್ನು ತಮ್ಮ ಸ್ವಂತ ಶಕ್ತಿಯನ್ನಾಗಿ ಮಾಡಿಕೊಂಡರು ಶ್ರಮಿಸುತ್ತಿದ್ದರು. ವರ್ಷಗಳ ನಂತರವೂ, ಆಚಾರ್ಯ ಚಾಣಕ್ಯರನ್ನು ಸಮರ್ಥ ಅರ್ಥಶಾಸ್ತ್ರಜ್ಞ, ತಂತ್ರಜ್ಞ, ರಾಜತಾಂತ್ರಿಕ, ರಾಜಕಾರಣಿ ಮತ್ತು ಗುರು ಎಂದು ನೋಡಲಾಗುತ್ತದೆ. ಆಚಾರ್ಯರು ಜೀವನದಲ್ಲಿ ಏನೇನು ಕಲಿತರೋ ಆ ಅನುಭವಗಳು ತಮ್ಮ ರಚನೆಗಳಲ್ಲಿ ಜನರ ಉಪಯೋಗಕ್ಕಾಗಿ ಉಲ್ಲೇಖಿಸಿದರು. ಅದು ಇಂದಿಗೂ ಚಾಣಕ್ಯ ನೀತಿ ಎಂದು ಕರೆಯಲ್ಪಡುವ ಆಚಾರ್ಯ ಚಾಣಕ್ಯರ ನೀತಿಗಳಾಗಿ ಬಹಳ ಜನಪ್ರಿಯವಾಗಿದೆ.

ಚಾಣಕ್ಯ ನೀತಿಯಲ್ಲಿ, ಆಚಾರ್ಯರು ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆಚಾರ್ಯರು ವಿಶೇಷ ಪ್ರಾಮುಖ್ಯತೆಯನ್ನು ನೀಡಿ ಸೈನಿಕರಂತೆ ರಕ್ಷಿಸಲು ಹೇಳಿದ ಆ ಎರಡು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಆರೋಗ್ಯ

ಮೊದಲನೆಯದು ನಿಮ್ಮ ಆರೋಗ್ಯ. ಒಬ್ಬ ವ್ಯಕ್ತಿಯು ತನ್ನ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಅದನ್ನು ರೋಗ ಮುಕ್ತವಾಗಿಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಆಚಾರ್ಯರು ನಂಬಿದ್ದರು. ಸೈನಿಕನು ತನ್ನ ದೇಶವನ್ನು ಶತ್ರುಗಳಿಂದ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದಂತೆಯೇ. ರೋಗಗಳೂ ನಿಮ್ಮ ದೇಹದ ಶತ್ರುಗಳು. ಒಮ್ಮೆ ಈ ಶತ್ರುಗಳು ನಿಮ್ಮ ದೇಹವನ್ನು ವಶಪಡಿಸಿಕೊಂಡರೆ ನೀವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಆಹಾರ ಮತ್ತು ದಿನಚರಿಯನ್ನು ಸಮತೋಲನದಲ್ಲಿರಿಸಿಕೊಳ್ಳಿ ಮತ್ತು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿ.

ಹಣ

ಆಚಾರ್ಯರು ಹಣವನ್ನೂ ಬಹಳ ಮುಖ್ಯವೆಂದು ಪರಿಗಣಿಸಿದ್ದಾರೆ. ನಿಮ್ಮ ಸಂಗ್ರಹವಾದ ಸಂಪತ್ತು ಮಾತ್ರ ನಿಮ್ಮೊಂದಿಗೆ ನಿಜವಾದ ಸ್ನೇಹಿತನಂತೆ ಇರುತ್ತದೆ. ಇದರ ಸಹಾಯದಿಂದ ನೀವು ಜೀವನ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬೇಡಿ. ಅದನ್ನು ಉಳಿಸಿ ಮತ್ತು ಹಣವು ಹೆಚ್ಚು ಇದ್ದರೆ ಅದನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿಸಿ. ಅಲ್ಲದೆ, ಅದನ್ನು ಶುಭ ಕಾರ್ಯಗಳಲ್ಲಿ ವಿನಿಯೋಗಿಸಿ. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಮತ್ತು ನಿಮ್ಮ ಪ್ರತಿಷ್ಠೆಯೂ ಹೆಚ್ಚಾಗುತ್ತದೆ.

ಇದನ್ನೂ ಓದಿ: Chanakya Niti: ಈ 4 ವಿಷಯಗಳೊಂದಿಗೆ ಗೆಳೆತನ ಇರಿಸಿಕೊಳ್ಳಿ; ಜೀವನದ ಕೊನೆಯವರೆಗೂ ಬೆಂಬಲ ಸಿಗುತ್ತದೆ- ಚಾಣಕ್ಯ ನೀತಿ

ಇದನ್ನೂ ಓದಿ: Chanakya Niti: ಸಂತೋಷದ ದಾಂಪತ್ಯ ಜೀವನದಲ್ಲಿ ಬಳಿಕ ವಿಚ್ಛೇದನಗಳು ಏಕೆ ಆಗುತ್ತವೆ? – ಚಾಣಕ್ಯ ನೀತಿ

ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ