AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?

ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಹೊಳೆಯುವಂತೆ ಮಾಡಲು, ಸಾಧ್ಯವಾದಷ್ಟೂ ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮವನ್ನು ತೇವವಾಗಿಡುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ? ತಜ್ಞರು ಏನು ಹೇಳ್ತಾರೆ ಗೊತ್ತಾ?
ಹೊಳೆಯುವ ಚರ್ಮಕ್ಕಾಗಿ.. ಪದೆ ಪದೇ ಮುಖ ತೊಳೆಯುವ ಅಭ್ಯಾಸ ನಿಮಗಿದೆಯೇ?
ಸಾಧು ಶ್ರೀನಾಥ್​
|

Updated on: Feb 16, 2024 | 2:00 PM

Share

ಬೇಸಿಗೆ ಕಾಲ ಸದ್ದಿಲ್ಲದೆ ಕಾಲೂರುತ್ತಿದೆ.. ಅಂದರೆ ಹೊರಗೆ ಹೆಜ್ಜೆಯಿಟ್ಟರೆ ಬಿರುಬಿಸಿಲು ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮುಖಾರವಿಂದ, ಚರ್ಮದ ಬಗ್ಗೆ ವಿಶೇಷ ಕಾಳಜಿಯ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಸೂರ್ಯನ ಬೆಳಕು, ಶಾಖವು ಚರ್ಮದ ಮೇಲೆ ಬಿದ್ದು ಕೆಲ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬೇಸಿಗೆಯಲ್ಲಿ ಸುಕ್ಕುಗಟ್ಟಿದ, ಕಳೆಗುಂದಿದ ಮುಖವನ್ನು ತಾಜಾ ಆಗಿ ಇಡುವುದು ದುಸ್ತರವೇ ಸರಿ. ಕೆಲವರಿಗೆ ದಿನಕ್ಕೆ ಹಲವಾರು ಬಾರಿ ಮುಖವನ್ನು ಉಜ್ಜುವುದು ಅಭ್ಯಾಸವಾಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಮುಖವನ್ನು ಉಜ್ಜಿದರೆ ಶೆಖೆಯಿಂದ ಮುಕ್ತಿ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ನಿಮ್ಮ ಮುಖವನ್ನು ಉಜ್ಜಿದಷ್ಟೂ ( Face Wash) ನಿಮ್ಮ ಮುಖ ಅರಳುತ್ತದೆ ಎಂದು ಪರಿಭಾವಿಸಿರುತ್ತೀರಿ. ಆದರೆ, ಹೀಗೆ ಮಾಡುವುದು ಕೆಲವೊಮ್ಮೆ ಚರ್ಮಕ್ಕೆ ಹಾನಿಕಾರಕ. ಹಾಗಾದರೆ ದಿನಕ್ಕೆ ಎಷ್ಟು ಬಾರಿ ಮುಖವನ್ನು ತೊಳೆಯಬೇಕು ಎಂಬುದನ್ನು ಕಂಡುಕೊಳ್ಳೋಣ (Dry Face).

ದಿನದಲ್ಲಿ ಮುಖವನ್ನು ಎಷ್ಟು ಬಾರಿ ತೊಳೆಯಬೇಕು?

ಬೆಳಗ್ಗೆ ಎದ್ದಾಗ ಮೊದಲು ಮುಖವನ್ನು ಸ್ಕ್ರಬ್ ಮಾಡಿ. ಇದು ನಿದ್ರಾವಸ್ಥೆಯನ್ನು ನೀಗುವುದರ ಜೊತೆಗೆ, ನಿಮ್ಮ ಮೈಮನ ತಕ್ಷಣವೇ ಉಲ್ಲಾಸಗೊಳ್ಳುತ್ತದೆ. ಮುಖವನ್ನು ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಸೂಕ್ಷ್ಮ ರಂಧ್ರಗಳು ತೆರವುಗೊಳ್ಳುತ್ತವೆ. ಸೌಮ್ಯವಾದ ಫೇಸ್ ವಾಶ್ ಜೊತೆಗೆ ಸಾಮಾನ್ಯ ನೀರಿನಿಂದ ನಿಮ್ಮ ಮುಖವನ್ನು ಸ್ಕ್ರಬ್ ಮಾಡಲು ಮರೆಯದಿರಿ.

ನಿಮ್ಮ ಚರ್ಮವು ಗಡುಸಾಗಿ, ಜಿಡ್ಡುಗಟ್ಟಿದ್ದರೆ ಮಧ್ಯಾಹ್ನ ಒಮ್ಮೆ ಮುಖವನ್ನು ಸ್ಕ್ರಬ್ ಮಾಡಬಹುದು. ಜಿಡ್ಡು ಚರ್ಮ ಹೊಂದಿರುವವರು ವೈದ್ಯರ ಸಲಹೆಯಂತೆ ಸೋಪು ಅಥವಾ ಫೇಸ್ ವಾಶ್ ಬಳಸಬೇಕು. ಬೆಳಿಗ್ಗೆ ಮುಖವನ್ನು ಸ್ಕ್ರಬ್ ಮಾಡಿದ ನಂತರ, ಜಿಡ್ಡು ತ್ವಚೆ ಹೊಂದಿರುವ ಜನರ ಮುಖದ ಮೇಲೆ ಮಧ್ಯಾಹ್ನದ ನಂತರ ಎಣ್ಣೆಯು ಸಂಗ್ರಹವಾಗುತ್ತದೆ. ಆದ್ದರಿಂದ, ಅವರು ತಮ್ಮ ಮುಖವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಬಹುದು ಅಥವಾ ಮಧ್ಯಾಹ್ನದ ನಂತರವೂ ಫೇಸ್ ವಾಶ್ ಮಾಡಬಹುದು. Also Read: ಯಾವ ರಾಶಿಯವರು ತುಂಬಾ ಜಗಳವಾಡುತ್ತಾರೆ? ಯಾವ ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಗೊತ್ತಾ?

ನೀವು ಕೆಲಸದಿಂದ ಮನೆಗೆ ವಾಪಸಾದಾಗ ನಿಮ್ಮ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ಕಾರಣದಿಂದಾಗಿ, ದೈನಂದಿನ ಆಯಾಸ ದೂರವಾಗುತ್ತದೆ. ಮುಖದಲ್ಲಿರುವ ಕೊಳಕು ಕೂಡ ನಿವಾರಣೆಯಾಗುತ್ತದೆ. ಕೆಲವರು ಬೇಸಿಗೆ ಕಾಲದಲ್ಲಿ ಸಂಜೆ ವೇಳೆಯೂ ಸ್ನಾನ ಮಾಡುತ್ತಾರೆ. ನಿಮಗೆ ಅದು ಸಾಧ್ಯವಾಗದಿದ್ದರೆ, ದಿನಕ್ಕೆ ಒಮ್ಮೆಯಾದರೂ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ.

ಆದರೆ, ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಹೊಳೆಯುವಂತೆ ಮಾಡಲು, ಸಾಧ್ಯವಾದಷ್ಟೂ ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮವನ್ನು ತೇವವಾಗಿಡುತ್ತದೆ.

Also Read: ಹೀರೆಕಾಯಿಯಲ್ಲಿ ನೀರಿನಾಂಶ, ನಾರಿನಂಶ ಜೊತೆಗೆ ಅನೇಕ ಪೋಷಕಾಂಶಗಳೂ ಇವೆ!

ಪ್ರತಿದಿನ ನಿಮ್ಮ ಆಹಾರದಲ್ಲಿ ತಾಜಾ ರಸವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಹೊಳೆಯುತ್ತಾ ಇರುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ಕ್ಯಾರೆಟ್, ಸೌತೆಕಾಯ, ಪಪ್ಪಾಯಿ, ದಾಳಿಂಬೆ, ಕಲ್ಲಂಗಡಿ, ಮೂಸಂಬಿ, ಕಿತ್ತಳೆ ಮುಂತಾದವುಗಳನ್ನು ಸೇವಿಸುವುದರಿಂದ ಮುಖವನ್ನು ತಾಜಾ ಆಗಿ, ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು