AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Jaguar Day 2025: ಕ್ಷೀಣಿಸುತ್ತಿದೆ ಜಾಗ್ವಾರ್‌ ಸಂತತಿ

ಜಾಗ್ವಾರ್‌ ನೋಡಲು ಚಿರತೆಯಂತೆಯೇ ಕಾಣುವ ಶಕ್ತಿಶಾಲಿ ಪ್ರಾಣಿ. ಇಂದು ಹವಾಮಾನ ಬದಲಾವಣೆ, ಕಾಡುಗಳ ನಾಶ, ಬೇಟೆ ಇವೆಲ್ಲದರ ಕಾರಣದಿಂದ ಜಾಗ್ವಾರ್‌ ಸಂತತಿ ಅಳಿವಿನಂಚಿನತ್ತ ಸಾಗಿದೆ. ಈ ನಿಟ್ಟಿನಲ್ಲಿ ಇವುಗಳ ಪ್ರಭೇದವನ್ನು ಸಂರಕ್ಷಿಸಲು ಪ್ರತಿವರ್ಷ ನವೆಂಬರ್‌ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್‌ ದಿನವನ್ನು ಆಚರಿಸಲಾಗುತ್ತದೆ.

International Jaguar Day 2025: ಕ್ಷೀಣಿಸುತ್ತಿದೆ ಜಾಗ್ವಾರ್‌ ಸಂತತಿ
ಅಂತಾರಾಷ್ಟ್ರೀಯ ಜಾಗ್ವಾರ್‌ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 29, 2025 | 10:01 AM

Share

ಪ್ಯಾಂಥೆರಾ ಓಂಕಾ ಎಂದೂ ಕರೆಯಲ್ಪಡುವ ಜಾಗ್ವಾರ್‌ (Jaguar)ಕೂಡ ಹುಲಿ, ಸಿಂಹ, ಚಿರತೆಯಂತೆ  ಬೆಕ್ಕಿನ ಸಂತತಿಗೆ ಸೇರಿದ ದೈತ್ಯ ಪ್ರಾಣಿಯಾಗಿದ್ದು, ಇದು ತನ್ನ ಶಕ್ತಿಶಾಲಿ ಗುಣಕ್ಕೆ ಹೆಸರುವಾಸಿಯಾಗಿದೆ. ಆದರೆ ಇಂದು ಇವುಗಳು ಕಾಡಿನಲ್ಲಿ ಕಾಣ ಸಿಗುವುದೇ ಅಪರೂಪವಾಗಿದೆ. ಏಕೆಂದರೆ ಹವಾಮಾನ ಬದಲಾವಣೆ, ಕಾಡಿನ ನಾಶ, ಆವಾಸಸ್ಥಾನದ ನಷ್ಟ, ಬೇಟೆಯಾಡುವಿಕೆ ಇವೆಲ್ಲದರ ಕಾರಣದಿಂದ ಆನೆ, ಹುಲಿ, ಸಿಂಹಗಳಂತೆ ಇವುಗಳ ಸಂತತಿ ಕೂಡ ಅಳಿವಿನಂಚಿನತ್ತ ಸಾಗಿದೆ. ಹಾಗಾಗಿ ಇವುಗಳ ಸಂತತಿಯನ್ನು ಸಂರಕ್ಷಿಸುವ ಸಲುವಾಗಿ ಪ್ರತಿವರ್ಷ ನವೆಂಬರ್‌ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್‌ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಜಾಗ್ವಾರ್‌ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು 2018 ರಲ್ಲಿ ಸ್ಥಾಪಿಸಲಾಯಿತು. ಇದು ಜಾಗ್ವಾರ್‌ಗಳನ್ನು ಸಂರಕ್ಷಿಸುವ ಜಾಗತಿಕ ಪ್ರಯತ್ನದ ಭಾಗವಾಗಿದೆ. ಈ ಉಪಕ್ರಮವನ್ನು ಬೆಕ್ಕಿನ ಜಾತಿಗೆ ಸೇರಿದ ಕಾಡುಪ್ರಾಣಿಗಳನ್ನು ರಕ್ಷಿಸಲು ಮೀಸಲಾಗಿರುವ ಪ್ಯಾಂಥೆರಾ ಎಂಬ ಸಂಸ್ಥೆಯು ಹಲವಾರು ಸರ್ಕಾರಗಳು ಮತ್ತು ಸಂರಕ್ಷಣಾ ಗುಂಪುಗಳ ಸಹಯೋಗದೊಂದಿಗೆ ಮುನ್ನಡೆಸಿತು. ಮೆಕ್ಸಿಕೋದಿಂದ ಅರ್ಜೆಂಟೀನಾವರೆಗಿನ 18 ದೇಶಗಳಲ್ಲಿ ಜಾಗ್ವಾರ್‌ಗಳ ನೈಸರ್ಗಿಕ ಆವಾಸಸ್ಥಾನವನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ʼಜಾಗ್ವಾರ್ ಕಾರಿಡಾರ್ ಇನಿಶಿಯೇಟಿವ್ʼ ಕಾರ್ಯಕ್ರಮವನ್ನು ಅಳವಡಿಸಿಕೊಂಡ ನೆನಪಿಗಾಗಿ ಈ ದಿನದ ಆಚರಣೆಗೆ  ನವೆಂಬರ್ 29 ಅನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಗ್ರಾಮೀಣ ಭಾಗದ ಜನರಿಗೆ ಬದುಕು ಕಟ್ಟಿಕೊಟ್ಟ ಹೈನುಗಾರಿಕೆ

ಅಂತಾರಾಷ್ಟ್ರೀಯ ಜಾಗ್ವಾರ್‌ ದಿನದ ಮಹತ್ವವೇನು?

  • ಜಾಗ್ವಾರ್‌ಗಳ ಪರಿಸರ ಪ್ರಾಮುಖ್ಯತೆ ಮತ್ತು ಅವು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು.
  • ಜಾಗ್ವಾರ್‌ಗಳು ಮುಕ್ತವಾಗಿ ವಿಹರಿಸಲು ಅನುವು ಮಾಡಿಕೊಡುವ ಸಂರಕ್ಷಿತ ಮೀಸಲು ಪ್ರದೇಶಗಳು ಮತ್ತು ವನ್ಯಜೀವಿ ಕಾರಿಡಾರ್‌ಗಳಂತಹ ಉಪಕ್ರಮಗಳನ್ನು ಅಳವಡಿಸಲು ಪ್ರೇರೇಪಿಸುವುದು.
  • ಸರ್ಕಾರಗಳು, ಸಂಸ್ಥೆಗಳು ಜಾಗ್ವಾರ್ ಸಂರಕ್ಷಣೆಗೆ ಹಣಕಾಸು ಇತ್ಯಾದಿ ಸಹಾಯ ಮಾಡುವ ಮೂಲಕ ಇವುಗಳ ರಕ್ಷಣೆಗೆ ಕೊಡುಗೆ ನೀಡಲು ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ