AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Healthy Oats Recipe: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಓಟ್ಸ್ ರೆಸಿಪಿ

ಉತ್ತಮ ಆಹಾರದೊಂದಿಗೆ ದಿನವನ್ನು ಪ್ರಾರಂಭಿಸಿದರೆ, ನಾವು ದಿನವಿಡೀ ಉತ್ಸಾಹದಿಂದಿರುತ್ತೇವೆ. ಇದೇ ಕಾರಣದಿಂದ ಹೆಚ್ಚಿನ ಜನರು ಬೆಳಗ್ಗೆ ರುಚಿಕರವಾದ ಹಾಗೆಯೇ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಇಂದು ಬೆಳಗಿನ ಉಪಹಾರದ ಆರೋಗ್ಯಕ ಆವೃತ್ತಿಯಾದ ಓಟ್ಸ್ ನಿಂದ ತಯಾರಿಸಲಾಗುವ ಪಾಕವಿಧಾನದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಇದು ರುಚಿಕರ ಮಾತ್ರವಲ್ಲದೆ, ನಿಮ್ಮ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.

Healthy Oats Recipe: ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಓಟ್ಸ್ ರೆಸಿಪಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Aug 10, 2023 | 7:10 PM

Share

ಓಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ತೂಕ ಇಳಿಕೆಯ ಪಯಾಣದಲ್ಲಿ ಅನೇಕ ಜನರು ಓಟ್ಸ್ ಸೇವನೆ ಮಾಡುತ್ತಾರೆ. ಆದರಲ್ಲೂ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಇನ್ಸ್ಟಂಟ್ ಅಥವಾ ಸಂಸ್ಕರಿಸಿದ ಓಟ್ಸ್ ಗಳನ್ನು ತಿನ್ನುತ್ತಾರೆ. ಇಂತಹ ಓಟ್ಸ್ ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ಅನೇಕ ವಿಷಯಗಳನ್ನು ಒಳಗೊಂಡಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ತೂಕವನ್ನು ಇಳಿಸಿಕೊಳ್ಳಲು ಓಟ್ಸ್ ತಿನ್ನಲು ಬಯಸಿದರೆ ಸಂಸ್ಕರಿಸಿದ ಓಟ್ಸ್ ಬದಲಿಗೆ ಕಚ್ಚಾ ಅಂದರೆ ಸಾದ ಓಟ್ಸ್ ಬಳಸಿ ಅದರಿಂದ ರುಚಿಕರವಾಧ ಖಾದ್ಯವನ್ನು ತಯಾರಿಸಿ. ಇದು ತಿನ್ನಲು ರುಚಿಕರವಾದದ್ದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಹಾಗಿದ್ದರೆ ಓಟ್ಸ್ ನಿಂದ ತಯಾರಿಸಲಾಗುವ ರುಚಿಕರವಾದ ಹಾಗೂ ಆರೋಗ್ಯವಕವಾದ ಪಾಕಗಳು ಯಾವುವು ಎಂಬುದನ್ನು ನೋಡೋಣ.

ಓಟ್ಸ್ ನಿಂದ ತಯಾರಿಸಲಾಗುವ ಸುಲಭ ಪಾಕವಿಧಾನಗಳೆಂದರೆ:

ಓಟ್ಸ್ ಉಪ್ಮಾ ಅಥವಾ ಉಪ್ಪಿಟ್ಟು:

ಓಟ್ಸ್ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು:

1 ಕಪ್ ಓಟ್ಸ್

ಅರಶಿನ ಪುಡಿ

ಹಸಿ ಮೆಣಸಿನಕಾಯಿ

ಸಣ್ಣಗೆ ಹೆಚ್ಚಿದ ಈರುಳ್ಳಿ

ಕ್ಯಾರೆಟ್

ಹಸಿ ಬಟಾಣಿ

ಕ್ಯಾಪ್ಸಿಕಂ

ಕರಿಬೇವು

ಉದ್ದಿನಬೇಳೆ

ಎಣ್ಣೆ

ಸಾಸಿವೆ

ನಿಂಬೆ

ಕೊತ್ತಂಬರಿ ಸೊಪ್ಪು

ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

ಇದನ್ನು ಮಾಡಲು ಬಾಣಲೆಯಲ್ಲಿ 1 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ ಓಟ್ಸ್, ಅರಶಿನ ಪುಡಿ, ಉಪ್ಪು, ಹಸಿ ಮೆಣಸಿನಕಾಯಿ ಹಾಕಿ ಇವೆಲ್ಲವನ್ನು 4 ರಿಂದ 5 ನಿಮಿಷಗಳ ಕಾಲ ಹುರಿಯಿರಿ ಮತ್ತು ಅದಕ್ಕೆ ಸ್ವಲ್ಪ ನೀರು ಸೇರಿಸಿ ಬೇಯಲು ಬಿಡಿ. ಈಗ ಇನ್ನೊಂದು ಬಾಣಲೆಯಲ್ಲಿ 1 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ಬಳಿಕ ಸಾಸಿವೆ, ಉದ್ದಿನಬೇಳೆ, ಕರಿಬೇವು, ಅರಶಿನ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಕ್ಯಾರೆಟ್, ಬಟಾಣಿ ಮತ್ತು ಕ್ಯಾಪ್ಸಿಕಂ ಹಾಕಿ ಬೇಯಲು ಬಿಡಿ. ಎಲ್ಲಾ ತರಕಾರಿಗಳು ಬೆಂದ ನಂತರ ಅದಕ್ಕೆ ಮೊದಲೇ ತಯಾರಿಸಿಟ್ಟ ಓಟ್ಸ್ ಸೇರಿಸಿ, ಅದರ ಮೇಲೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಓಟ್ಸ್ ಉಪ್ಮಾ ತಿನ್ನಲು ಸಿದ್ಧ.

ಇದನ್ನೂ ಓದಿ:ದೇಹಕ್ಕೆ ಯಾವ ರೀತಿಯ ಓಟ್ಸ್ ಉತ್ತಮ? ಅದರ ವಿಧಗಳಾವುವು? ಇಲ್ಲಿದೆ ಮಾಹಿತಿ

ಓಟ್ಸ್ ಇಡ್ಲಿ:

ಬೇಕಾಗುವ ಸಾಮಾಗ್ರಿಗಳು:

ಓಟ್ಸ್ ಹಿಟ್ಟು

ಕ್ಯಾರೆಟ್ ತುರಿ

ಮೊಸರು

ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

ಓಟ್ಸ್ ಇಡ್ಲಿ ಮಾಡಲು 1 ಕಪ್ ಓಟ್ಸ್ ಹಿಟ್ಟು ತೆಗೆದುಕೊಂಡು ಅದಕ್ಕೆ ತುರಿದ ಕ್ಯಾರೆಟ್, ಉಪ್ಪು, ಮೊಸರು, 1 ಚಮಚ ಎಣ್ಣೆಯನ್ನು ಸೇರಿಸಿ ಮೃದುವಾದ ಇಡ್ಲಿ ಹಿಟ್ಟನ್ನು ತಯಾರಿಸಿಕೊಳ್ಳಿ. ಈಗ ಇಡ್ಲಿ ಮಾಡುವ ಪಾತ್ರೆಗೆ ಅಥವಾ ಇಡ್ಲಿ ಪಿಂಗಾಣಿಗೆ ಎಣ್ಣೆ ಸವರಿ ಓಟ್ಸ್ ಇಡ್ಲಿ ಹಿಟ್ಟನ್ನು ಅದಕ್ಕೆ ಸುರಿಯಿರಿ. ಇದನ್ನು ಇಡ್ಲಿಯ ಹಾಗೆ ಹಬೆಯಲ್ಲಿ ಬೇಯಿಸಿ ನಂತರ ತೆಂಗಿಕಾಯಿ ಚಟ್ನಿ ಅಥವಾ ಸಾಂಬರ್ ನೊಂದಿಗೆ ಬಡಿಸಿ.

ಇದನ್ನೂ ಓದಿ:

ಮೊಸರು ಮತ್ತು ಓಟ್ಸ್:

ಮೊಸರು ಓಟ್ಸ್ ಮಾಡಲು ಓಟ್ಸ್ ನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದರ ನೀರನ್ನು ಬಸಿದು, ಓಟ್ಸ್ ನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಅದಕ್ಕೆ ತಾಜಾ ಮೊಸರು ಸೇರಿಸಿ. ಈಗ ನಿಮ್ಮ ರುಚಿಗೆ ತಕ್ಕಂತೆ ಜೇನು ತುಪ್ಪವನ್ನು ಸೇರಿಸಿ ಮತ್ತು ಮಾವು, ಬಾಳೆಹಣ್ಣಿನಂತಹ ಋತುಮಾನದ ಹಣ್ಣುಗಳನ್ನು ಸೇರಿಸಿ. ಅಲ್ಲದೆ ಅದಕ್ಕೆ ನಟ್ಸ್ ಮತ್ತು ಒಣ ಬೀಜಗಳನ್ನು ಹಾಕಿ ಕೂಡಾ ತಿನ್ನಬಹುದು.

ಓಟ್ಸ್ ಪುಡ್ಡಿಂಗ್:

ಓಟ್ಸ್ ಪುಡ್ಡಿಂಗ್ ಮಾಡಲು 1 ಕಪ್ ಓಟ್ಸ್, ಅರ್ಧ ಲೀಟರ್ ಹಾಲು, ನಿಮ್ಮ ಆಯ್ಕೆಯ ಒಣ ಹಣ್ಣುಗಳು ಮತ್ತು ಸಕ್ಕರೆಯನ್ನು ತೆಗೆದುಕೊಳ್ಳಿ. ಪುಡ್ಡಿಂಗ್ ಅಥವಾ ಖೀರ್ ಮಾಡಲು ಮೊದಲು ಓಟ್ಸ್ ನ್ನು ಹುರಿದು ನಂತರ ಹಾಲು ಸೇರಿಸಿ ಅದನ್ನು ಚೆನ್ನಾಗಿ ಬೇಯಿಸಿ, ಓಟ್ಸ್ ಬೆಂದ ನಂತರ ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಸೇರಿಸಿ. ನಂತರ ಫ್ರಿಡ್ಜ್ ನಲ್ಲಿಟ್ಟು ತಿನ್ನಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Thu, 10 August 23

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!