AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lifestyle: ಬೆಳಗ್ಗಿನ ವಾಕಿಂಗ್​​ಗಿಂತ ರಾತ್ರಿ ನಡಿಗೆಯೇ ಆರೋಗ್ಯಕ್ಕೆ ಉತ್ತಮ

ಬೆಳಗ್ಗಿನ ನಡಿಗೆಗಿಂತ ರಾತ್ರಿಯ ನಡಿಗೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗ ಎನ್ನುತ್ತಾರೆ ವೈದ್ಯರು. ಹೌದು, ರಾತ್ರಿ ಊಟದ ನಂತರ 15 ನಿಮಿಷಗಳ ಕಾಲವಾದರೂ ಅರಾಮದಾಯಕ ನಡಿಗೆಯನ್ನು ಮಾಡಬೇಕು

Lifestyle: ಬೆಳಗ್ಗಿನ ವಾಕಿಂಗ್​​ಗಿಂತ ರಾತ್ರಿ ನಡಿಗೆಯೇ ಆರೋಗ್ಯಕ್ಕೆ ಉತ್ತಮ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 26, 2021 | 3:04 PM

Share

ಬದಲಾದ ಜೀವನಶೈಲಿಯಲ್ಲಿ ಕುಳಿತಲ್ಲೇ ಕುಳಿತು ಕೆಲಸ ಮಾಡಿ ದೇಹದಲ್ಲಿ ಬೊಜ್ಜು ತುಂಬಿರುತ್ತದೆ. ದೇಹಕ್ಕೆ ಜಡ ಹಿಡಿದು ಆಲಸ್ಯ ತುಂಬಿಕೊಂಡಿರುತ್ತದೆ. ಹೀಗಾಗಿ ನಿಮಗೆ ನಡಿಗೆ ಈ ರೀತಿಯ ಸಮಸ್ಯೆಗೆ ಪರಿಹಾರವಾಗಿದೆ. ದೇಹದ ತೂಕ ಇಳಿಸಿಕೊಳ್ಳಲು, ಗ್ಯಾಸ್ಟ್ರಿಕ್​ ಅಥವಾ ಆಸಿಡಿಟಿ ಸಮಸ್ಯೆಗಳಿಗೂ ನಡಿಗೆ ಪರಿಹಾರವಾಗಿದೆ. ಚಳಿಗಾಲದಲ್ಲಿ ನೀವು ನಡೆಯುವುದರಿಂದ ನಿಮ್ಮ ದೇಹ ಬಿಸಿಯಾಗಿ ಚಳಿಯಿಂದ ನಡುಗುವುದೂ ಕಡಿಮೆಯಾಗುತ್ತದೆ. ಅದರಲ್ಲೂ ಬೆಳಗ್ಗಿನ ನಡಿಗೆಗಿಂತ ರಾತ್ರಿಯ ನಡಿಗೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗ ಎನ್ನುತ್ತಾರೆ ವೈದ್ಯರು. ಹೌದು, ರಾತ್ರಿ ಊಟದ ನಂತರ 15 ನಿಮಿಷಗಳ ಕಾಲವಾದರೂ ಅರಾಮದಾಯಕ ನಡಿಗೆಯನ್ನು ಮಾಡಬೇಕು. ಇದರಿಂದ ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್​ ಕರಗುತ್ತದೆ. ಸಾಮಾನ್ಯಾವಾಗಿ ನಾವೆಲ್ಲರೂ ಸೇವಿಸುವ ಅನ್ನ, ಚಪಾತಿಯಂತಹ ಆಹಾರಗಳು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿವೆ, ಅಲ್ಲದೆ ರುಚಿಗಾಗಿ ಸೇರಿಸುವ ಮಸಾಲೆಗಳು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಪ್ರತಿದಿನ 15 ನಿಮಿಷವಾದರೂ ವಾಕ್​ಗೆ ಹೋಗುವುದು. ರಾತ್ರಿಯ ನಡಿಗೆಯಿಂದ ದೇಹದಲ್ಲಿ ಶೇಖರಣೆಯಾದ ಕೊಲೆಸ್ಟ್ರಾಲ್​, ಕೊಬ್ಬು ಕರಗುತ್ತದೆ. ದೇಹದಲ್ಲಿ ಉಳಿದ ಕೊಲೆಸ್ಟ್ರಾಲ್​ ನಿಮ್ಮ ಹೃದಯಕ್ಕೂ ಅಪಾಯ ತಂದೊಡ್ಡಬಹುದು.  ಆದರೆ ನೆನಪಿಡಿ ಊಟವಾದ ತಕ್ಷಣ ನಡೆಯಬೇಡಿ ಇದು ನಿಮಗೆ ವಾಂತಿ ಅಥವಾ ತಲೆ ಸುತ್ತು ತರಿಸಬಹುದು. ಊಟದ ಬಳಿಕ ಒಂದೈದು ನಿಮಿಷ ಕುಳಿತುಕೊಂಡು ನಂತರ ನಡೆಯಿರಿ. ರಾತ್ರಿ ನಡಿಗೆ ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಅಧಿಕ ಕ್ಯಾಲೋರಿಗಳನ್ನು ಬರ್ನ್​ ಮಾಡುತ್ತದೆ. ಹೀಗಾಗಿ ಪ್ರತಿದಿನ ರಾತ್ರಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ.

ಬೆಳಗ್ಗಿನ ನಡಿಗೆಯಿಂದ ಕೂಡ ಆರೋಗ್ಯಕ್ಕೆ ಹೆಚ್ಚಿನ ಲಾಭವೇ ಇದೆ. ಬೆಳಗ್ಗಿನ ತಂಪು ವಾತಾವರಣ, ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್​ ಡಿ, ತಾಜಾ ಗಾಳಿ ಎಲ್ಲವೂ ದಿನದ ಆರಂಭಕ್ಕೆ ಹೊಸ ಹುರುಪು ನೀಡುತ್ತದೆ. ಹೀಗಾಗಿ ನಿಮ್ಮ ನಡಿಗೆಯ ಅಭ್ಯಾಸ  ಯಾವ ಸಮಯದಲ್ಲಿ ಇಟ್ಟುಕೊಳ್ಳುತ್ತೀರಿ ಎನ್ನುವುದನ್ನು ನಿರ್ದರಿಸಿಕೊಳ್ಳಿ. ಆದರೆ ತಜ್ಞರ ಪ್ರಕಾರ ರಾತ್ರಿ ನಡಿಗೆ ಆರೋಗ್ಯಕ್ಕೆ, ದೇಹದ ತೂಕ ಇಳಿಕೆ ಹಾಗೂ ಅತಿಯಾದ ಕೊಲೆಸ್ಟ್ರಾಲ್​ ನಿವಾರಣೆಗೆ ಉತ್ತಮವಾಗಿದೆ. ಅಲ್ಲದೆ  ನೀವು ರಾತ್ರಿ ನಡಿಗೆಯನ್ನು ಮಾಡುವುದರಿಂದ ಬೆಳಗ್ಗಿನ ಹಾಗೆ ದಿನದ ಆರಂಭದಲ್ಲಿ ಇರುವ ರೀತಿ ಜಂಜಾಟಗಳಿರುವುದಿಲ್ಲ. ದಿನದ ಎಲ್ಲಾ ಕೆಲಸವನ್ನು ಮುಗಿಸಿ ನೆಮ್ಮದಿಯಾಗಿ ವಾಕ್​ ಮಾಡಬಹುದು.

ವಾಕಿಂಗ್​ ಮಾಡುವುದರಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು ಹೌದು ವಾಕಿಂಗ್​ ನಿಮ್ಮ ಮನಸ್ಥಿಯ ಮೇಲೂ ಪರಿಣಾಮ ಬೀರುತ್ತದೆ. ಪ್ರತಿದಿನ ನೀವು ವಾಕಿಂಗ್​ ಅಭ್ಯಾಸ ಮಾಡಿಕೊಂಡರೆ ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಎಷ್ಟೇ ಚಿಂತಿತರಾಗಿದ್ದರೂ ದಿನದ ಅಂತ್ಯದಲ್ಲಿ ತಂಪನೆಯ, ನಿಶ್ಯಬ್ದ ವಾತಾವರಣದಲ್ಲಿ ನಡೆದಾಡಿದರೆ ನೆಮ್ಎಮದಿಯ ಭಾವ ಮೂಡುವುದು ಸುಳ್ಳಲ್ಲ.

ಇದನ್ನೂ ಓದಿ:

Gardening Tips: ಅನಿವಾರ್ಯವಾಗಿ ಮನೆ ಬಿಟ್ಟು ತೆರಳಬೇಕಾದಾಗ ಗಿಡಗಳಿಗೆ ನೀರುಣಿಸುವುದು ಹೇಗೆ?; ಸುಲಭದ ವಿಧಾನಗಳು ಇಲ್ಲಿವೆ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ