Kitchen Hacks : ಕೊತ್ತಂಬರಿ ಸೊಪ್ಪು ಬೇಗನೇ ಕೊಳೆತು ಹೋಗುತ್ತಾ? ಹಾಗಾದ್ರೆ ಈ ಸಲಹೆ ಪಾಲಿಸಿ

ಮನೆಯಲ್ಲಿ ಯಾವುದೇ ಅಡುಗೆ ತಯಾರಿಸಲಿ, ಅದರ ಘಮ ಹೆಚ್ಚಿಸಲು ಕೊತ್ತಂಬರಿ ಸೊಪ್ಪು ಇರಲೇಬೇಕು. ಈ ಮಾಂಸದ ಅಡುಗೆಗೆ ಈ ಸೊಪ್ಪನ್ನು ಹಾಕಿದರೆ ರುಚಿಯೊಂದಿಗೆ ಪರಿಮಳವು ಹೆಚ್ಚಾಗುತ್ತದೆ. ಹಸಿರು ಬಣ್ಣದ ತಾಜಾ ಕೊತ್ತಂಬರಿ ಸೊಪ್ಪನ್ನು ಹಾಗೆಯೇ ಇಟ್ಟರೆ ಬೇಗನೇ ಕೊಳೆತು ಹೋಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಂದ ಕೊತ್ತಂಬರಿ ಸೊಪ್ಪು ತಾಜಾವಾಗಿರಿಸಲು ಈ ಕೆಳಗಿನ ಸಲಹೆಗಳನ್ನು ಆದಷ್ಟು ತಪ್ಪಿಸಿ.

Kitchen Hacks : ಕೊತ್ತಂಬರಿ ಸೊಪ್ಪು ಬೇಗನೇ ಕೊಳೆತು ಹೋಗುತ್ತಾ? ಹಾಗಾದ್ರೆ ಈ ಸಲಹೆ ಪಾಲಿಸಿ
Follow us
| Updated By: ಅಕ್ಷತಾ ವರ್ಕಾಡಿ

Updated on: Oct 16, 2024 | 3:44 PM

ಭಾರತೀಯ ಪಾಕಪದ್ಧತಿಯಲ್ಲಿ ಆಹಾರದ ಘಮ ಹಾಗೂ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ ಸೂಪ್‌, ಸಲಾಡ್, ರಸಂ, ಚಟ್ನಿ, ದಾಲ್ ಹೀಗೆ ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಘಮ, ಬಣ್ಣ ಹಾಗೂ ರುಚಿಯಿಂದಾಗಿ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ಆದರೆ ಈ ಸೊಪ್ಪು ಎರಡು ಮೂರು ದಿನಕ್ಕಿಂತ ಹೆಚ್ಚು ಹಾಗೆಯೇ ಬಿಟ್ಟರೆ ಹಾಳಾಗಿ ಬಿಡುತ್ತದೆ. ಇದನ್ನು ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ. ಎಷ್ಟೋ ಬಾರಿ ಹಾಳಾದ ಕೊತ್ತಂಬರಿ ಸೊಪ್ಪನ್ನೆಲ್ಲಾ ಎಸೆಯುತ್ತೇವೆ. ಆದರೆ ಈ ಕೆಲವು ಟಿಪ್ಸ್ ಬಗ್ಗೆ ತಿಳಿದಿದ್ದರೆ ಇದನ್ನು ಫ್ರೆಶ್ ಆಗಿರಿಸಿಕೊಳ್ಳಬಹುದು.

  1. ತಾಜಾ ವಾಸನೆ ಮತ್ತು ತಿಳಿ ಹಸಿರು ಮತ್ತು ಸಣ್ಣ ಎಲೆಗಳನ್ನು ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಖರೀದಿಸಿದರೆ ಇದನ್ನು ಹೆಚ್ಚು ಕಾಲ ತಾಜಾವಾಗಿಡಬಹುದು.
  2. ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿರಿಸಲು ಅದರ ಬೇರನ್ನು ಕತ್ತರಿಸಿ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆಯಲ್ಲಿ ಬೆರೆಸಿದ ಐಸ್ ಟ್ರೇಯಲ್ಲಿ ಸಂಗ್ರಹಿಸಿಟ್ಟರೆ ಹಾಳಾಗುವುದಿಲ್ಲ.
  3. ತಾಜಾ ಕೊತ್ತಂಬರಿ ಸೊಪ್ಪಿನಿಂದ ಬೇರು ಹಾಗೂ ಹಳದಿ ಎಲೆಗಳನ್ನು ತೆಗೆದುಹಾಕಬೇಕು. ಆ ಬಳಿಕ ಒಂದು ಪಾತ್ರೆಯಲ್ಲಿ ನೀರು ಮತ್ತು ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ, ಈ ಸೊಪ್ಪನ್ನು 30 ನಿಮಿಷಗಳ ಕಾಲ ನೆನೆಸಿಡಬೇಕು. ಆ ಬಳಿಕ ನೀರು ಆರಲು ಬಿಟ್ಟು ಡಬ್ಬಿಯಲ್ಲಿ ಹಾಕಿ ಮುಚ್ಚಿಡಿ. ಆ ಡಬ್ಬವನ್ನು ಫ್ರಿಜ್ ನಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.
  4. ಕೊತ್ತಂಬರಿ ಸೊಪ್ಪಿನ ಬೇರನ್ನು ಕತ್ತರಿಸಿ ಪ್ರತ್ಯೇಕಿಸಿ, ಹಳದಿ ಎಲೆಗಳನ್ನು ತೆಗೆದುಹಾಕಬೇಕು. ಆ ಬಳಿಕ ಗಾಳಿಯಾಡದ ಬಿಗಿಯಾದ ಪಾತ್ರೆಯಲ್ಲಿ ಮುಚ್ಚಿ, ಫ್ರಿಜ್‌ನಲ್ಲಿ ಇರಿಸಿದರೆ ತಾಜಾವಾಗಿರುತ್ತದೆ.
  5. ಕೊತ್ತಂಬರಿಯನ್ನು ತಾಜಾವಾಗಿಡಲು, ಒಂದು ಗಾಜಿನ ಜಾರ್ ನಲ್ಲಿ ನೀರು ತುಂಬಿ, ಸೊಪ್ಪಿನ ಕಾಂಡವು ನೀರಿಗೆ ತಾಕುತ್ತಿರಲಿ. ಆ ನೀರಿಗೆ ಪಾಲಿಥಿನ್ ಅನ್ನು ಹಾಕಿದರೆ ಸೊಪ್ಪು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ
ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ