Raksha Bandhan 2023: ರಕ್ಷಾ ಬಂಧನ ಹಬ್ಬದ ನಿಖರವಾದ ದಿನಾಂಕ ಯಾವುದು? ರಕ್ಷೆ ಕಟ್ಟುವ ಶುಭ ಮುಹೂರ್ತ ಯಾವಾಗ?

ಈ ವರ್ಷ ರಕ್ಷಾ ಬಂಧನದ ದಿನದಂದು ಭದ್ರ ಕಾಲ ಮುಹೂರ್ತ ಇರುವುದರಿಂದ ರಕ್ಷಾಬಂಧನ ಹಬ್ಬ ಆಗಸ್ಟ್ 30 ಅಥವಾ 31 ರಂದೇ ಎಂಬ ಗೊಂದಲ ಅನೇಕರಲ್ಲಿದೆ. ಈ ಹಬ್ಬದ ನಿಖರವಾದ ದಿನಾಂಕ ಮತ್ತು ಶುಭ ಮುಹೂರ್ತದ ಬಗ್ಗೆ ಮಾಹಿತಿ ಇಲ್ಲಿದೆ.

Raksha Bandhan 2023: ರಕ್ಷಾ ಬಂಧನ ಹಬ್ಬದ ನಿಖರವಾದ ದಿನಾಂಕ ಯಾವುದು? ರಕ್ಷೆ ಕಟ್ಟುವ ಶುಭ ಮುಹೂರ್ತ ಯಾವಾಗ?
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Aug 28, 2023 | 9:47 AM

ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷ ಮಹತ್ವವಿದೆ. ಬಹಳ ವಿಜೃಂಭಣೆಯಿಂದ ಆಚರಿಸುವ ಹಿಂದೂ ಹಬ್ಬಗಳಲ್ಲಿ ರಕ್ಷಾ ಬಂಧನವೂ ಒಂದು. ರಕ್ಷಾ ಬಂಧನವು (Raksha Bandhan) ಸಹೋದರ ಸಹೋದರಿಯರಿಗೆ ಮೀಸಲಾದ ಪವಿತ್ರ ಹಬ್ಬವಾಗಿದೆ. ಸಹೋದರ ತನಗೆ ರಕ್ಷಣೆ ನೀಡಲೆಂದು ಸಹೋದರಿಯು ತನ್ನ ಸಹೋದರಿನಿಗೆ ಕಟ್ಟುವ ಪವಿತ್ರ ದಾರನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ. ಈ ಪವಿತ್ರ ಹಬ್ಬವನ್ನು ಶ್ರಾವಣ ಶುಕ್ಲ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರನ ಬಲಗೈಯ ಮಣಿಕಟ್ಟಿನ ಮೇಲೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಹಾಗೂ ಸಹೋದರ ಅವರ ಜೀವನದುದ್ದಕ್ಕೂ ಅವರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಈ ಬಾರಿ ಭದ್ರ ಕಾಲ ಮುಹೂರ್ತ ಇರುವುದರಿಂದ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30 ಅಥವಾ 31 ಯಾವ ದಿನದಂದು ಆಚರಿಸುವುದು ಎಂಬ ಗೊಂದಲವಿದೆ. ಏಕೆಂದರೆ ಯಾವುದೇ ಶುಭ ಕಾರ್ಯದಲ್ಲಿ ಭದ್ರ ಕಾಲದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಭದ್ರ ಕಾಲದಲ್ಲಿ ಶುಭ ಕಾರ್ಯವನ್ನು ನಡೆಸಲಾಗುವುದಿಲ್ಲ. ಏಕೆಂದರೆ ಈ ಸಮಯವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಬಾರಿಯ ರಕ್ಷಾಬಂಧನ ಹಬ್ಬದ ನಿಖರವಾದ ದಿನಾಂಕ ಮತ್ತು ಶುಭ ಮುಹೂರ್ತ ಯಾವಾಗ ಎಂಬ ಮಾಹಿತಿಯನ್ನು ತಿಳಿಯಿರಿ.

ಈ ಬಾರಿಯ ರಕ್ಷಾ ಬಂಧನ ಯಾವಾಗ:

ಭದ್ರ ಕಾಲ ಮುಹೂರ್ತದಿಂದಾಗಿ ಈ ಬಾರಿ ಆಗಸ್ಟ್ 30 ಅಥವಾ 31 ಯಾವ ದಿನ ರಕ್ಷಬಂಧನವನ್ನು ಆಚರಿಸಬೇಕು ಎಂಬ ಗೊಂದಲ ಅನೇಕರಲ್ಲಿದೆ. ಪ್ರತಿವರ್ಷವೂ ಶ್ರಾವಣ ಮಾಸದ ಕೊನೆಯಲ್ಲಿ ಅಂದರೆ ಹುಣ್ಣಿಮೆಯ ದಿನದಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ ರಕ್ಷಾ ಬಂಧನವನ್ನು ಆಚರಿಸಲು ನಿಖರವಾದ ಮುಹೂರ್ತ ಇಲ್ಲಿದೆ:

ಈ ವರ್ಷ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30 ಬುಧವಾರದಂದು ಆಚರಿಸಲಾಗುತ್ತದೆ.

ರಕ್ಷಾ ಬಂಧನದ ದಾರ ಕಟ್ಟುವ ಶುಭ ಮುಹೂರ್ತ ಆರಂಭ : ಆಗಸ್ಟ್ 30 ರಂದು ರಾತ್ರಿ 9.01.

ರಕ್ಷೆ ಪೂರ್ಣಿಮೆ ತಿಥಿ ಆರಂಭ: ಆಗಸ್ಟ್ 30, ಬೆಳಗ್ಗೆ 10:58

ರಕ್ಷೆ ಪೂರ್ಣಿಮ ತಿಥಿಯ ಕೊನೆ: ಆಗಸ್ಟ್ 31 ಬೆಳಗ್ಗೆ 7.05

ಭದ್ರ ಕಾಲ ಮುಹೂರ್ತ ಆಗಸ್ಟ್ 30 ಬೆಳಗ್ಗೆ 10.58 ಕ್ಕೆ ಆರಂಭವಾಗಿ ರಾತ್ರಿ 9.01 ಕ್ಕೆ ಕೊನೆಗೊಳ್ಳಲಿದೆ.

ಇದನ್ನೂ ಓದಿ: ನಾನು ಕಟ್ಟಿದ್ದು ರಕ್ಷಾ ಬಂಧನ ಅಲ್ಲ, ಪ್ರೇಮದ ಬಂಧನ ಎಂದ ಅವನು

ರಕ್ಷಾ ಬಂಧನದ ಮಹತ್ವ:

ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಗೌರವಿಸಲು ಆಚರಿಸಲಾಗುವ ಹಬ್ಬವಾಗಿದೆ. ಈ ಹಬ್ಬವು ಒಡಹುಟ್ಟಿದವರ ನಡುವಿನ ಭಾಂದವ್ಯವನ್ನು ಬಲಪಡಿಸುವುದು ಮಾತ್ರವಲ್ಲದೆ ಕುಟುಂಬದಲ್ಲಿ ಏಕತೆ, ಪ್ರೀತಿ ಮತ್ತು ಗೌರವವದ ಭಾವನೆಯನ್ನು ಬೆಳೆಸುತ್ತದೆ. ಇದು ಯಾವುದೇ ಸಂಬಂಧದಲ್ಲಿ ಪ್ರೀತಿ, ನಿಷ್ಠೆ,ನಂಬಿಕೆ ಮತ್ತು ಬೆಂಬಲದ ಮೌಲ್ಯದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒಡಹುಟ್ಟಿದವರ ಬಾಂಧವ್ಯವನ್ನು ಬಲಪಡಿಸುತ್ತದೆ.

ಪ್ರತಿ ರಕ್ಷಾ ಬಂಧನದಂದು ಸಹೋದರಿಯರು ತಮ್ಮ ಸಹೋದರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಹಾಗೂ ತಮ್ಮ ಸಹೋದರನ ಹಣೆಗೆ ತಿಲಕ ಇಟ್ಟು ಆರತಿ ಬೆಳಗುತ್ತಾರೆ. ನಂತರ ಸಹೋದರಿಯರು ಸಹೋದರನ ಬಲಗೈಯ ಮಣಿಕಟ್ಟಿನ ಮೇಲೆ ಪವಿತ್ರ ರಕ್ಷಾ ಬಂಧನ ದಾರವನ್ನು ಕಟ್ಟುತ್ತಾರೆ. ಇದು ಸಹೋದರ ಸಹೋದರಿಯ ಬಂಧವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ ಹಾಗೂ ಅವರ ಜೀವನದುದ್ದಕ್ಕೂ ಅವರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 6:33 pm, Thu, 10 August 23

ತಾಜಾ ಸುದ್ದಿ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?