Methi Thepla: ಬೆಳಗ್ಗಿನ ಉಪಹಾರಕ್ಕೆ ಉತ್ತಮ ಈ ಮಲ್ಟಿಗ್ರೇನ್ ಮೇಥಿ ಥೆಪ್ಲಾ

ಹೆಸರೇ ಸೂಚಿಸುವಂತೆ ಈ ಥೆಪ್ಲಾವನ್ನು ರಾಗಿ,ಬೇಳೆ, ಇತರ ಧಾನ್ಯಗಳ ಹಿಟ್ಟನ್ನು ಸೇರಿಸಿಕೊಂಡು ತಯಾರಿಸಲಾಗುತ್ತದೆ. ಈ ಥೇಪ್ಲಾ ಗುಜರಾತಿ ಶೈಲಿಯ ಪಾಕವಿಧಾನವಾಗಿದೆ.

Methi Thepla: ಬೆಳಗ್ಗಿನ ಉಪಹಾರಕ್ಕೆ ಉತ್ತಮ ಈ ಮಲ್ಟಿಗ್ರೇನ್ ಮೇಥಿ ಥೆಪ್ಲಾ
ಸಾಂದರ್ಭಿಕ ಚಿತ್ರImage Credit source: iStock
Follow us
| Updated By: ಅಕ್ಷತಾ ವರ್ಕಾಡಿ

Updated on: Jan 07, 2023 | 3:57 PM

ಭಾರತೀಯ ಉಪಹಾರ(Breakfast) ಪಾಕವಿಧಾನಗಳಲ್ಲಿ ಹಲವಾರು ಬಗೆಗಳಿವೆ. ಉತ್ತರ ಭಾರತೀಯರು ಪರಾಠವನ್ನು ಇಷ್ಟಪಟ್ಟರೆ ದಕ್ಷಿಣ ಭಾರತೀಯರು ಉಪ್ಮಾ, ಇಡ್ಲಿಗೆ ಆದ್ಯತೆ ನೀಡುತ್ತಾರೆ. ಮುಂಬೈನವರು ಕೀಮಾ ಪಾವ್, ವಡಾ ಪಾವ್ ಮತ್ತು ಹೆಚ್ಚಿನದನ್ನು ತಿನ್ನುತ್ತಾರೆ. ಗುಜರಾತಿಯನ್ನರು ಉಪಹಾರಕ್ಕೆ ಹೆಚ್ಚಾಗಿ ಥೇಪ್ಲಾವನ್ನು ತಿನ್ನುತ್ತಾರೆ. ಹೆಸರೇ ಸೂಚಿಸುವಂತೆ ಈ ಥೆಪ್ಲಾವನ್ನು ರಾಗಿ,ಬೇಳೆ, ಇತರ ಧಾನ್ಯಗಳ ಹಿಟ್ಟನ್ನು ಸೇರಿಸಿಕೊಂಡು ತಯಾರಿಸಲಾಗುತ್ತದೆ. ಈ ಥೇಪ್ಲಾ ಗುಜರಾತಿ ಶೈಲಿಯ ಪಾಕವಿಧಾನವಾಗಿದೆ. ಈ ಜನಪ್ರಿಯ ಸಾಂಪ್ರದಾಯಿಕ ಉಪಹಾರವನ್ನು ಹಲವಾರು ಹಿಟ್ಟುಗಳು, ಮಸಾಲೆ ಪದಾರ್ಥಗಳು, ಮೊಸರು ಮತ್ತು ನೀರನ್ನು ಬೆರೆಸಿ ತಯಾರಿಸಲಾಗುತ್ತದೆ. ಇಂದು ನಿಮಗೆ ಈ ಮಲ್ಟಿಗ್ರೇನ್ ಥೆಪ್ಲಾದ ಪಾಕವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಉಪಹಾರದ ಹೊರತಾಗಿ ಟೀ-ಟೈಮ್ ಸ್ನಾಕ್ ಆಗಿ ಕೂಡ ಈ ರೆಸಿಪಿಯನ್ನು ಮಾಡಬಹುದು.

ಇದನ್ನೂ ಓದಿ: ನೆನೆಸಿದ ಹಸಿ ಬಾದಾಮಿಯನ್ನು ತಿನ್ನುವುದು ನಿಜವಾಗಿಯೂ ಪ್ರಯೋಜನಕಾರಿಯೇ ಅಥವಾ ಇಲ್ಲವೇ? ತಿಳಿಯಿರಿ

ಮಲ್ಟಿಗ್ರೇನ್ ಥೆಪ್ಲಾ ರೆಸಿಪಿ:

ಎಲ್ಲಾ ವಿಧದ ಹಿಟ್ಟುಗಳನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಇದಕ್ಕೆ ಮೊಸರು, ಸ್ವಲ್ಪ ಎಣ್ಣೆ ಮತ್ತು ಮಸಾಲೆಗನ್ನು ಸೇರಿಸಿ ಮಿಶ್ರಣ ಮಾಡಿ. ಇದಾದ ಬಳಿಕ ಅಗತ್ಯವಿರುವಷ್ಟು ನೀರು ಬೆರೆಸಿ ಮತ್ತೊಮ್ಮೆ ಹಿಟ್ಟನ್ನು ಚೆನ್ನಾಗಿ ಬೆರೆಸಿ ಪಕ್ಕಕ್ಕೆ ಇಟ್ಟುಬಿಡಿ.ಸ್ವಲ್ಪ ಸಮಯದ ನಂತರ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಚಪಾತಿಯ ಹದಕ್ಕೆ ಲಟ್ಟಿಸಿಕೊಳ್ಳಿ. ನಂತರ ಕಾದ ತವಾದ ಮೇಲೆ ಸ್ವಲ್ಪ ಎಣ್ನೆಯನ್ನು ಹಾಕಿ ಅದನ್ನು ಗರಿ ಗರಿ ಆಗುವವರೆಗೆ ಬೇಯಿಸಿಕೊಳ್ಳಿ.

ಪರಾಠವನ್ನು ತಯಾರಿಸುವ ರೀತಿಯಲ್ಲೇ ಇದನ್ನು ತಯಾರಿಸಬಹುದು. ನೀವು ಕೂಡಾ ಬೆಳಗ್ಗಿನ ಉಪಹಾರಕ್ಕೆ ಈ ಆರೋಗ್ಯಕರ ಸಿಂಪಲ್ ರೆಸಿಪಿಯನ್ನು ತಯಾರಿಸಿ. ಕೇವಲ 10 ನಿಮಿಷಗಳಲ್ಲಿ ನೀವು ಈ ಥೆಪ್ಲಾವನ್ನು ತಯಾರಿಸಬಹುದಾಗಿದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​